Breaking News

ದಿ ಕಾಶ್ಮೀರ್ ಫೈಲ್ಸ್ ಕಟ್ಟುಕಥೆ; ಕಾಂಗ್ರೆಸ್ ನಾಯಕರ ಹೇಳಿಕೆಗೆ ಶಾಸಕ ಪಿ.ರಾಜೀವ್ ಆಕ್ರೋಶ

Spread the love

ಬೆಂಗಳೂರು: ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕಟ್ಟುಕಥೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕಿಡಿಕಾರಿರುವ ಶಾಸಕ ಪಿ.ರಾಜೀವ್, ಕಾಂಗ್ರೆಸ್ ನವರಿಗೆ ಇನ್ನೊಬ್ಬರ ಸಾವು ಕಟ್ಟುಕಥೆ ಆಗುತ್ತೆ. ಅದೇ ನಿಮ್ಮ ಮನೆಯವರಿಗೆ ಅಂತಹ ಸ್ಥಿತಿ ಬಂದಿದ್ದರೆ ಏನೆಂದು ಮಾತನಾಡುತ್ತಿದ್ದಿರಿ ಎಂದು ಪ್ರಶ್ನಿಸಿದ್ದಾರೆ.

 

ಕಾಶ್ಮೀರಿ ಪಂಡಿತರನ್ನು ರಾತ್ರೋರಾತ್ರಿ ಅಲ್ಲಿಂದ ಓಡಿಸಿದರು. ಆ ಕ್ಷಣದಲ್ಲಿ ನಿಮ್ಮ ಕುಟುಂಬದವರು ಅಲ್ಲಿ ಇದ್ದಿದ್ದರೆ ಏನು ಮಾಡ್ತಿದ್ರಿ? ನಿಮ್ಮ ಹೆಂಡತಿಯೋ ಸಂಬಂಧಿಕರೋ ಅಲ್ಲಿ ಇದ್ದಿದ್ದರೆ ಏನಾಗುತಿತ್ತು? ಆಗ ಹೀಗೆ ಹೇಳಿಕೆ ಕೊಡುತ್ತಿದ್ದರೇ ಎಂದು ಕೇಳಿದ್ದಾರೆ.

ರಾಜಕೀಯ ಬೇಕು, ಆದರೆ ಮಾತನಾಡುವಾಗ ಮಾನವೀಯತೆ ಇರಲಿ. ಹೃದಯಹೀನ, ವಿಕೃತ ಮನಸ್ಸಿನವರು ಹೀಗೆ ಹೇಳುತ್ತಾರೆ. ಕಾಂಗ್ರೆಸ್ ನವರು ಅದೇ ಮನಸ್ಥಿತಿ ಹೊಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಮೂನ್ನೂರು ರೂಪಾಯಿ ಹಣಕ್ಕಾಗಿ ಕಲ್ಲು ಎತ್ತಿ ಹಾಕಿ ಅಪರಿಚಿತ ವ್ಯಕ್ತಿಯ ಕೊಲೆ

Spread the loveಬಳ್ಳಾರಿ: ಕುಡಿದ ಮತ್ತಿನಲ್ಲಿ ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆ ಅಪರಿಚಿತ ವ್ಯಕ್ತಿಯೊಬ್ಬನ ಬಳಿ ಇದ್ದ ಮೂನ್ನೂರು ರೂಪಾಯಿ ಕಸಿದುಕೊಂಡು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ