Breaking News

ವೈದ್ಯ, ವಾರಿಯರ್ ಬಳಿಕ ಕೊರೊನಾ ಕಿಲ್ಲರ್ ಆದ ಗಣೇಶ!

Spread the love

ಗಾಂಧಿನಗರ: ವೈದ್ಯ, ಕೊರೊನಾ ವಾರಿಯರ್ಸ್ ಬಳಿಕ ಇದೀಗ ಸೂರತ್ ಮೂಲದ ವ್ಯಕ್ತಿಯೊಬ್ಬರು ಕೊರೊನಾ ಕಿಲ್ಲರ್ ಗಣೇಶನ ಮೂರ್ತಿ ತಯಾರಿಸಿದ್ದಾರೆ.ಹೌದು. ಕೊರೊನಾ ಮಹಾಮಾರಿಯಿಂದ ಈ ಬಾರಿ ಎಲ್ಲಾ ಹಬ್ಬಗಳು ತುಂಬಾನೆ ಆಚರಿಸಲಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ ಹಬ್ಬ ಬರಲಿದ್ದು, ಪ್ರತಿ ಬಾರಿಯೂ ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಚೀನಿ ವೈರಸ್ ಕಾಟದಿಂದ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸುವ ಸಾಧ್ಯತೆ ಇದೆ.

ಇತ್ತ ಗಣೇಶನ ಮೂರ್ತಿ ತಯಾರಕರು ಕೂಡ ಈ ಬಾರಿ ಕೊರೊನಾ ಕಿಲ್ಲರ್, ಕೊರೊನಾ ವಾರಿಯರ್ ಎಂಬಂತಹ ಥೀಮ್ ಇಟ್ಟುಕೊಂಡು ಮೂರ್ತಿಗಳನ್ನು ತಯಾರು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಮಹಾಮಾರಿಯನ್ನು ಹೊಡೆದೊಡಿಸುವಂತಹ ನಿಟ್ಟಿನಲ್ಲಿ ಗಣೇಶನನ್ನು ರೂಪಿಸಲಾಗುತ್ತಿದೆ.

ಸೂರತ್ ಮೂಲದ ಆಶೀಶ್ ಪಟೇಲ್ ಕೂಡ ಇಂತದ್ದೇ ಮೂರ್ತಿಯನ್ನು ತಯಾರಿಸಿದ್ದಾರೆ. ಈ ಸಂಬಂಧ ಮಾಧ್ಯಮದೊಂದಿಗೆ ಮಾತನಾಡಿರುವ ಆಶೀಶ್, ಈ ಮೂರ್ತಿಯ ಮೂಲಕ ನಾನು ಸಮಾಜಕ್ಕೆ ಒಂದು ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದೇನೆ. ಅದೇನೆಂದರೆ ಜನ ಕೋವಿಡ್ 19 ವಿರುದ್ಧ ಆದಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಮೆಸೇಜ್ ನೀಡುವ ಸಲುವಾಗಿ ಕೊರೊನಾ ಕಿಲ್ಲರ್ ಗಣೇಶನನ್ನು ಈ ಬಾರಿ ತಯಾರಿಸುವುದಾಗಿ ತಿಳಿಸಿದ್ದಾರೆ.

ಈ ಹಿಂದೆ ಬೆಂಗಳೂರಿನ ಕಲಾವಿದರೊಬ್ಬರು ಕೂಡ ಗಣೇಶನನ್ನು ಆರೋಗ್ಯ ರಕ್ಷಕನನ್ನಾಗಿ ಮಾಡಿದ್ದರು. ಗಣೇಶನನ್ನು ವೈದ್ಯ ಹಾಗೂ ಆತನ ವಾಹನ ಇಲಿಯನ್ನು ದಾದಿಯಂತೆ ಮೂರ್ತಿ ತಯಾರಿಸಿದ್ದರು. ಆ ಬಳಿಕ ಕೊಯಂಬತ್ತೂರು ಮೂಲದ ಕಲಾವಿದರೊಬ್ಬರು ಗಣೇಶನನ್ನು ಕೊರೊನಾ ವಾರಿಯರ್ ಆಗಿ ರೂಪಿಸಿದ್ದಾರೆ. ಗಣೇಶ ಬಂದು ಕೊರೊನಾವನ್ನು ಹೊಡೆದು ಸಾಯಿಸುವಂತೆ ಮೂರ್ತಿಯನ್ನು ತಯಾರಿಸಿದ್ದರು.


Spread the love

About Laxminews 24x7

Check Also

ಯಾದವಾಡದಲ್ಲಿ ಮೂಡಲಗಿ ಮತ್ತು ಗೋಕಾಕ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love *ಅಕ್ರಮ ಸಾರಾಯಿ ಚಟುವಟಿಕೆಯ ಬಗ್ಗೆ ನೀಗಾ ವಹಿಸಿ, ಕಠಿಣ ಕ್ರಮಕ್ಕೆ ಮುಂದಾಗಿ- ಶಾಸಕ ಬಾಲಚಂದ್ರ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ