ಗರದ ಮರಾಠಾ ಕಾಲೋನಿಯಲ್ಲಿ 200 ಕ್ಕೂ ಅಧಿಕ ಜನರನ್ನು ಸೇರಿಸಿ ಮತಾಂತರ ಮಾಡಲು ಎತ್ನಿಸುತ್ತಿದ್ದಾರೆಂದು ಆರೋಪಿಸಿ ಹಿಂದೂ ಪರ ಕಾರ್ಯಕರ್ತರು ಮತಾಂತರ ನಡೆಸುತ್ತಿದ್ದರು ಎನ್ನಲಾದ ಕಟ್ಟಡಕ್ಕೆ ಮುತ್ತಿಗೆ ಹಾಕಿದ್ದಾರೆ. ಈ ಸಭೆಗೆ ಬೆಳಗಾವಿ ಗ್ರಾಮೀಣ ಭಾಗದಿಂದ ಹಲವಾರು ಜನರು ಆಗಮಿಸಿದ್ದರು. ಇನ್ನು ಪ್ರತಿ ರವಿವಾರ ಇದೇ ಕಟ್ಟಡದಲ್ಲಿ ಹಲವಾರು ಜನರನ್ನು ಸೇರಿಸಿ ಸಭೆ ನಡೆಸಿ ಮತಾಂತರ ಮಾಡುತ್ತಿದ್ದಾರೆನ್ನುವ ಮಾಹಿತಿ ಮೇರೆಗೆ ಹಿಂದೂ ಪರ ಕಾರ್ಯಕರ್ತರು ಸಭೆ ನಡೆಯುತ್ತಿದ್ದ ಕಟ್ಟಡಕಗ್ಕೆ ಮುತ್ತಿಗೆ ಹಾಕಿದರು.
ಈ ವೇಳೆ ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದ ಕ್ರಿಶ್ಚಿಯನ್ ಪಾಸ್ಟರ್ನ್ನು ಹಿಂದೂ ಪರ ಕಾರ್ಯಕರ್ತರು ತೀವೃ ತರಾಟೆಗೆ ತೆಗೆದುಕೊಂಡರು. ಹಿಂದೂ ಕಾರ್ಯಕರ್ತರು ಮುತ್ತಿಗೆ ಹಾಕುತ್ತಿದ್ದಂತೆ ಸ್ಥಳದಿಂದ ಕೆಲವರು ಕಾಲುಕಿತ್ತಿದ್ದಾರೆ. ಇನ್ನುಳಿದ ಜನರನ್ನು ಒಂದೆಡೆ ಕೂಡಿಹಾಕಿದ ಹಿಂದೂ ಪರ ಕಾರ್ಯಕರ್ತರು, ಪೆÇಲೀಸರನ್ನ ಸ್ಥಳಕ್ಕೆ ಕರೆಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಕಾರ್ಯಕರ್ತರು, ಬೆಳಗಾವಿಯ ಗ್ರಾಮಾಂತರದಲ್ಲಿ ಬೇರೆ ಬೇರೆ ಗ್ರಾಮಗಳಲ್ಲಿ ಈ ರೀತಿಯಾಗಿ ಕ್ರಿಶ್ಚಿಯನ್ ಜನರು ಹಿಂದೂಗಳನ್ನು ಮತಾಂತರ ಮಾಡುತ್ತಿದ್ದಾರೆ. ಊರ ಹೊಗೆ ಈ ಹಾಲ್ ಇರುವುದರಿಂದ ಈ ಕುರಿತು ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಈ ಕೂಡಲೇ ಹಿಂದೂಗಳನ್ನು ಮತಾಂತರ್ ಮಾಡುತ್ತಿರುವ ಈ ಕಾರ್ಯ ನಿಲ್ಲಬೇಕೆಂದು ಮನವಿ ಮಾಡಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷರಾದ ರವಿಕುಮಾರ್ ಕೋಕಿತ್ಕರ್, ಬೆಳಗಾವಿಯ ಗ್ರಾಮಾಂತರ ಭಾಗದಲ್ಲಿ ಬೇರೆ ಬೇರೆ ಗ್ರಾಮಗಳಲ್ಲಿ ಕ್ರಿಶ್ಚಿಯನ್ ಪಾಸ್ಟರ್ಗಳಿಂದ ಮತಾಂತರ ಮಾಡುವ ಕಾರ್ಯ ನಡೆದಿದೆ. ಹಿಂದೂ ಧರ್ಮದ ಬಡ ಜನರಿಗೆ ಆಮಿಶಗಳನ್ನೊಡ್ಡಿ ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಮತರ ಮಾಡುತ್ತಿದ್ದಾರೆ. ಕೂಡಲೇ ಇದು ನಿಲ್ಲಬೇಕು ಎಂದರು.
ಇನ್ನು ಹಿಂದೂ ಪರ ಸಂಘಟನೆಗಳ ಮತಾಂತರ ಆರೋಪ ಕುರಿತಂತೆ ಮಾತನಾಡಿದ ಪಾಸ್ಟರ್ ಲೆಮೊ ಚೇರಿಯನ್, ನಾವು ಮತಾಂತರ ಮಾಡುತ್ತಿಲ್ಲ. ಬದಲಾಗಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದೇವೆ. ಯಾರಿಗೆಲ್ಲ ಪ್ರಾರ್ಥನೆ ಮಾಡುವ ಆಸಕ್ತಿ ಇದೆ ಅವರೆಲ್ಲ ಬಂದಿದ್ದಾರೆ. ನಾವು ಸಭೆ ಮಾಡುವ ಮುನ್ನ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಕಾನೂನು ಪ್ರಕಾರವೇ ಎಲ್ಲಾ ಮಾಡುತ್ತಿದ್ದೇವೆ. ಮತಾಂತರ ಮಾಡುತ್ತಿಲ್ಲ ಎಂದು ಸ್ಪಸ್ಟನೆ ನೀಡಿದ್ದಾರೆ.
ಇನ್ನು ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು ಇಪ್ಪತ್ತಕ್ಕೂ ಅಧಿಕ ಪೆÇಲೀಸರನ್ನು ಸ್ಥಳದಲ್ಲಿ ನಿಯೋಜನೆಗೊಳಿಸಿ ಬಿಗಿ ಭದ್ರತೆ ಮಾಡಲಾಗಿದೆ. ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ದೂರು ದಾಖಲಾಗಿದ್ದು, ಇನ್ನು ವಿಚಾರಣೆ ನಂತರವೇ ಸತ್ಯಾಂಶವೇನೆಂದು ತಿಳಿದುಬರಬೇಕಿದೆ.