Breaking News

ನನ್ನಂಥವರಿಗೆ ಡಾ. ರಾಜ್ ಸ್ಫೂರ್ತಿ’ : ಹೆಚ್.ಡಿ.ಕುಮಾರಸ್ವಾಮಿ

Spread the love

ಬೆಂಗಳೂರು : ನನ್ನಂಥವರು ವರನಟ ಡಾ. ರಾಜ್ ಅವರ ಸಿನಿಮಾಗಳನ್ನು ನೋಡಿ ಸ್ಫೂರ್ತಿಗೊಂಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ‌.ಡಾ. ರಾಜ್ ಕುಮಾರ್ ಜಗತ್ತು ಕಂಡ ಮೇರು ನಟರಾಗಿದ್ದರು ಎಂದು ಟ್ವಿಟರ್ ನಲ್ಲಿ ಅವರು ತಿಳಿಸಿದ್ದಾರೆ.

ಕನ್ನಡ ಸಿನಮಾ ಲೋಕದ ಉತ್ತುಂಗದ ಸ್ಟಾರ್ ಅಷ್ಟೇ ಅಲ್ಲ. ತಮ್ಮ ನಾಡು ನುಡಿಯ ಬಗ್ಗೆ ಅದಮ್ಯ ಕಾಳಜಿ ಇಟ್ಟುಕೊಂಡಿದ್ದ ಹೋರಾಟಗಾರ ಎಂದು ಹೇಳಿದ್ದಾರೆ.

ತಮ್ಮ ಅಭಿನಯ ಮತ್ತು ಬದುಕು ಎರಡರ ಮೂಲಕವೂ ಸಾಂಸ್ಕೃತಿಕ ಬದಲಾವಣೆ ತಂದಿದ್ದ, ಮಹಾನ್ ಸಾಮರ್ಥ್ಯ ಹೊಂದಿದ್ದ ಅನನ್ಯ ವ್ಯಕ್ತಿತ್ವ ಅವರದಾಗಿತ್ತು. ಅವರ ಬದುಕು ಅನುಕರಣೀಯ. ಅವರ ಪುಣ್ಯ ಸ್ಮರಣೆಯ ಈ ದಿನ ಅವರನ್ನು ಪ್ರೀತಿಯಿಂದ ಸ್ಮರಿಸಿಕೊಳ್ಳೋಣ ಎಂದಿದ್ದಾರೆ.


Spread the love

About Laxminews 24x7

Check Also

ಬೆಂಗಳೂರಿಂದ ತಿರುಪತಿಗೆ ಹೊರಟಿದ್ದ ಕಾರು ಅಪಘಾತ; ಅಪ್ಪ-ಅಮ್ಮ, 4 ವರ್ಷದ ಮಗು ಸ್ಥಳದಲ್ಲೇ ಸಾವು

Spread the loveಬೆಂಗಳೂರು: ನಗರದಿಂದ ತಿರುಪತಿ ವೆಂಕಟೇಶ್ವರ ಸ್ವಾಮಿ  ದರ್ಶನಕ್ಕೆ ಹೊರಟಿದ್ದ ಒಂದೇ ಕುಟುಂಬದ ಮೂವರು ಭೀಕರ ಅಪಘಾತದಲ್ಲಿ ( …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ