Breaking News

ಬಂಗಾಳ ರಾಜಕೀಯದಲ್ಲಿ ದಾದಾಗಿರಿ ಆರಂಭ..?ಬಂಗಾಳ ಸಿಎಂ ಆಗ್ತಾರಾ ಗಂಗೂಲಿ..?

Spread the love

ನವದೆಹಲಿ, ಆ.26- ಭಾರತ ಕ್ರಿಕೆಟ್ ತಂಡದ ದಾದಾ ಎಂದೇ ಹೆಸರಾಗಿದ್ದ ಮಾಜಿ ಕ್ಯಾಪ್ಟನ್, ಬಿಸಿಸಿಐ ಅಧ್ಯಕ್ಷ ಸೌರವ್‍ಗಂಗೂಲಿ ಈಗ ರಾಜಕೀಯ ರಂಗದಲ್ಲೂ ತಮ್ಮ ದಾದಾಗಿರಿಯನ್ನು ಆರಂಭಿಸಲು ಹೊರಟಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹಬ್ಬುತ್ತಿದೆ.

ಸೌರವ್‍ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಲು ಕೇಂದ್ರ ಗೃಹ ಮಂತ್ರಿ ಅಮಿತ್‍ಷಾ ಅವರೇ ಕಾರಣ ಎಂದು ಹೇಳಲಾಗುತ್ತಿದೆ, ಅಲ್ಲದೆ ಬಿಸಿಸಿಐ ಕಾರ್ಯದರ್ಶಿಯಾಗಿರುವ ಜೈಷಾ, ಅಮಿತ್‍ಷಾರ ಪುತ್ರನಾಗಿದ್ದು, ಸೌರವ್ ಹಾಗೂ ಜೈಷಾ ನಡುವೆ ಉತ್ತಮ ಹೊಂದಾಣಿಕೆ ಇರುವುದರಿಂದ ಅವರ ಮೂಲಕವೇ ದಾದಾನನ್ನು ರಾಜಕೀಯ ಕರೆ ತರಲು ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದೆ.

ಇತ್ತೀಚೆಗೆ ಸೌರವ್ ಗಂಗೂಲಿ ಅವರ ನಡೆಯನ್ನು ಗಮನಿಸಿದರೆ ಅವರು ರಾಜಕೀಯ ಪ್ರವೇಶಿಸುವುದು ಬಹುತೇಕ ನಿಶ್ಚಯವಾಗಿದ್ದು ಸೌರವ್‍ಗೆ ಬಿಜೆಪಿಯ ಸಿದ್ಧಾಂತಗಳ ಬಗ್ಗೆ ಹೆಚ್ಚು ಒಲವು ಇರುವುದರಿಂದ ಮುಂಬರುವ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೌರವ್ ಅಖಾಡಕ್ಕಿಳಿಯಲಿದ್ದಾರಾ ಎಂಬ ಮುನ್ಸೂಚನೆಗಳು ಕಂಡುಬರುತ್ತಿವೆ.

# ಬಂಗಾಳ ಸಿಎಂ ಆಗ್ತಾರಾ ಗಂಗೂಲಿ..?
ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಹವಾ ತಗ್ಗಿಸಲು ಬಿಜೆಪಿ ಹೊಸ ನಾಯಕನ ಅನ್ವೇಷಣೆಯಲ್ಲಿದ್ದು, ಮಮತಾರನ್ನು ಮಣಿಸಲು ಬಿಸಿಸಿಐ ಅಧ್ಯಕ್ಷ ಸೌರವ್‍ಗಂಗೂಲಿಯೇ ಸೂಕ್ತ ಎಂದು ಬಿಜೆಪಿ ಮುಖಂಡರು ಲೆಕ್ಕಾ ಚಾರ ಹಾಕಿದ್ದಾರೆ.


Spread the love

About Laxminews 24x7

Check Also

ಹುಬ್ಬಳ್ಳಿ ಧಾರವಾಡ ಪಾಲಿಕೆಯಿಂದ ಪರಿಸರ ಸ್ನೇಹಿ ಗಣೇಶ ಅಭಿಯಾನ: ವಿಜೇತರಿಗೆ ಸಿಗಲಿದೆ ಬಹುಮಾನ

Spread the loveಹುಬ್ಬಳ್ಳಿ, ಆಗಸ್ಟ್​ 26: ರಾಜ್ಯ ಸರ್ಕಾರ ಪಿಓಪಿ ಗಣೇಶ (POP Ganesha) ಮೂರ್ತಿಗಳನ್ನು ನಿಷೇಧಿಸಿದ್ದು, ಪರಿಸರ ಸ್ನೇಹಿ ಗಣೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ