Breaking News

ತರಕಾರಿ ತೆಗೆದುಕೊಳ್ಳಲು ಎಂದು ಬರುತ್ತಿದ್ದಾತ ಅಂಗಡಿಯಾಕೆಗೇ ನಾನ್​ವೆಜ್ ಮೆಸೇಜ್ ಕಳಿಸಿದ ಆರೋಪಿ.

Spread the love

ಬೆಂಗಳೂರು: ತರಕಾರಿ ತೆಗೆದುಕೊಳ್ಳಲು ಎಂದು ಬರುತ್ತಿದ್ದಾತ ಅಂಗಡಿಯಾಕೆಗೇ ನಾನ್​ವೆಜ್ ಮೆಸೇಜ್ ಕಳಿಸಿದ್ದರ ಪರಿಣಾಮವಾಗಿ ಈಗ ಪೊಲೀಸರಿಂದ ಬಂಧಿತನಾಗಿದ್ದಾನೆ. ಮಾರುತಿ ಎಂಬಾತ ಬಂಧಿತ ಆರೋಪಿ.

ಈತ ಮಂಜುನಾಥನಗರದಲ್ಲಿರುವ ಮಹಿಳೆಯೊಬ್ಬರ ದಿನಸಿ ಹಾಗೂ ತರಕಾರಿ ಅಂಗಡಿಗೆ ಆಗಾಗ ಖರೀದಿಗೆ ಬರುತ್ತಿದ್ದ.

ಈ ಸಂದರ್ಭದಲ್ಲಿ ಮಹಿಳೆಯನ್ನು ಪರಿಚಯ ಮಾಡಿಕೊಂಡು, ಮೊಬೈಲ್​ಫೋನ್​ ನಂಬರ್ ಪಡೆದುಕೊಂಡಿದ್ದ.

ಮಾತ್ರವಲ್ಲ, ಬಳಿಕ ಸಲುಗೆ ಬೆಳೆಸಿಕೊಂಡಿದ್ದ ಈತ ಆಕೆಗೆ ಅಶ್ಲೀಲ ಚಿತ್ರ ಹಾಗೂ ಆಕ್ಷೇಪಾರ್ಹ ಮೆಸೇಜ್​ಗಳನ್ನು ಕಳುಹಿಸಿ ತೊಂದರೆ ಕೊಡುತ್ತಿದ್ದ. ಈ ಸಂಬಂಧವಾಗಿ ಮಹಿಳೆ ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದು, ಅವರು ಆರೋಪಿ ಮಾರುತಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ