Breaking News

ರಾಜ್ಯ

ಸುದ್ದಿ ವಿಶ್ಲೇಷಣೆ | ಕೊವಿಡ್​ ಸುನಾಮಿ ಮಧ್ಯೆ ರಾಜ್ಯದ ಐಎಎಸ್ ಅಧಿಕಾರಿಗಳ ವಿಫಲತೆ ಬಗ್ಗೆ ಮಾತನಾಡುವವರು ಯಾರು?​

ಇದನ್ನು ಓದಿದರೆ ನಿಮಗೆ ಆಶ್ಚರ್ಯ ಆಗಬಹುದು ಅಥವಾ ಶಾಕ್ ಆಗಬಹುದು. ಕರ್ನಾಟಕದಲ್ಲಿ ಆಮ್ಲಜನಕದ ಕೊರತೆ ಮಾತ್ರ ಇದೆ ಎಂದುಕೊಂಡಿರಾ? ಸದ್ಯ ಅದು ಎಲ್ಲರಿಗೂ ಗೊತ್ತಿರುವ ಸಂಗತಿ. ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ಕೊರತೆಯೂ ಇದೆ. ನಿಮಗೆ ಇದನ್ನು ಕೇಳಿದರೆ ಅಚ್ಚರಿ ಮತ್ತು ಶಾಕ್ ಎರಡೂ ಆಗುತ್ತೆ ಅಲ್ಲವೇ? ನೀವು ತುಂಬಾ ಸಿನಿಕರಾಗಿದ್ದರೆ, ಐಎಎಸ್ ಅಧಿಕಾರಿಗಳು ಎಂದರೆ ಬಿಳಿ ಆನೆ ಇದ್ದಂತೆ, ಅವರ ಬಗ್ಗೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು. ಅವರಿಂದ ನಮಗೇನು ಪ್ರಯೋಜನ ಇಲ್ಲ …

Read More »

ರಂಜಾನ್ ಹಬ್ಬ : ಸಾಮೂಹಿಕ ಪ್ರಾರ್ಥನೆ ಮಾಡದಂತೆ ಪೊಲೀಸರ ಸೂಚನೆ

ಬೆಂಗಳೂರು : ನಾಳೆ ದೇಶಾದ್ಯಂತ ರಂಜಾನ್ ಹಬ್ಬವಿದ್ದು ಸಾಮೂಹಿಕ ಪ್ರಾರ್ಥನೆ ಮಾಡದಂತೆ ನಗರ ಪೊಲೀಸರು ಸೂಚಿಸಿದ್ದಾರೆ. ಕೋವಿಡ್ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಮಸೀದಿಯ ಹಜರತ್​ ಗಳಿಗೆ ಪೊಲೀಸರು ಸೂಚನೆ ನೀಡಿದ್ದಾರೆ. ಹಜರತ್ ಗಳಿಗೆ ಹೇಳಿರುವ ಪೊಲೀಸರು, ಮಸೀದಿಗೆ ಜನರು ಬರದಂತೆ ಹೇಳಿ. ಪ್ರಾರ್ಥನೆಯನ್ನು ಮನೆಯಲ್ಲಿಯೇ ಮಾಡಿ ಎಂದು ತಿಳಿಸಿ ಎಂದು ಹೇಳಿದ್ದಾರೆ. ಆಯಾ ಹಜಾರತ್ ಗಳು ತಮ್ಮ ಸುತ್ತ ಮುತ್ತ ಇರುವ ಮುಸಲ್ಮಾನ ಬಾಂಧವರಿಗೆ ತಿಳಿಸುವಂತೆ ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. …

Read More »

ಹರಿಹರ ಆಸ್ಪತ್ರೆಯಲ್ಲಿ ರೋಗಿಗೆ ಸಿಗದ ಸೂಕ್ತ ಚಿಕಿತ್ಸೆ: ಗೋಳಾಟದ ವಿಡಿಯೋ ವೈರಲ್

ದಾವಣಗೆರೆ, ಮೇ 12: ದಾವಣಗೆರೆ ಜಿಲ್ಲೆ ಹರಿಹರದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ರೋಗಿಯೊಬ್ಬರ ಸಂಬಂಧಿಕರು ಗೋಳಾಡುವ ವಿಡಿಯೋ ವೈರಲ್ ಆಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಹಾಗೂ ಕೋವಿಡೇತರ ರೋಗಿಗಳು ಹೆಚ್ಚಾಗಿ ಬರುತ್ತಿದ್ದು, ಕೊರೊನಾ ಸೋಂಕಿಗೆ ಜನರು ಬಲಿಯಾಗುತ್ತಿದ್ದಾರೆ. ಚಿಕಿತ್ಸೆಗೆ ಬಂದರೆ ವೈದ್ಯರಾಗಲಿ, ದಾದಿಯರಾಗಲಿ ತಕ್ಷಣಕ್ಕೆ ಸ್ಪಂದಿಸುತ್ತಿಲ್ಲ. ಇದರಿಂದಾಗಿ ಹಲವು ರೀತಿಯ ಸಮಸ್ಯೆಯಾಗಿದೆ ಎಂದು ಆರೋಪಿಸಲಾಗಿದೆ. ಯಾವ ಆರೋಗ್ಯ ಅಧಿಕಾರಿಗಳು ಇತ್ತ …

Read More »

ಲಾಕ್‌ಡೌನ್: ಪೊಲೀಸ್ ಹೊಡೆತ ತಪ್ಪಿಸಲು ಸೈಕ್ಲಿಸ್ಟ್‌ಗಳ ಮಾಸ್ಟರ್ ಪ್ಲಾನ್

ಉಡುಪಿ, ಮೇ 12: ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದು, ಯಾರಾದರೂ ಬೈಕ್ ಅಥವಾ ವಾಹನಗಳಲ್ಲಿ ಹೊರಬಂದರೆ ಪೊಲೀಸರ ಲಾಠಿ ಏಟು ಬೀಳುವುದು ಗ್ಯಾರಂಟಿಯಾಗಿತ್ತು. ಆದರೆ, ಪೊಲೀಸರಿಂದ ಲಾಠಿ ಏಟು ತಪ್ಪಿಸುವುದಕ್ಕಾಗಿ ಉಡುಪಿಯ ವ್ಯಕ್ತಿಯೊಬ್ಬರು ತಾತ್ಕಾಲಿಕ ಹಿಂಭಾಗದ ರಕ್ಷಣೆ, ಹೆಲ್ಮೆಟ್ ಮತ್ತು ಮಾಸ್ಕ್ ನೊಂದಿಗೆ ಸೈಕಲ್ ಸವಾರಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪತ್ರಕರ್ತ ನೋಲನ್ ಪಿಂಟೊ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಸೈಕಲ್‌ನಲ್ಲಿ ಹೋಗುವಾಗ ವ್ಯಕ್ತಿಯೊಬ್ಬ ತನ್ನ …

Read More »

ಆಮ್ಲಜನಕ ಕೊರತೆ: ಯೋಗಿ ಸರ್ಕಾರದ ಹುಳುಕು ಬಹಿರಂಗಪಡಿಸಿದ ಹೈಕೋರ್ಟ್

ಲಕ್ನೋ, ಮೇ 12: ಕೋವಿಡ್ ಮಾಹಿತಿ ವ್ಯವಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆ ಯೋಗಿ ಆದಿತ್ಯನಾಥ್ ಸರ್ಕಾರ ನೀಡಿರುವ ಅಂಕಿ ಅಂಶಗಳ ದೋಷವನ್ನು ಅಲಹಾಬಾದ್ ಹೈಕೋರ್ಟ್ ಬಹಿರಂಗಪಡಿಸಿದೆ. ಆಸ್ಪತ್ರೆಯ ಹಾಸಿಗೆಗಳ ಲಭ್ಯತೆಯ ಬಗ್ಗೆ ಸರ್ಕಾರದ ಸಹಾಯವಾಣಿ ಮತ್ತು ಪೋರ್ಟಲ್ ನಡುವೆ ಸರಿಯಾದ ಹೊಂದಾಣಿಕೆಯಿಲ್ಲ,ಕೋವಿಡ್ ಮಾಹಿತಿ ವ್ಯವಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆ ಉತ್ತರ ಪ್ರದೇಶ ಆಡಳಿತ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ಯೋಗಿ ಸರ್ಕಾರದ ಹುಳುಕನ್ನು ಕೋರ್ಟ್ ಬಹಿರಂಗಪಡಿಸಿದೆ. ”ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಯಾಗದೆ ಕೋವಿಡ್‌ …

Read More »

ಇಸ್ರೇಲ್ ದಾಳಿಗೆ 10 ಹಮಾಸ್ ಬಂಡುಕೋರ ನಾಯಕರ ಸಾವು

ಗಾಜಾ: ಇಸ್ರೇಲ್ ಹಾಗೂ ಪಾಲೆಸ್ಟೈನ್ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಜಾ ಗುರಿಯಾಗಿಸಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‌ನ 10ರಷ್ಟು ಬಂಡುಕೋರ ನಾಯಕರನ್ನು ಹೊಡೆದುರುಳಿಸಲಾಗಿದ್ದು, ಎರಡು ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಪಾಲೆಸ್ಟೈನ್‌ನ ಹಮಾಸ್ ಬಂಡುಕೋರರು, ಇಸ್ರೇಲ್ ಮೇಲೆ 1,000ಕ್ಕೂ ಹೆಚ್ಚು ರಾಕೆಟ್ ದಾಳಿಯನ್ನು ನಡೆಸಿದೆ. 2014ರಲ್ಲಿ ಇಸ್ರೇಲ್ ಹಾಗೂ ಪಾಲೆಸ್ಟೈನ್ ನಡುವೆ ನಡೆದ ಯುದ್ಧವು 50 ದಿನಗಳ ಕಾಲ ಮುಂದುವರಿದಿತ್ತು. ಈಗ ಹಿಂದಿನಗಿಂತಲೂ ಭೀಕರ ಪರಿಸ್ಥಿತಿ ನಿರ್ಮಾಣವಾಗುವ …

Read More »

1000 ಆಕ್ಸಿಜನ್​ ಬೆಡ್​ ಇರುವ, ದೇಶದಲ್ಲಿಯೇ ಅತ್ಯಂತ ದೊಡ್ಡ ಕೊವಿಡ್​ ಕಾಳಜಿ ಕೇಂದ್ರ ಕೇರಳದಲ್ಲಿ ನಿರ್ಮಾಣ

ಭಾರತದಲ್ಲಿಯೇ ಅತ್ಯಂತ ದೊಡ್ಡದಾದ, ಆಕ್ಸಿಜನ್​ ಬೆಡ್​ಗಳನ್ನೊಳಗೊಂಡ ಕೊವಿಡ್​ 19 ಕಾಳಜಿ ಕೇಂದ್ರ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿದೆ. ಇದು ಎರ್ನಾಕುಲಂನ ಅಂಬಾಲಮುಗಲ್​ನಲ್ಲಿ ಸಿದ್ಧವಾಗುತ್ತಿರುವ ಈ ಕೊವಿಡ್​ ಕೇರ್​​ ಸೆಂಟರ್​​ನಲ್ಲಿ 1000 ಆಕ್ಸಿಜನ್ ಬೆಡ್​ಗಳು ಇರಲಿವೆ. ಗುರುವಾರ (ಮೇ 13)ದ ಹೊತ್ತಿಗೆ ಸಂಪೂರ್ಣವಾಗಿ ಸಿದ್ಧವಾಗಲಿದೆ. ಎಲ್ಲೆಲ್ಲೂ ಆಕ್ಸಿಜನ್ ಕೊರತೆ ಮಿತಿಮೀರುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಅಂಬಾಲಮುಗಲ್​ನ ರಿಫೈನರಿ ಶಾಲೆ ಮೈದಾನದಲ್ಲಿ, 1000 ಆಕ್ಸಿಜನ್ ಬೆಡ್​​ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಎರ್ನಾಕುಲಂ ಜಿಲ್ಲಾಧಿಕಾರಿ ಎಸ್​. ಸುಹಾಸ್ …

Read More »

ಕಡಲು ಸೇರಿದ 1.48 ಕೋಟಿ ಆಮೆ ಮರಿಗಳು

ಮೊಟ್ಟೆಯೊಡೆದು ಬರೋಬ್ಬರಿ 1.48ಕೋಟಿ ಆಮೆ ಮರಿಗಳು ಒಡಿಶಾದ ಗಹಿರ್ ಮಾತಾ ಕಡಲ ಸೇರಿವೆ. ಈ ಕಡಲ ತೀರದಲ್ಲಿ ಆಲಿವ್ ರಿಡ್ಲೆ ತಳಿಯ ಸುಮಾರು 1.48 ಕೋಟಿ ಆಮೆಗಳು ಕಾಣಿಸಿಕೊಂಡಿವೆ. ಮೇ 8ರಂದು ಈ ಆಮೆಗಳು ಕಂಡಿದ್ದು, ಪುಟ್ಟ ಆಮೆ ಮರಿಗಳು ತಮ್ಮ ತಾಯಿಂದಿರುವ ಇಲ್ಲದೇ ಇರುವ ವೇಳೆಯಲ್ಲಿ ಮೊಟ್ಟೆಯೊಡೆದುಕೊಂಡು ಹೊರಬಂದಿವೆ. ಪ್ರಕೃತಿಯ ಈ ವಿಸ್ಮಯದ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. “ಒಟ್ಟಾರೆಯಾಗಿ 1.48ಕೋಟಿ ಆಮೆಗಳು ಮೊಟ್ಟೆಯೊಡೆದು …

Read More »

ಕುತೂಹಲಕ್ಕೆ ಕಾರಣವಾಗಿದೆ ಆಕಾಶದಲ್ಲಿ ಕಂಡುಬಂದ ವಿಚಿತ್ರ ಆಕೃತಿ.!

ಕಳೆದ ವರ್ಷ ಜನವರಿ ತಿಂಗಳಲ್ಲಿ ಲಾಹೋರ್​​ನಲ್ಲಿ ವಿಚಿತ್ರವಾದ ಕಪ್ಪು ಬಣ್ಣದ ವರ್ತುಲ ಆಕಾಶದಲ್ಲಿ ಕಾಣಿಸಿಕೊಂಡ ಘಟನೆ ನಿಮಗೆ ನೆನಪಿದ್ದಿರಬಹುದು. ಈ ದೃಶ್ಯದ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವಿವಿಧ ವೇದಿಕೆಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ಅನೇಕರು ಇದನ್ನ ಹಾರುವ ತಟ್ಟೆ ಇರಬಹುದು ಎಂದು ಭಾವಿಸಿದ್ದರು. ಆದರೆ ಬಳಿಕ ತಜ್ಞರು ಈ ಬಗ್ಗೆ ಸಂಶೋಧನೆ ನಡೆಸಿ ಇದೊಂದು ಕೈಗಾರಿಕಾ ಪ್ರದೇಶದಲ್ಲಿ ಆದ ಸಮಸ್ಯೆಯಿಂದಾಗಿ ಈ ರೀತಿ …

Read More »

ಕೊರೊನಾ ಸೋಂಕು ವರದಿ ನೆಗೆಟಿವ್‌ ಬರುತ್ತಿದ್ದಂತೆ ಮಕ್ಕಳನ್ನು, ಕುಟುಂಬದವರನ್ನು ಭೇಟಿಯಾದ ಅಲ್ಲು ಅರ್ಜುನ್‌..!

ನವದೆಹಲಿ: ಕೊರೊನಾ ಸೋಂಕು ದೃಢಪಟ್ಟು ಕ್ವಾರಂಟೈನ್‌ನಲ್ಲಿದ್ದ ಟಾಲಿವುಡ್‌ ನಟ ಅಲ್ಲು ಅರ್ಜುನ್‌‌ ಅವರ ವರದಿ ನೆಗೆಟಿವ್‌ ಬರುತ್ತಿದ್ದಂತೆ ತಮ್ಮ ಮಕ್ಕಳನ್ನು ಮುದ್ದಾಡಿದ್ದಾರೆ. ಟಾಲಿವುಡ್ ನಟ ಅಲ್ಲು ಅರ್ಜುನ್ ಅವರು ಕಳೆದ 14 ದಿನಗಳ ಹಿಂದೆ ಕೊರೊನಾ ಸೋಂಕು ಹಿನ್ನೆಲೆ ಕ್ವಾರಂಟೈನ್‌ ಆಗಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರು ಸೋಂಕಿನಿಂದ ಗುಣಮುಖರಾಗಿದ್ದು, ಅವರ ಪರೀಕ್ಷಾ ವರದಿಯಲ್ಲಿ ನೆಗೆಟಿವ್‌ ಬಂದಿದೆ. 15 ದಿನಗಳ ಬಳಿಕ ಅವರು ತಮ್ಮ ಮಕ್ಕಳನ್ನು ಹಾಗೂ ಕುಟುಂಬದರನ್ನು …

Read More »