ಮುಂಬೈ: ಬೇರೆ ಯಾವುದೇ ಕ್ಷೇತ್ರದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸುವಂತೆ ನಾನು ಸಚಿನ್ಗೆ ಸಲಹೆ ನೀಡುತ್ತೇನೆ ಅಂತಾ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಎಚ್ಚರಿಕೆಯನ್ನ ನೀಡಿದ್ದಾರೆ.
ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಮೊನ್ನೆ ಪಾಪ್ ಸಿಂಗರ್ ರಿಹಾನಾ ಟ್ವೀಟ್ ಮಾಡಿದ್ದರು. ಇದನ್ನ ಖಂಡಿಸಿ ಬಾಲಿವುಡ್ ಹಾಗೂ ಕ್ರಿಕೆಟ್ ಸ್ಟಾರ್ಗಳು #IndiaTogether #IndiaAgainstPropaganda ಹ್ಯಾಶ್ ಟ್ಯಾಗ್ ಅಡಿ ಅಭಿಯಾನ ಶುರುಮಾಡಿದ್ದರು. ಈ ಅಭಿಯಾನಕ್ಕೆ ಕೈಜೋಡಿಸಿ ಟ್ವೀಟ್ ಮಾಡಿದ್ದ ತೆಂಡೂಲ್ಕರ್.. ಭಾರತದ ಸಾರ್ವಭೌಮತ್ವ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಬಾಹ್ಯ ಶಕ್ತಿಗಳು ಇಲ್ಲಿ ಪ್ರೇಕ್ಷಕರಾಗಬಹುದು. ಆದರೆ ಭಾಗವಹಿಸುವವರಲ್ಲ. ಭಾರತೀಯರಿಗೆ ಭಾರತ ಗೊತ್ತು. ಏನು ಬೇಕು ಅನ್ನೋದನ್ನ ಅವರೇ ನಿರ್ಧರಿಸುತ್ತಾರೆ. ದೇಶದ ಐಕ್ಯತೆಗಾಗಿ ಒಂದಾಗೋಣ ಎಂದಿದ್ದರು.