Breaking News

ಇಂಜೆಕ್ಷನ್​​ ತೆಗೆದುಕೊಂಡೇ IPL​ನಲ್ಲಿ ವರುಣ್​​ ಬೌಲಿಂಗ್ -ಸಂಪೂರ್ಣ ಫಿಟ್ ಇಲ್ಲದಿದ್ರೆ ವಿಶ್ವಕಪ್​ನಿಂದ ಔಟ್​?

Spread the love

ಟಿ20 ವಿಶ್ವಕಪ್ ಹತ್ತಿರವಾದಷ್ಟೂ ಟೀಮ್ ಇಂಡಿಯಾಕ್ಕೆ ತಲೆನೋವುಗಳು ಹೆಚ್ಚಾಗ್ತಿವೆ. ಕೆಲ ಆಟಗಾರರ ಅಸ್ಥಿರ ಪ್ರದರ್ಶನದಿಂದ ಚಿಂತೆಗೀಡಾಗಿರುವ ಬಿಸಿಸಿಐ ಹಾಗೂ ಮ್ಯಾನೇಜ್​ಮೆಂಟ್​​ಗೆ ಮತ್ತೊಂದು ಹೊಸ ತಲೆ ನೋವು ಆರಂಭವಾಗಿದೆ. ಇದು ಮಹತ್ವದ ಟೂರ್ನಿಯಲ್ಲಿ ಭಾರತಕ್ಕೂ ಹಿನ್ನಡೆಯಾಗಲಿದೆ.

ಟಿ20 ವಿಶ್ವಕಪ್​​ಗೂ ಮುನ್ನ ಟೀಮ್ ಇಂಡಿಯಾಕ್ಕೆ ಶಾಕ್ ಮೇಲೆ ಶಾಕ್​ಗಳು ಎದುರಾಗ್ತಿವೆ. ಈಗಾಗಲೇ ಕೆಲ ಆಟಗಾರರ ಅಸ್ಥಿರ ಪ್ರದರ್ಶನ ಟೀಮ್​ ಮ್ಯಾನೇಜ್​ಮೆಂಟ್​​ ಹಾಗೂ ಬಿಗ್​​ಬಾಸ್​ಗಳನ್ನ ಚಿಂತೆಗೆ ದೂಡಿದೆ. ಅದರ ಬೆನ್ನಲ್ಲೇ ಇದೀಗ ಕೊಲ್ಕತ್ತಾ ನೈಟ್​ ರೈಡರ್ಸ್​ ತಂಡದ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಹೊಸ ತಲೆನೋವಾಗಿ ಮಾರ್ಪಟಿದ್ದಾರೆ.

 

 

ಮತ್ತೆ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ ವರುಣ್..!
2ನೇ ಹಂತದ ಐಪಿಎಲ್​ನಲ್ಲಿ ಅರಬ್ಬರ ನಾಡಲ್ಲಿ ಸ್ಪಿನ್​ ಮೋಡಿ ಮಾಡ್ತಿರೋ ವರುಣ್​ ಚಕ್ರವರ್ತಿಯನ್ನ ವಿಶ್ವಕಪ್​ನಲ್ಲಿ ಭಾರತದ ಕೀ ಪ್ಲೇಯರ್​ ಎಂದೇ ಹೇಳಲಾಗಿತ್ತು. ಆದ್ರೆ, ಇದೀಗ ಈ ವರುಣ್​ ಚಕ್ರವರ್ತಿ ಇಂಜುರಿಗೆ ತುತ್ತಾಗಿದ್ದಾರೆ ಎಂಬ ಆಘಾತಕಾರಿ ಸುದ್ದಿ ಕೆಕೆಆರ್​ ಕ್ಯಾಂಪ್​ನಿಂದ ಹೊರ ಬಿದ್ದಿದೆ. ಕಳೆದ ಪಂದ್ಯದಲ್ಲೇ ಇದರ ಜೊತೆಗೆ ಇಂಜೆಕ್ಷನ್ ತೆಗೆದುಕೊಂಡು ಕಣಕ್ಕಿಳಿದು ಬೌಲಿಂಗ್​ ಮಾಡಿದ್ದಾರೆ ಅನ್ನೋದು ಇನ್ನೂ ಆಘಾತ ಮೂಡಿಸಿದೆ. ಈ ಹಿಂದೆ ಸಾಕಷ್ಟು ಬಾರಿ ಮೊಣಕಾಲಿನ ಇಂಜುರಿಗೆ ತುತ್ತಾಗಿದ್ದ ವರುಣ್, ಇದೀಗ ಮತ್ತದೇ ಸಮಸ್ಯೆಗೆ ತುತ್ತಾಗಿದ್ದಾರೆ. ಸದ್ಯಕ್ಕೆ ದೊಡ್ಡ ಪ್ರಮಾಣದ ಗಾಯ ಕಾಡದಿದ್ದರೂ, ಟಿ20 ವಿಶ್ವಕಪ್​ ವೇಳೆಗೆ ಚಕ್ರವರ್ತಿ ಫುಲ್​ಫಿಟ್ ಇರ್ತಾರಾ ಎಂಬ ಚಿಂತೆ ಇದೀಗ ಬಿಸಿಸಿಐಗೆ ಕಾಡ್ತಿದೆ.

ಸಂಪೂರ್ಣ ಫಿಟ್ ಇಲ್ಲದಿದ್ದರೆ ವಿಶ್ವಕಪ್​ನಿಂದ ಔಟ್​..?
ಈಗಾಗಲೇ ಎರಡು ಬಾರಿ ಟೀಮ್​ ಇಂಡಿಯಾಗೆ ಆಯ್ಕೆಯಾಗಿ ಫಿಟ್ನೆಸ್ ಸಮಸ್ಯೆಯಿಂದ ಔಟ್​ ಆಗಿರುವ ವರುಣ್ ಚಕ್ರವರ್ತಿ, ಈ ಬಾರಿಯೂ ತಂಡದಿಂದ ಔಟ್​​ ಆಗ್ತಾರಾ ಅನ್ನೋ ಪ್ರಶ್ನೆ ಹುಟ್ಟಿದೆ. ಯಾಕಂದ್ರೆ, ಫಿಟ್ನೆಸ್ ವಿಚಾರದಲ್ಲಿ ರಾಜೀ ಮಾಡಿಕೊಳ್ಳದ ಬಿಸಿಸಿಐ, ಸ್ಟಾರ್​ ಆಟಗಾರರನ್ನೇ ಕೈ ಬಿಡೋಕೆ ಹಿಂದೆ ಮುಂದೆ ನೋಡಲ್ಲ. ಹೀಗಾಗಿ ಸಂಪೂರ್ಣ ಫಿಟ್ ಇಲ್ಲದಿದ್ದರೇ, ವಿಶ್ವಕಪ್​ ತಂಡದಿಂದಲೂ ವರುಣ್ ಔಟ್​ ಆಗೋದು ಗ್ಯಾರಂಟಿ. ಅಕ್ಟೋಬರ್ 10ರವರೆಗೆ ತಂಡದಲ್ಲಿನ ಬದಲಾವಣೆಗೆ ಅವಕಾಶವಿದ್ದು, ಈ ವೇಳೆ ಚಹಲ್​ಗೆ ಸ್ಥಾನ ನೀಡುವ ನಿರ್ಧಾರ ತೆಗೆದುಕೊಂಡರೂ ಅಚ್ಚರಿ ಇಲ್ಲ.

 

 

ಸದ್ಯ ಐಪಿಎಲ್‌ನಲ್ಲಿ ವರುಣ್​ ಚಕ್ರವರ್ತಿ ನೀಡ್ತಾ ಇದ್ದ ನೀಡುತ್ತಿರುವ ಪ್ರದರ್ಶನ ಟೀಮ್​ ಇಂಡಿಯಾ ಪಾಳೆಯದಲ್ಲಿ ಹೊಸ ಭರವಸೆ ಮೂಡಿಸಿತ್ತು. ಆದ್ರೀಗ ಈ ಎಲ್ಲಾ ನಿರೀಕ್ಷೆಯನ್ನೂ ಇಂಜುರಿ ಹುಸಿಗೊಳಿಸುತ್ತಾ ಎಂಬ ಅನುಮಾನ ಹುಟ್ಟಿದೆ. ಒಂದೆಡೆ ವರುಣ್​ ಕರಿಯರ್​ ಇಂಜುರಿ ಮುಳ್ಳಾಗುತ್ತಾ ಅನ್ನೋದರ ಜೊತೆಗೆ ಮಿಸ್ಟರಿ ಸ್ಪಿನ್ನರ್​​ ಅಲಭ್ಯತೆ ಭಾರತಕ್ಕೆ ಎಷ್ಟರ ಮಟ್ಟಿಗೆ ಹಿನ್ನಡೆಯಾಗಬಹುದು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಜೊತೆಗೆ ಇಂಜುರಿಗೆ ತುತ್ತಾದ ಆಟಗಾರನಿಗೆ ಇಂಜೆಕ್ಷನ್​ ನೀಡಿ ಆಡಿಸೋ ನಿರ್ಧಾರ ತೆಗೆದುಕೊಂಡ ಫ್ರಾಂಚೈಸಿಯ ನಿರ್ಧಾರ ಸರೀನಾ.? ಅನ್ನೋ ಚರ್ಚೆಯೂ ನಡೀತಿದೆ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ