ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣ ಪಂಚಾಯಿತಿಗೆ ನೂತನ ಕಚೇರಿಯ ಕಟ್ಟಡಕ್ಕೆ ಹಾಗೂ ಮೂಲಭೂತ ಸೌಕರ್ಯ ಕಾಮಗಾರಿಗೆ 5 ಕೋಟಿ ಅನುದಾನ ಮಂಜೂರಾಗಿದೆ ಎಂದು ದೆಹಲಿಯ ವಿಶೇಷ ಪ್ರತಿನಿಧಿ,ಎಂಎಲ್ಸಿ ಪ್ರಕಾಶ ಹುಕ್ಕೇರಿಯವರು ಹೇಳಿದರು.
ಅವರು ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣ ಪಂಚಾಯಿತಿಯ ಅನುದಾನದ ಮಂಜೂರಾತಿ ಪತ್ರವನ್ನು ವಿತರಿಸಿ ಮಾತನಾಡಿದ ಅವರು ಕೈಲಾಸವಾಸಿ ಬಾಬಣ್ಣ ಗುರುಪಾದಪ್ಪ ಹುಕ್ಕೇರಿಯವರು ಅವರು ಮೊಟ್ಟ ಮೊದಲನೆಯ ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ,ತದನಂತರ 1978 ರಲ್ಲಿ ನಾನು 9ನೇ ಅವಧಿಗೆ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿ,
ಯಕ್ಸಂಬಾ ಗ್ರಾಮದ ಇತಿಹಾಸದಲ್ಲಿ ಗ್ರಾಮ ಪಂಚಾಯತಿಯಲ್ಲಿ ನಮ್ಮ ತಂದೆಯವರಾದ ತದನಂತರ ನಾನು 1978ರಲ್ಲಿ ನಾನು 9ನೇ ಅವಧಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಸೇವೆ ಸಲ್ಲಿಸುತ್ತಾ, ಯಕ್ಸಂಬಾ ಗ್ರಾಮ ಪಂಚಾಯತ ಅಧ್ಯಕ್ಷ ಹುದ್ದೆಯಿಂದ ಜಿಲ್ಲಾ ಪಂಚಾಯತ ಸದ್ಯಸನಾಗಿ , ವಿಧಾನ ಪರಿಷತ್ ಸದಸ್ಯನಾಗಿ ಶಾಸಕರಾಗಿ, ಕರ್ನಾಟಕ ಸರ್ಕಾರದ ಸಚಿವರಾಗಿ ಹಾಗೂ ಲೋಕಸಭಾ ಸದಸ್ಯರಾಗಿ ಹಾಗೂ ಪ್ರಸ್ತುತ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ಯಕ್ಷಂಬಾ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಾ ಬಂದಿರುತ್ತನೆ.
ಯಕ್ಸಂಬಾ ಗ್ರಾಮವನ್ನು ಕರ್ನಾಟಕ ರಾಜ್ಯದಲ್ಲಿ ಒಂದು ಮಾದರಿ ಪಟ್ಟಣವಾಗಿ ಬೆಳೆಯಲು, ಗ್ರಾಮದ ಮೊದಲನೇ ಅಧ್ಯಕ್ಷರಾದ ಕೈಲಾಸಿ ವಾಸಿ ಬಾಬಣ್ಣ ಗುರುಪಾದಪ್ಪ ಹುಕ್ಕೇರಿಯವರು,ನಾನು ಹಾಗೂ ಶಾಸಕರಾದ ಗಣೇಶ ಪ್ರಕಾಶ ಹುಕ್ಕೇರಿರವರು ಹೀಗೆ ಹುಕ್ಕೇರಿ ಕುಟುಂಬವು ಸೇವೆಯನ್ನು ಮಾಡಿಕೊಂಡು ಬಂದಿದೆ. ಅದಲ್ಲದೇ ಯಕ್ಸಂಬಾ ಗ್ರಾಮದ ಇತಿಹಾಸದಲ್ಲಿ ಇದುವರೆಗೆ 20 ಜನ ಮಹನಿಯರು ಅಧ್ಯಕ್ಷರಾಗಿ ಹಾಗೂ 20 ಜನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ, ಗ್ರಾಮದ ಪ್ರಗತಿಗೆ ಸಹಕರಿಸಿರಿದ್ದಾರೆ.