Breaking News

ರಾಜಕೀಯ

ಮೊದಲ ಬಾರಿ ನಮ್ಮ ಮೆಟ್ರೋದಲ್ಲಿ ಯಶಸ್ವಿಯಾಗಿ ಅಂಗಾಂಗ ಸಾಗಾಟ

ಬೆಂಗಳೂರು, ಆಗಸ್ಟ್ 2: ಪ್ರಥಮ ಬಾರಿಗೆ, ನಮ್ಮ ಮೆಟ್ರೋದಲ್ಲಿ (Namma Metro) ದೇಣಿಗೆಯಾದ ಮಾನವ ಯಕೃತ್ತನ್ನು (Liver) ಶಸ್ತ್ರಚಿಕಿತ್ಸೆಗಾಗಿ ಯಶಸ್ವಿಯಾಗಿ ಸಾಗಿಸಲಾಯಿತು. ಶುಕ್ರವಾರ (ಆಗಸ್ಟ್ 1) ರಾತ್ರಿ 8:38ಕ್ಕೆ ವೈದೇಹಿ ಆಸ್ಪತ್ರೆಯ ಓರ್ವ ವೈದ್ಯ ಮತ್ತು ಏಳು ಮಂದಿ ವೈದ್ಯಕೀಯ ಸಿಬ್ಬಂದಿ ಯಕೃತ್ತನ್ನು ತೆಗೆದುಕೊಂಡು ವೈಟ್​ಫಿಲ್ಡ್​ ಮೆಟ್ರೋ ನಿಲ್ದಾಣಕ್ಕೆ ಅಂಬ್ಯುಲೆನ್ಸ್​ನಲ್ಲಿ ಸುರಕ್ಷಿತವಾಗಿ ಬಂದರು. ವೈದ್ಯರ ತಂಡ ಮೆಟ್ರೋ ನಿಲ್ದಾಣಕ್ಕೆ ತಲುಪಿದ ತಕ್ಷಣ, ಸಹಾಯಕ ಭದ್ರತಾ ಅಧಿಕಾರಿ (ASO) ಮತ್ತು ಮೆಟ್ರೋ ಸಿಬ್ಬಂದಿ …

Read More »

ಶಾಲೆಯ ನೀರಿನ‌ ಟ್ಯಾಂಕ್​ಗೆ ವಿಷ ಬೆರೆಸಿದ ಕೇಸ್​ ತನಿಖೆಗೆ 3 ತಂಡ ರಚನೆ

ಶಿವಮೊಗ್ಗ, ಆಗಸ್ಟ್​ 02: ಮುಖ್ಯಮಂತ್ರಿ ಸಿದ್ದರಾಮಯ್ಯಯವರ ಸೂಚನೆ ಬೆನ್ನಲ್ಲೇ ಸರ್ಕಾರಿ ಶಾಲೆಯ (Shivamogga Government School) ನೀರಿನ‌ ಟ್ಯಾಂಕ್​ಗೆ ಕೀಟನಾಶಕ (Poison) ಬೆರೆಸಿದ ಪ್ರಕರಣದ ತನಿಖೆಯನ್ನು ಶಿವಮೊಗ್ಗ ಪೊಲೀಸರು ಚುರುಕುಗೊಳಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಿಥುನ್​ ಕುಮಾರ್ ಅವರು ತೀರ್ಥಹಳ್ಳಿ ಡಿವೈಎಸ್​ಪಿ ನೇತೃತ್ವದಲ್ಲಿ 18 ಪೊಲೀಸ್ ಸಿಬ್ಬಂದಿ ಒಳಗೊಂಡಿರುವ ಮೂರು ತಂಡಗಳನ್ನು ರಚಿಸಿದ್ದಾರೆ. ಟವರ್ ಡಂಪ್, ಸಿಸಿಟಿವಿ ಪರಿಶೀಲನೆಗೆ ಐದು ಮಂದಿ ಸಿಬ್ಬಂದಿ, ಗ್ರಾಮದ ಸುತ್ತಮುತ್ತ ಮಾಹಿತಿ ಸಂಗ್ರಹಣೆಗೆ 8 ಮಂದಿ …

Read More »

ಹರಳು ರೂಪದ ಯೂರಿಯಾ ಗೊಬ್ಬರಕ್ಕಿಂತ ಲಿಕ್ವಿಡ್ ರೂಪದ ನ್ಯಾನೋ ಯೂರಿಯಾ ಬಳಕೆಯತ್ತ ರೈತರು

ಹಾವೇರಿ: ಕರ್ನಾಟಕದಲ್ಲಿ ಹರಳು ರೂಪದ ಯೂರಿಯಾ ರಸಗೊಬ್ಬರದ ಅಭಾವ ಸೃಷ್ಟಿಯಾಗಿದ್ದು, ಇದರ ಬೇಡಿಕೆ ತಗ್ಗಿಸುವ ಉದ್ದೇಶದಿಂದ ದ್ರವ ರೂಪದ ‘ನ್ಯಾನೋ ಯೂರಿಯಾ’ ಬಳಸುವಂತೆ ಕೃಷಿ ತಜ್ಞರು ರೈತರಿಗೆ ಸಲಹೆ ನೀಡುತ್ತಿದ್ದಾರೆ. ಪರಿಣಾಮ ಹಾವೇರಿ ಜಿಲ್ಲೆಯ, ಸವಣೂರು ತಾಲೂಕಿನ ಕೆಲವು ರೈತರು ಯೂರಿಯಾ ಗೊಬ್ಬರದ ಬದಲಿಗೆ ‘ನ್ಯಾನೋ ಯೂರಿಯಾ’ದ ಬಳಕೆಗೆ ಮುಂದಾಗಿದ್ದಾರೆ. ರಾಜ್ಯದೆಲ್ಲೆಡೆ ಯೂರಿಯಾಗಾಗಿ ರೈತರು ಪರದಾಡುತ್ತಿರುವ ವರದಿಗಳು ಆಗುತ್ತಿದ್ದು, ಎಲ್ಲಿಯೂ ನಿರೀಕ್ಷಿತ ಪ್ರಮಾಣದಷ್ಟು ರಸಗೊಬ್ಬರ ದೊರೆಯುತ್ತಿಲ್ಲ. ಈ ಅಭಾವ ತಗ್ಗಿಸುವ ಹಿನ್ನೆಲೆಯಲ್ಲಿ …

Read More »

ಮಣ್ಣಲ್ಲಿ ಮಣ್ಣಾದ ದೊಡ್ಮನೆಯ ಹಿರಿಜೀವ

ಚಾಮರಾಜನಗರ : ಕನ್ನಡ ಚಿತ್ರರಂಗದ ವರನಟ ಡಾ. ರಾಜ್ ಕುಮಾರ್‌ ಅವರ ಸಹೋದರಿ, ದೊಡ್ಮನೆಯ ಹಿರಿಜೀವವಾಗಿದ್ದ ನಾಗಮ್ಮ ಅವರ ಅಂತಿಮ ವಿಧಿ-ವಿಧಾನ ತಮಿಳುನಾಡಿನ ತಾಳವಾಡಿ ತಾಲೂಕಿನ ಗಾಜನೂರಿನ ತೋಟದಲ್ಲಿ ಶನಿವಾರ ಮಧ್ಯಾಹ್ನ 2ರ ಸುಮಾರಿಗೆ ಜರುಗಿತು.‌ ದೊಡ್ಮನೆ ಹಿರಿಕೊಂಡಿ, ರಾಜ್ ಪರಿವಾರದ ಮಕ್ಕಳನ್ನು ಎತ್ತಿ ಆಡಿಸಿ ಬೆಳೆಸಿದ್ದ ಎಲ್ಲರ ಅಕ್ಕರೆಯ ನಾಗಮ್ಮ ವಯೋಸಹಜವಾಗಿ ಶುಕ್ರವಾರ ನಿಧನರಾದರು‌‌‌. ಅಣ್ಣಾವ್ರು ಬಹಳ ಪ್ರೀತಿಯಿಂದ ಕಟ್ಟಿಸಿದ ಮನೆಯಲ್ಲಿ ನಾಗಮ್ಮರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ವ್ಯವಸ್ಥೆ …

Read More »

ಬಾಕಿ ಜಮೀನುಗಳ ಭೂಸ್ವಾಧೀನ ಕಾರ್ಯ ಪೂರ್ಣಗೊಳಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ:ಸಂಸದ ಶೆಟ್ಟರ ಸೂಚನೆ!!

ಬಾಕಿ ಜಮೀನುಗಳ ಭೂಸ್ವಾಧೀನ ಕಾರ್ಯ ಪೂರ್ಣಗೊಳಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ:ಸಂಸದ ಶೆಟ್ಟರ ಸೂಚನೆ!! ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಬಾಕಿ ಜಮೀನುಗಳ ಭೂಸ್ವಾಧೀನ ಕಾರ್ಯ ಪೂರ್ಣಗೊಳಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ:ಸಂಸದ ಶೆಟ್ಟರ ಸೂಚನೆ ಬೆಳಗಾವಿ ವಿಮಾನ ನಿಲ್ದಾಣದ ಅಭಿವೃದ್ಧಿಯ ಕುರಿತು ಚರ್ಚೆ ಬೆಳಗಾವಿ – ಕಿತ್ತೂರು – ಧಾರವಾಡ ನಡುವೆ ನೂತನ ರೇಲ್ವೆ ಮಾರ್ಗಕ್ಕೆ ಬೇಕಾಗುವ ಬಾಕಿ ಜಮೀನುಗಳ ಭೂಸ್ವಾಧೀನ ಕಾರ್ಯವನ್ನು ಸಹ ಪೂರ್ಣಗೊಳಿಸುವಂತೆ …

Read More »

ಸರ್ವ ಸಮಾಜದ ಏಳ್ಗೆಗೆ ಜಾತಿ ಗಣತಿ ಸಮೀಕ್ಷೆ; ಸಿಎಂ ಸಿದ್ಧರಾಮಯ್ಯ ಎಐಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಆರ್.ಟಿ.ಐ. ವಾರ್ಷಿಕ ಸಮಾವೇಶ

ಸರ್ವ ಸಮಾಜದ ಏಳ್ಗೆಗೆ ಜಾತಿ ಗಣತಿ ಸಮೀಕ್ಷೆ; ಸಿಎಂ ಸಿದ್ಧರಾಮಯ್ಯ ಎಐಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಆರ್.ಟಿ.ಐ. ವಾರ್ಷಿಕ ಸಮಾವೇಶ ಎಐಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಆರ್.ಟಿ.ಐ. ವಾರ್ಷಿಕ ಸಮಾವೇಶ ಸರ್ವ ಸಮಾಜದ ಏಳ್ಗೆಗೆ ಜಾತಿ ಗಣತಿ ಸಮೀಕ್ಷೆ ಸಿಎಂ ಸಿದ್ಧರಾಮಯ್ಯ ಅಭಿಪ್ರಾಯ ಡಾ. ಬಾಬಾಸಾಹೇಬ ಅಂಬೇಡ್ಕರರು ಬರೆದ ಸಂವಿಧಾನದಂತೆ ಎಲ್ಲ ಸಮಾಜಗಳಿಗೂ ಸಮಾನತೆಯನ್ನು ನೀಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರವು ಮಾಡಿದ್ದು, ರಾಜ್ಯದಲ್ಲಿ ಜಾತಿ ಗಣತಿ ಸಮೀಕ್ಷೆಯೊಂದಿಗೆ …

Read More »

ನಾಂದನಿ ಮಠದ ಆನೆಯನ್ನ ಅಂಬಾನಿ ಒಡೆತನದ ಉದ್ಯಾನದಿಂದ ಮುಕ್ತಗೊಳಿಸಿ ಕರ್ನಾಟಕ-ಮಹಾರಾಷ್ಟ್ರ ಜೈನ ಬಾಂಧವರಿಂದ ಭವ್ಯ ಚಳುವಳಿ; ರಾಜು ಶೆಟ್ಟಿ

ನಾಂದನಿ ಮಠದ ಆನೆಯನ್ನ ಅಂಬಾನಿ ಒಡೆತನದ ಉದ್ಯಾನದಿಂದ ಮುಕ್ತಗೊಳಿಸಿ ಕರ್ನಾಟಕ-ಮಹಾರಾಷ್ಟ್ರ ಜೈನ ಬಾಂಧವರಿಂದ ಭವ್ಯ ಚಳುವಳಿ; ರಾಜು ಶೆಟ್ಟಿ ನಾಂದನಿಮಠದ ಆನೆ ಅಂಬಾನಿ ಉದ್ಯಾನಕ್ಕೆ ರವಾನೆ ಮರಳಿ ಮಹಾದೇವಿಯನ್ನು ಕರೆ ತರಲು ಹೋರಾಟ ಭಾನುವಾರ ಜೈನ ಬಾಂಧವರಿಂದ ಚಳುವಳಿ ಆರಂಭ ಮಾಜಿ ಸಂಸದ ರಾಜು ಶೆಟ್ಟಿ ಮಾಹಿತಿ ಉದ್ಯಮಿ ಅಂಬಾನಿ ಒಡೆತನದಲ್ಲಿರುವ ವಣತಾರಾ ಉದ್ಯಾನವನಕ್ಕೆ ತೆಗೆದುಕೊಂಡು ಹೋದ ನಾಂದನಿ ಜೈನಮಠದ ಆನೆ ‘ಮಹಾದೇವಿ’ ಯನ್ನು ಮುಕ್ತಗೊಳಿಸಿ ಪುನಃ ಜೈನಮಠಕ್ಕೆ ಹಸ್ತಾಂತರಿಸುವಂತೆ …

Read More »

ಬೆಳ್ಳಿಯ ಆಭರಣ ಕದ್ದ ರಾಜಸ್ಥಾನ ಮೂಲದ ಮೂವರು ಖದೀಮರನ್ನು ಬಂಧಿಸಿರುವ ದಾವಣಗೆರೆ ಪೊಲೀಸರು.

ದಾವಣಗೆರೆ: ಕಳ್ಳತನ ಪ್ರಕರಣವೊಂದನ್ನು ಬೇಧಿಸಿರುವ ದಾವಣಗೆರೆ ಪೊಲೀಸರು, 18.790 ಕೆಜಿ ಬೆಳ್ಳಿ ಆಭರಣ ಕಳವು ಮಾಡಿದ್ದ ರಾಜಸ್ಥಾನ ಮೂಲದ ಮೂವರು ಖದೀಮರನ್ನು ಬಂಧಿಸಿದ್ದಾರೆ. ದಿನೇಶ್ ಕುಮಾರ್(35), ದೀಪಕ್ ಕುಮಾರ್(26), ರಮೇಶ್ ಕುಮಾರ್ (31) ಬಂಧಿತರು. ನಗರದ ಕೆಬಿ ಬಡಾವಣೆಯ ಕೀರ್ವಾಡಿ ಲೇಔಟ್​ನ ನಿವಾಸಿ ಗಿರೀಶ್ ಎನ್ನುವರು ಜು.14ರಂದು ತಾವು ಯಾರು ಇಲ್ಲದಾಗ ತಮ್ಮ ಮನೆಯಲ್ಲಿ ಕಳ್ಳತನ‌ವಾಗಿದೆ ಎಂದು ಕೆಟಿಜೆ ನಗರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಚುರುಕುಗೊಳಿಸಿದ್ದ …

Read More »

ಮನೆಕೆಲಸದಾಕೆ ಮೇಲೆ ಅತ್ಯಾಚಾರ: ಮಧ್ಯಾಹ್ನ 2:45ಕ್ಕೆ ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಪ್ರಕಟ

ಬೆಂಗಳೂರು: ಮನೆ ಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಆರೋಪ ಸಂಬಂಧ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಶಿಕ್ಷೆಯ ಪ್ರಮಾಣವನ್ನು ಮಧ್ಯಾಹ್ನ 2:45ಕ್ಕೆ ಪ್ರಕಟಿಸುವುದಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿಳಿಸಿದೆ. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರಿದ್ದ ನ್ಯಾಯಪೀಠ, ಸುದೀರ್ಘ ವಾದ ಆಲಿಸಿದ ಬಳಿಕ, ಮಧ್ಯಾಹ್ನ ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಹೇಳಿದೆ. ಪ್ರಕರಣದ ಹಿನ್ನೆಲೆ : ಮೈಸೂರಿನ ಕೆ.ಆರ್. ನಗರದ ಸಂತ್ರಸ್ತ ಮಹಿಳೆ …

Read More »

ಧಾರವಾಡ ಶಹರ ಪೊಲೀಸ್ ಠಾಣೆ ವತಿಯಿಂದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ.

ಧಾರವಾಡ ಶಹರ ಪೊಲೀಸ್ ಠಾಣೆ ವತಿಯಿಂದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ… ಧಾರವಾಡ ಎಸಿಪಿ ಪ್ರಶಾಂತ್ ಸಿದ್ಧನಗೌಡರಿಂದ ಮನೆ ಮನೆಗೆ ಪೊಲೀಸ್ ಉದ್ದೇಶ ಮನವರಿಕೆ.. ಶಾಂತಿ ಸಮಾಜ ಹಾಗೂ ಕಾನೂನು ಸುವ್ಯವಸ್ಥೆ ಸೇರಿ ಸಮಾಜಘಾತುಕ ಶಕ್ತಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜನ ಸ್ನೇಹಿ ಪೊಲೀಸ್ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಇತ್ತೀಚೆಗೆ ಜಾರಿಯಾಗಿರುವ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಧಾರವಾಡ ಶಹರ ಪೊಲೀಸ್ ಠಾಣೆಯ ವತಿಯಿಂದ ನಡೆಸಲಾಯಿತು. ‌ ಹೌದು …

Read More »