Breaking News

ಬೆಳಗಾವಿ

129 ನೇ ವಿಶ್ವರತ್ನ ಡಾ||ಬಿ.ಆರ್.ಅಂಬೇಡ್ಕರರ ಜಯಂತಿ ಆಚರಿಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ.

  ಗೋಕಾಕ: ತಾಲ್ಲೂಕಿನ ಸುಲಧಾಳ ಗ್ರಾಮದಲ್ಲಿ 129 ನೇ ವಿಶ್ವರತ್ನ ಡಾ||ಬಿ.ಆರ್.ಅಂಬೇಡ್ಕರರ ಜಯಂತಿಯನ್ನು ಪೂಜೆ ಮಾಡುವ ಮೂಲಕ ಅತಿ ಸರಳವಾಗಿ ಆಚರಿಸಲಾಯಿತು. ಪ್ರಸ್ತುತ ಕೋವಿಡ್—19 ವೈರೆಸ್ ಹರಡುವಿಕೆಯನ್ನು ತಡೆಗಟ್ಟವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶ ಪಾಲಿಸುವ ನಿಟ್ಟಿನಲ್ಲಿ ಡಾ||ಬಿ.ಆರ್.ಅಂಬೇಡ್ಕರರ 129 ನೇ ಜಯಂತಿಯನ್ನು ಸುಲಧಾಳ ಗ್ರಾಮದಲ್ಲಿ ಅತಿ ಸರಳವಾಗಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ಸುಲಧಾಳ ಗ್ರಾಮದ ಅಧ್ಯಕ್ಷರಾದ …

Read More »

ಜೀವದ ಹಂಗು ತೊರೆದು ಹಗಲಿರುಳು ಶ್ರಮಸುತ್ತಿರುವ ಎಲ್ಲಾ ಇಲಾಖೆ ಮತ್ತು ಸಿಬ್ಬಂದಿಗಳಿಗೂ

ಗೋಕಾಕ ತಾಲೂಕಿನ   ಘಟಪ್ರಭಾದಲ್ಲಿ   ಲಾಕ್ ಡೌನ್ ಸಲವಾಗಿ ತಮ್ಮ ಜೀವದ ಹಂಗು ತೊರೆದು ಹಗಲಿರುಳು ಶ್ರಮಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೂ ,ಪೌರಕಾರ್ಮಿಕರಿಗೂ,ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೂ,ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಘಟಪ್ರಭಾ ಹೊಸಮಠದ ಪೂಜ್ಯ ಶ್ರೀ ವಿರುಪಾಕ್ಷ ದೇವರು ದಿನಾಂಕ,14-04-2020 ರಂದು ಮದ್ಯಾಹ್ನ ಮಹಾಪ್ರಸಾದ ವ್ಯವಸ್ಥೆ ಮಾಡಿದ್ದರು. ರಾಜ್ಯ ಎನ್ ಟಿ ಸಿ ಒಕ್ಕೂಟದ ಅಧ್ಯಕ್ಷ ಜಿ.ಎಸ್. ಕರ್ಪೂರಮಠ,ಪಿ ಎಸ್ ಆಯ್ ಹಾಲಪ್ಪ. ಬಾಲದಂಡಿ.ಸರಕಾರಿ ವೈದ್ಯಾಧಿಕಾರಿ ಡಾ !! ಪ್ರವೀಣ.ಕರಗಾಂವಿ,ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ …

Read More »

ಸಂಕಷ್ಟದಲ್ಲಿ ಸಿಲುಕಿರುವ ರೈತರ ಬಗ್ಗೆ ವ್ಯಯಕ್ತಿಕ ಕಾಳಜಿ ವಹಿಸಿರುವ ಶಾಸಕ ಸತೀಶ ಜಾರಕಿಹೊಳಿ

ಯಮಕನಮರಡಿ: ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿರುವ ರೈತರ ಬಗ್ಗೆ ವ್ಯಯಕ್ತಿಕ ಕಾಳಜಿ ವಹಿಸಿರುವ ಶಾಸಕ ಸತೀಶ ಜಾರಕಿಹೊಳಿ ಅವರು ಇಂದು ರೈತನೊಬ್ಬ ಬೆಳೆದ ಎರಡು ಎಕರೆ ತರಕಾರಿ ಖರೀದಿಸುವ ಮೂಲಕ ರೈತನಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇಲ್ಲಿನ ಬುಡಕ್ಯಾನಟ್ಟಿ ಗ್ರಾಮದ ರೈತ ನಿಂಗಪ್ಪ ನಾಯಕ ಎರಡು ಎಕರೆ ಜಮೀನಿನಲ್ಲಿ ತರಕಾರಿ ಬೆಳೆದು ದಿಕ್ಕು ತೋಚದೆ ಕಂಗಾಲಾಗಿದ್ದನು. ಬಳಿಕ ಶಾಸಕರು ರೈತನಿಂದ ಯೋಗ್ಯ ದರದಲ್ಲಿ‌ ತರಕಾರಿಗಳನ್ನು ಖರೀದಿಸಿ ಯಮಕನಮರಡಿ ಮತಕ್ಷೇತ್ರದ ಜನರಿಗೆ ಉಚಿತವಾಗಿ …

Read More »

.ಹಿಂಡಲ್ಕೋ ಕಂಪನಿಗಳು ನೀಡುತ್ತಿರುವ 300ಕ್ಕೂ ಹೆಚ್ಚು ಆಹಾರ  ಕಿಟ್ ಗಳನ್ನು ಬಡವರಿಗೆ ನೀಡಿದ ಸತೀಶ್ ಜಾರಕಿಹೊಳಿ

ಬೆಳಗಾವಿ:  ಕಾಕತಿ ಗ್ರಾಮದ  ಸರ್ಕಾರಿ ಮಾದರಿ ಮರಾಠಿ ಶಾಲೆಯಲ್ಲಿ ಬಡ ಕುಟುಂಬಗಳಿಗೆ  ಹಿಂಡಲ್ಕೋ ಕಂಪನಿಗಳು ನೀಡುತ್ತಿರುವ 300ಕ್ಕೂ ಹೆಚ್ಚು ಆಹಾರ  ಕಿಟ್ ಗಳನ್ನು ಶಾಸಕ , ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬಡವರಿಗೆ ನೀಡಿದರು. ಕೊರೊನಾ ಮಾರಕ ಸೋಂಕಿನಿಂದ ದೇಶದಲ್ಲಿ ಲಾಕ್ ಡೌನ್ ಘೋಷಿಸಿದೆ. ಇದರಿಂದ ಬಡವರು, ಕೂಲಿ ಕಾರ್ಮಿಕರು ಆಹಾರಕ್ಕಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಉಳ್ಳವರು ಬಡವರ ನೆರವಿಗೆ ನಿಲ್ಲಬೇಕು. ಸಂಕಷ್ಟದಲ್ಲಿ ಇರುವ ಬಡವರಿಗೆ ತಮ್ಮಿಂದ ಆದ ಸಹಾಯವನ್ನು …

Read More »

ಬೆಳಗಾವಿ: ಕಾಂಗ್ರೆಸ್ ರಸ್ತೆಯಲ್ಲಿನ ವೈನ್ ಶಾಪ್ ಕಳ್ಳತನಕ್ಕೆ ಯತ್ನ

ಬೆಳಗಾವಿ: ಲಾಕ್ ಡೌನ್ ನಿಂದಾಗಿ ಸಾರಾಯಿ ಸಿಗದಕ್ಕೆ  ಕಂಗಾಲಾಗಿರುವ ಕುಡುಕರು ಮದ್ಯದಂಗಡಿ ಕಳ್ಳತನ ಯತ್ನಿಸಿ ವಿಫಲರಾಗಿದ್ದರೆ.  ಇಲ್ಲಿನ ಕಾಂಗ್ರೆಸ್ ರಸ್ತೆಯಲ್ಲಿನ ರವಿ ಹಂಜಿ ಮಾಲೀಕತ್ವದ ವೈನ್ಸ್ ಮಳಿಗೆ ಕನ್ನ ಹಾಕಿದ ಖದೀಮರು ವೈನ್ಸ್ ಶಾಪ್ ನ ಹೆಂಚು ತಗೆದಾಗ ತಗಡಿನ ಶೀಟ್ ಗಳು ಎದುರಾಗಿವೆ. ತಗಡಿನ ಶೀಟ್   ಕೊರೆದು ಕೆಳಗೆ ಇಳಿಯಲಾಗದೆ ಲಕ್ಷಾಂತರ ಮೌಲ್ಯದ ಮದ್ಯ ಬಚಾವ್ ಆಗಿದೆ.

Read More »

ಗೋಕಾಕ ಇಂದಿರಾ ಕ್ಯಾಂಟಿನ ಉದ್ಘಾಟನೆ ಮಾಡಿದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ.

  ಗೋಕಾಕ: ನಗರದಲ್ಲಿ ಇಂದು ಸುಮಾರು ದಿನಗಳಿ ಸ್ಥಗಿತವಾಗಿರುವ ಇಂದಿರಾ ಕ್ಯಾಂಟಿನ, ಇಂದು ಗೋಕಾಕ ಕ್ಷೇತ್ರದ ಶಾಸಕರು ಹಾಗೂ ಜಲಸಂಪನ್ಮೂಲ ಸಚಿವರು ರಮೇಶ ಜಾರಕಿಹೊಳಿ ಅವರ ಗೋಕಾಕ ಇಂದಿರಾ ಕ್ಯಾಂಟಿನ್ ಗೆ ಉದ್ಘಾಟನಾ ಮಾಡುವ ಮೂಲಕ ಚಾಲನೆ ನೀಡಿದರು. ಬಡವರಿಗೆ ಮತ್ತು ನಿರಾಶ್ರಿತರಿಗಾಗಿ ಸರ್ಕಾರ ಇಂದಿರಾ ಕ್ಯಾಂಟೀನ್ ಕಡಿಮೆ ದರದಲ್ಲಿ ಉಪಾಹಾರ ಮತ್ತು ಊಟದ ವ್ಯವಸ್ಥೆ ಮಾಡವ ನಿಟ್ಟಿನಲ್ಲಿ ನಿರ್ದೇಶನಮಾಡಲಾಗಿತ್ತು, ಆದರೆ ಇಂದು ಸರಕಾರ ಕೊರೊನಾ ಲಾಕ್​ಡೌನ್​ ಬಳಿಕ ಕೆಲದಿನಗಳ …

Read More »

ಬೆಳಗಾವಿಯಲ್ಲಿ ಮತ್ತೊಂದು ಕೊರೋನಾ ಪ್ರಕರಣ ದೃಢಪಟ್ಟಿದ್ದು, ಒಟ್ಟಾರೆ ಜಿಲ್ಲೆಯಲ್ಲಿ 18ಕ್ಕೇರಿದೆ.

  ಬೆಳಗಾವಿ :ರಾಜ್ಯದಲ್ಲಿ ಇಂದು 11 ಹೊಸ ಪ್ರಕರಣ ಪತ್ತೆಯಾಗಿದ್ದು, ಒಟ್ಟಾರೆ 258ಕ್ಕೇರಿದೆ. 9 ಜನರು ಸಾವನ್ನಪ್ಪಿದ್ದಾರೆ. ಇಂದು ಬಾಗಲಕೋಟೆ ಮತ್ತು ಕಲಬುರ್ಗಿಯಲ್ಲಿ ತಲಾ 3 ಪ್ರಕರಣ ದಾಖಲಾಗಿದೆ. ಬೆಂಗಳೂರು ನಗರದಲ್ಲಿ 2, ಚಿಕ್ಕಬಳ್ಳಾಪುರ, ಬೆಳಗಾವಿ ಹಾಗೂ ವಿಜಯಪುರದಲ್ಲಿ ತಲಾ ಒಂದು ಪ್ರಕರಣ ಇಂದು ದಾಖಲಾಗಿದೆ. ಬೆಳಗಾವಿಯಲ್ಲಿ ದೃಢಪಟ್ಟಿರುವ 33 ವರ್ಷದ ಪುರುಷ ದೆಹಲಿಗೆ ಹೋಗಿ ಬಂದಿದ್ದ ಎನ್ನುವುದು ಗೊತ್ತಾಗಿದೆ. ಆದರೆ ಆತ ಯಾವ ಪ್ರದೇಶದವನು ಎನ್ನುವುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. …

Read More »

ಜನರು ಆತಂಕ ಪಡುವ ಅಗತ್ಯವಿಲ್ಲ: ಸಚಿವ ರಮೇಶ ಜಾರಕಿಹೊಳಿ

ಗೋಕಾಕ : ಎಲ್ಲೆಡೆ ಹರಡುತ್ತಿರುವ ಮಾರಕ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಪ್ರಧಾನಮಂತ್ರಿ ‌ನರೇಂದ್ರ ಮೋದಿಯವರು ಭಾರತದ ಲಾಕ್ ಡೌನ್ ಅವಧಿಯನ್ನು ಮೇ 3ರ ವರೆಗೆ‌ ವಿಸ್ತರಿಸಿರುವುದನ್ನು‌ ನಾನು‌ ಸ್ವಾಗತಿಸುತ್ತೇನೆ.ಸೊಂಕು ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳನ್ನು ಮುಕ್ತಕಂಠದಿಂದ ಗೌರವಿಸೋಣ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ವಿಶ್ವವ್ಯಾಪಿಯಾಗಿರುವ ಕೊರೊನಾ ವೈರಸ್ ನ್ನು ನಿರ್ಮೂಲನೆ ಮಾಡುವುದೇ ನಮ್ಮ ಆದ್ಯ ಧ್ಯೇಯವಾಗಬೇಕು. ಪ್ರಪಂಚದ ಬಹುದೊಡ್ಡ …

Read More »

ಬಡವರ ಗೋಳು ಕೇಳುವವರು ಯಾರು ಬೆಳೆ ಬೆಳೆಸಿದ ರೈತರು ಕಂಗಾಲಾಗುತ್ತಿದ್ದಾರೆ

ಬೆಳಗಾವಿ :-ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಜನರ ಗೋಳು ಕೋರೋನಾ ಎಂಬ ಮಹಾಮಾರಿ ಯಿಂದ ಜನರು ಎಲ್ಲಿ ಕೆಲಸಕ್ಕೆ ಹೋಗದಂತೆ ಆಗಿದೆ ಕೋರೋನಾ ಕಾರಣದಿಂದಾಗಿ ಹಳ್ಳಿಯ ಜನರುತಮ್ಮ ಹೊಲದಲ್ಲಿ ಬೆಳೆಸಿದ ಬೆಳೆ ಸಹಿತ ಮಾರುವಂತಿಲ್ಲ ಸುಮಾರು 3ಲಕ್ಷ ಖರ್ಚು ಮಾಡಿ 2ಎಕರೆ ಕಲ್ಲಂಗಡಿ ಹಚ್ಚಿದ್ದಾರೆ ಈಗ ಮಾರಾಟ ಆಗದೆ ಉಳಿದು ಮಣ್ಣು ಮುಚ್ಚುತ್ತಿದ್ದಾರೆ ಸುಮಾರು ಎಂಟು ಲಕ್ಷ ಲಾಭವಾಗುತ್ತಿತ್ತು. ಈಗ ಎಲ್ಲ ಮಣ್ಣು ಪಾಲಾಗಿದೆ ಇದೇ ರೀತಿ …

Read More »

ಸುಮಾರು 600 ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದ, ಸತೀಶಣ್ಣಾ ಜಾರಕಿಹೊಳಿ ಅಭಿಮಾನಿ ಬಳಗ

ಬೆಳಗಾವಿ: ಕಿತ್ತೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸತೀಶಣ್ಣಾ ಜಾರಕಿಹೊಳಿ ಅಭಿಮಾನಿ ಬಳಗದಿಂದ ಹಬೀಬ್ ಶೀಲ್ಲೆದಾರ ನೇತೃತ್ವದಲ್ಲಿ ಸೋಮವಾರ ಸುಮಾರು 600 ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದರು. ದೇವರಶೀಗಿಹಳ್ಳಿ, ಮಾಗ೯ನಕೊಪ್ಪ , ದಾಸ್ತಿಕೊಪ್ಪ , ಹೊಸಕಾದರವಳ್ಳಿ , ತುರಮರಿ , ಕಲಬಾಂವಿ, ಹಿರೇನಂದಿಹಳ್ಳಿ ,ಚಿಕ್ಕನಂದಿಹಳ್ಳಿ , ಎತ್ತಿನಕೇರಿ , ಮಲ್ಲಾಪೂರ , ಅವರಾದಿ , ನಿಚ್ಚಣಕಿ , ಡೊಂಬರಕೊಪ್ಪ, ಗ್ರಾಮಗಳಲ್ಲಿನ ಬಡಕುಟುಂಬಗಳಿಗೆ ಆಹಾರ ಕಿಟ್ ನೀಡಿದರು. ಆಹಾರ ಕಿಟ್ ನಲ್ಲಿ …

Read More »