Breaking News

ಮುಂಡಗೋಡ: ಭಾವೈಕ್ಯದ ಸಂಕೇತ ಮೊಹರಂ ಆಚರಣೆ

Spread the love

ಮುಂಡಗೋಡ: ತಾಲ್ಲೂಕಿನ ಇಂದೂರ, ಅಜ್ಜಳ್ಳಿ, ಬಸವನಕೊಪ್ಪ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬುಧವಾರ ಮೊಹರಂ ಆಚರಿಸಲಾಯಿತು.

ಮುಸ್ಲಿಮ ಜನಸಂಖ್ಯೆ ಇಲ್ಲದ ಕೆಲವು ಊರುಗಳಲ್ಲಿಯೂ ಹಿಂದೂಗಳು ಮುಂಚೂಣಿಯಲ್ಲಿದ್ದು ಮೊಹರಂ ಆಚರಿಸಿರುವುದು ವಿಶೇಷವಾಗಿತ್ತು. ಸುರಿಯುವ ಮಳೆಯ ನಡುವೆಯೂ, ದೇವರು ಹೊಳೆಗೆ ಹೋಗುವ ಕಾರ್ಯಕ್ರಮ ನೂರಾರು ಜನರ ಸಮ್ಮುಖದಲ್ಲಿ ನಡೆಯಿತು.

ಮುಂಡಗೋಡ: ಭಾವೈಕ್ಯದ ಸಂಕೇತ ಮೊಹರಂ ಆಚರಣೆ

ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತದಂತೆ ಮೊಹರಂ ಆಚರಣೆ ಮಾಡಿದರು. ಕಳೆದ ಐದು ದಿನಗಳ ಹಿಂದೆ ತಾಲ್ಲೂಕಿನ ಬಹುತೇಕ ಕಡೆ ಪಂಜಾಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಹೆಜ್ಜೆ ಮಜಲು, ಶೋಕಗೀತೆ ರಚಿಸುತ್ತ, ಅದರ ಹಾಡಿಗೆ ತಕ್ಕಂತೆ ಕುಣಿತವು ಕೊನೆಯ ದಿನದ ಮೊಹರಂ ವಿಶೇಷವಾಗಿತ್ತು.

ಹಿಂದಿನಿಂದ ಆಚರಣೆಯನ್ನು ನಡೆಸಿಕೊಂಡು ಬಂದ ಕುಟುಂಬ ಸದಸ್ಯರು, ಹರಕೆ ಹೊತ್ತಿದ್ದ ಜನರು ಮೈಗೆ ಹುಲಿ ಬಣ್ಣ ಬಳಿದುಕೊಂಡು, ಬಿಡುವು ನೀಡುತ್ತಿದ್ದ ಮಳೆಯ ನಡುವೆ ಹೆಜ್ಜೆ ಹಾಕುತ್ತ ಸಾಗಿದರು. ಇದರ ಜೊತೆಗೆ ಪಂಜಾ ಗಳ ಸವಾರಿ ಸಾಗಿತು.

‘ಅನಾರೋಗ್ಯದ ಸಮಸ್ಯೆ ಸೇರಿದಂತೆ ಕಷ್ಟಗಳು ಎದುರಾದಾಗ ಅವುಗಳ ನಿವಾರಣೆಗೆ ಅಲ್ಲಬ್ಬ ದಲ್ಲಿ ಹರಕೆ ಹೊರುತ್ತಾರೆ. ಬೇಡಿಕೆಗಳು ಈಡೇರಿದಾಗ ಹುಲಿವೇಷ ಹಾಕಿ ದೇವರಿಗೆ ಅರ್ಪಿಸುತ್ತಾರೆ’ ಎಂದು ಗ್ರಾಮಸ್ಥ ಫಕ್ಕೀರಪ್ಪ ಹೇಳಿದರು.


Spread the love

About Laxminews 24x7

Check Also

ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಸಂಪೂರ್ಣ ‌ತನಿಖೆಯನ್ನು ನಡೆಸಬೇಕೆಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘ ಪ್ರತಿಭಟನೆ

Spread the loveಬೆಳಗಾವಿ ;ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಸಂಪೂರ್ಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ