Breaking News

COVID-19: ಕೊರೋನಾ ಬಳಿಕ ಡಿಸ್ಚಾರ್ಜ್​ ಆದವರಿಗೆ ತಲಾ 2 ಸಾವಿರ ಘೋಷಿಸಿದ ಆಂಧ್ರ ಸರ್ಕಾರ

Spread the love

ಅಮರಾವತಿ(ಏ.28): ಕೊರೋನಾ ವೈರಸ್​ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರಿಗೆ ತಲಾ 2 ಸಾವಿರ ನೀಡುವುದಾಗಿ ಮುಖ್ಯಮಂತ್ರಿ ಜಗನ್​​ ಮೋಹನ್​​ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಘೋಷಿಸಿದೆ. ಸೋಂಕಿತರು ದೇಹದಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಅಗತ್ಯವಾದ ಆಹಾರ ಖರೀದಿಸಲು ಈ ಹಣ ನೀಡಲಾಗುವುದು ಎಂದು ಜಗನ್​​ ಹೊರಡಿಸಿದ ಆದೇಶದ ಪ್ರತಿಯಲ್ಲಿ ತಿಳಿಸಲಾಗಿದೆ.

ಆಂಧ್ರಪ್ರದೇಶದಲ್ಲಿ ನಿನ್ನೆಯವರೆಗೂ 1177 ಕೊರೊನಾ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ 235 ಜನರು ಗುಣಮುಖರಾಗಿದ್ದಾರೆ. ಈವರೆಗೂ 31 ಜನರು ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಇನ್ನು, ಜಗನ್​​​ ಸರ್ಕಾರದ ಪ್ರಕಾರ, 231 ಜನರು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇವರಿಗೆ ಸರ್ಕಾರ ನೀಡುವ 2 ಸಾವಿರ ಧನಸಹಾಯವ ಸಿಗಲಿದೆ.ಇನ್ನು, ಜನ ಕೊರೋನಾ ವಿರುದ್ಧ ಹೋರಾಡಲು ಸಹಕರಿಸಬೇಕು. ದಯವಿಟ್ಟು ಎಲ್ಲರೂ ಮನೆಯಿಂದ ಹೊರಬಾರದೇ ಸರ್ಕಾರದ ಆದೇಶ ಪಾಲಿಸಬೇಕು. ತಮ್ಮೊಂದಿಗೆ ಇಡೀ ರಾಜ್ಯವನ್ನು ಕೊರೋನಾದಿಂದ ಪಾರು ಮಾಡಬೇಕು ಎಂದು ಜನರಲ್ಲಿ ಜಗನ್​​ ವಿನಂತಿಸಿದ್ದಾರೆ.


Spread the love

About Laxminews 24x7

Check Also

ಅಧಿಕಾರ ಹಂಚಿಕೆ ಗೊಂದಲದ ಮಧ್ಯೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಎಕ್ಸ್​ನಲ್ಲಿ ಮಾಡಿದ ‘ಕೊಟ್ಟ ಮಾತು’ ಪೋಸ್ಟ್ ಕುತೂಹಲ ಹೆಚ್ಚಿಸಿದೆ.

Spread the loveಬೆಂಗಳೂರು: ‘ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ’ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸಿಂಗಲ್ ಲೈನ್ ಎಕ್ಸ್​ ಪೋಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ