ಕಳೆದ ಕೆಲ ತಿಂಗಳಗಳಿಂದ ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ.ಇದನ್ನುತಡೆಯಲುಕಾಗವಾಡ ಪೊಲೀಸರುವಿಫಲರಾಗಿದ್ದಾರೆ.ಇದರ ವಿರುದ್ಧ ಗೃಹ ಸಚಿವರಿಗೆ ನಾನು ದೂರು ಸಲ್ಲಿಸಿದ್ದೇನೆ ಎಂದುಕಾಗವಾಡ ಶಾಸಕ ಶ್ರೀಮಂತ ಪಾಟೀಲರು ಸ್ಪಷ್ಟಪಡಿಸಿದ್ದರು.
ಕಾಗವಾಡ ಮತಕ್ಷೇತ್ರ ವ್ಯಾಪ್ತಿಯಲ್ಲಿ ದಿನನಿತ್ಯ ಸರಣಿಗಳತನ, ಮನೆಗಳಲ್ಲಿ ದರೋಡೆ, ನದಿ ತೀರದ ಪಂಪ ಸೆಟಗಳ ಕೇಬಲ ಕಳ್ಳತನ ಬಹಳಷ್ಟು ಪ್ರಮಾಣದಲ್ಲಿಹೆಚ್ಚಾಗಿದ್ದಾವೆ. ಈ ಪ್ರಕರಣಗಳು ತನಿಖೆ ಮಾಡಿ ಕಳ್ಳರನ್ನು ಬಂಧಿಸಲುಕಾಗವಾಡ ಪೊಲೀಸರುವಿಫಲರಾಗಿದ್ಧಾರೆ.
ಜುಗುಳ ಗ್ರಾಮದಲ್ಲಿ ಮನೆ ದರೋಡೆ ಮಾಡಿ 16 ಲಕ್ಷರೂಪಾಯಿಚಿನ್ನ ಕಳ್ಳತನವಾಗಿದೆ.ಇಂತಹ ಪ್ರಕರಣಗಳತನಿಖೆ ಮಾಡಲು ನಾನು ಪದೇ ಪದೇ ಪೊಲೀಸರ ಸಭೆಯಲ್ಲಿ ವಾರ್ನ್ ಮಾಡಿದ್ದೆಆದರೆಈವರೆಗೆ ಕಳ್ಳರನ್ನು ಬಂಧಿಸಿಲ್ಲ. ಯಾವುದೇ ಪ್ರಕರಣದಲ್ಲಿ ಪರಿವರ್ತನೆಕಂಡಿಲ್ಲ.
ಇಲ್ಲಿನಜನರ ಬೇಡಿಕೆಗಳು, ಅವರ ಸಮಸ್ಯೆಗಳು, ನನ್ನಗಮನದಲ್ಲಿದೆ.ಅನೇಕ ಜನರು ನನ್ನ ಮುಂದೆಕಣ್ಣೀರುಇಟ್ಟಿದ್ದಾರೆ.
ಈ ಎಲ್ಲ ಪ್ರಕರಣಗಳ ಬಗ್ಗೆ ಹಾಗೂ ಪೊಲೀಸ್ ಸಿಬ್ಬಂದಿ ಕೊರತೆ ಬಗ್ಗೆ ಗೃಹ ಸಚಿವಅರಗಜ್ಞಾನೇಂದ್ರÀರಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದ್ದೇನೆ.ಗೃಹ ಸಚಿವರುಕೂಡಲೇಜಿಲ್ಲಾ ಪೊಲೀಸ ಪ್ರಮುಖರಿಗೆಖಡಕ್ ಸೂಚನೆ ನೀಡಿತಮ್ಮಆದೇಶ ನೀಡಿದ್ದಾರೆ.ಎಂದು ಶಾಸಕ ಶ್ರೀಮಂತ ಪಾಟೀಲರು ಹೇಳಿದರು.