Breaking News

ಇಂದಿರಾ ಕ್ಯಾಂಟೀನದ್ದು ಎಂದು ಸಚಿವರಿಗೆ ಹೋಟೆಲ್​ ಊಟ ತಿನ್ನಿಸಿ ಯಾಮಾರಿಸಿದ ಅಧಿಕಾರಿಗಳು

Spread the love

ಶಿವಮೊಗ್ಗ, (ನವೆಂಬರ್ 25): ಸಚಿವ ರಹೀಂ ಖಾನ್ ಅವರು ಇಂದು (ನವೆಂಬರ್ 25) ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್​ಗೆ ಭೇಟಿ ನೀಡಿದರು. ಈ ವೇಳೆ ಅಧಿಕಾರಿಗಳು, ಇಂದೀರಾ ಕ್ಯಾಂಟೀನ್​ ಊಟ ಎಂದು ಹೇಳಿ ಸಚಿವರಿಗೆ ಹೋಟೆಲ್​ ಊಟ ತಿನ್ನಿಸಿ ಯಾಮಾರಿಸಿದ್ದಾರೆ.

ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರು ಇಂದು ಮಧ್ಯಾಹ್ನ ಇಂದಿರಾ ಕ್ಯಾಂಟಿನ್ ಗೆ ಭೇಟಿ ನೀಡಿದ್ದರು. ಈ ವೇಳೆ ಅಧಿಕಾರಿಗಳು, ಇಂದಿರಾ ಕ್ಯಾಂಟಿನ್ ಊಟ ಎಂದು ಹೇಳಿ ಹೋಟೆಲ್​ನಿಂದ ತಂದಿದ್ದ ಊಟವನ್ನು ನೀಡಿದ್ದಾರೆ.

ಅಧಿಕಾರಿಗಳು ನೀಡಿದ್ದ ಊಟವನ್ನೇ ಸಚಿವರು ಸೇವಿಸಿ ಹೋಗಿದ್ದು, ಇದೀಗ ಅಧಿಕಾರಿಗಳು ನಡೆ ಬಗ್ಗೆ ಚರ್ಚೆ ಶುರುವಾಗಿದೆ.


Spread the love

About Laxminews 24x7

Check Also

ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ​ ತೀರ್ಮಾನಕ್ಕೆ ನಾನು ಬದ್ಧ: ಸಿಎಂ

Spread the loveಮೈಸೂರು: “ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ ಮತ್ತು ಹೈಕಮಾಂಡ್​ ತೀರ್ಮಾನ ಮಾಡಬೇಕು. ಅವರು ಏನು ತೀರ್ಮಾನ ಮಾಡುತ್ತಾರೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ