ಬೆಂಗಳೂರು: ರಾಜ್ಯಾದ್ಯಂತ ಸಮೃದ್ಧ ಮಳೆಯಾಗಿ ಎಲ್ಲ ಜಲಾಶಯಗಳೂ ಭರ್ತಿಯಾಗಿವೆ. ಮುಂದಿನ ಮುಂಗಾರು ವರೆಗೂ ಜಲವಿದ್ಯುತ್ ಉತ್ಪಾದನೆಗೆ ಸಮಸ್ಯೆ ಇಲ್ಲವೆನ್ನಲಾಗುತ್ತಿದೆ. ಆದಾಗ್ಯೂ ಈ ಬಾರಿಯೂ ಗ್ರಾಹಕರ ಮೇಲೆ “ವಿದ್ಯುತ್ ದರ ಏರಿಕೆ ಬರೆ’ ಮಾತ್ರ ತಪ್ಪದು!
ಈಗಾಗಲೇ ಬೆಸ್ಕಾಂ ಸೇರಿದಂತೆ ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳು ದರ ಹೆಚ್ಚಳಕ್ಕೆ ಸಿದ್ಧತೆ ನಡೆಸಿದ್ದು, ಮಾಸಾಂತ್ಯಕ್ಕೆ ಈ ಪ್ರಸ್ತಾವನೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್ಸಿ) ಸಲ್ಲಿಕೆಯಾಗಲಿದೆ.
ರಾಜ್ಯದಲ್ಲಿ ಜಲ ವಿದ್ಯುದಾಗಾರಗಳ ಪೈಕಿ ಗರಿಷ್ಠ ಕೊಡುಗೆ ನೀಡುತ್ತಿರುವ ಲಿಂಗನಮಕ್ಕಿ ಸೇರಿದಂತೆ ಸೂಪಾ, ಮಾಣಿ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಮಟ್ಟದ ಅಂಕಿ-ಅಂಶಗಳ ಪ್ರಕಾರವೇ ಮುಂದಿನ ಜೂನ್ವರೆಗೂ ವಿದ್ಯುತ್ ಉತ್ಪಾದನೆಗೆ ಯಾವುದೇ ಕೊರತೆ ಇಲ್ಲ. ಸ್ವತಃ ಇಂಧನ ಇಲಾಖೆ ಹೇಳುವಂತೆ ಜಲವಿದ್ಯುತ್ ಉತ್ಪಾದನೆ ವೆಚ್ಚ ಉಳಿದ ಮೂಲಗಳಿಗೆ ಹೋಲಿಸಿದರೆ, ಅತ್ಯಂತ ಕಡಿಮೆ ಆಗಿದೆ. ಪ್ರತೀ ಯೂನಿಟ್ಗೆ ಸರಾಸರಿ 2.05 ರೂ. ಆಗುತ್ತದೆ. ಆದರೂ ಬೇಸಗೆಯಲ್ಲಿ ಹೆಚ್ಚಾಗಬಹುದಾದ ವಿದ್ಯುತ್ ಬೇಡಿಕೆ ಪೂರೈಸಲು ಖರೀದಿ ಅನಿವಾರ್ಯ ಆಗಲಿದ್ದು, ಅದನ್ನು ದರ ಹೆಚ್ಚಳ ರೂಪದಲ್ಲಿ ಗ್ರಾಹಕರ ಮೇಲೆ ಹಾಕುವುದು ಖಚಿತ ಎಂದು ಮೂಲಗಳು ತಿಳಿಸಿವೆ.
Laxmi News 24×7