Breaking News

ಜನರನ್ನು ಪರಾವಲಂಬಿಯಾಗಿಸುತ್ತಿರುವ ‘ಗ್ಯಾರಂಟಿ’: ರಮೇಶ್ ಕತ್ತಿ ವಿಷಾದ

Spread the love

ಹುಕ್ಕೇರಿ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ಯಾರಂಟಿ ಯೋಜನೆ ಹೆಸರಿನಲ್ಲಿ ರೈತರು ಸೇರಿದಂತೆ ಜನರನ್ನು ಪರಾವಲಂಬಿಗಳಾಗಿ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಹೇಳಿದರು.

ಜನರನ್ನು ಪರಾವಲಂಬಿಯಾಗಿಸುತ್ತಿರುವ 'ಗ್ಯಾರಂಟಿ': ರಮೇಶ್ ಕತ್ತಿ ವಿಷಾದ

ತಾಲ್ಲೂಕಿನ ನೇರಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ 2024-25 ರಿಂದ 2026-27ನೇ ಸಾಲಿಗೆ ಮಂಜೂರಾದ ₹5.59 ಕೋಟಿ ಪತ್ತನ್ನು ಬುಧವಾರ 811 ಸದಸ್ಯರಿಗೆ ವಿತರಿಸಿ ಮಾತನಾಡಿದರು.

 

‘ಪಕ್ಷಾತೀತವಾಗಿ ಸರ್ಕಾರಗಳು ಬರಬರುತ್ತ ಜನರನ್ನು ಸ್ವಾವಲಂಬಿ ಬದುಕು ಕಲಿಯಲು ಬೇಕಾದ ನೀತಿ ರಚಿಸದೇ, ಪರಾವಲಂಬಿ ಬದುಕಿಗೆ ಬೇಕಾದ ನೀತಿ ರೂಪಿಸುತ್ತಿರುವುದು ದೇಶದ ಭವಿಷ್ಯಕ್ಕೆ ಮಾರಕ’ ಎಂದು ವಿಷಾದ ವ್ಯಕ್ತಪಡಿಸಿದರು.

‘ರೈತರೂ ಕೂಡಾ ಇದರ ಬಗ್ಗೆ ಚಿಂತಿಸದೆ, ರಾಸಾಯನಿಕ ಗೊಬ್ಬರ ಬಳಸಿ, ಭೂಮಿಯನ್ನು ಬರಡು ಮಾಡುತ್ತ, ಫಲವತ್ತತೆ ಕಡಿಮೆ ಮಾಡುತ್ತಿರುವುದು ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತೆ’ ಎಂದು ಕುಟುಕಿದರು.


Spread the love

About Laxminews 24x7

Check Also

ಸಂತ ಜನಾಬಾಯಿ ಮಂದಿರ ಹಾಗೂ ಶ್ರೀ ಗೋಪಾಲಕೃಷ್ಣ ಮಂದಿರಕ್ಕೆ ಕುಟುಂಬ ಸಮೇತ ಭೇಟಿ

Spread the loveಪಂಢರಪುರದ ಗೋಪಾಲಪುರದಲ್ಲಿರುವ ಸಂತ ಜನಾಬಾಯಿ ಮಂದಿರ ಹಾಗೂ ಶ್ರೀ ಗೋಪಾಲಕೃಷ್ಣ ಮಂದಿರಕ್ಕೆ ಕುಟುಂಬ ಸಮೇತ ಭೇಟಿ ನೀಡಿ,ವಿಶೇಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ