Breaking News

ಫಿಟ್ನೆಸ್ ಮೇಂಟೇನೂ ಇಲ್ಲ, ಚಿಕನ್, ಮಟನ್ನೂ ಇಲ್ಲ! ಒಗ್ಗದ ಜೈಲೂಟ ತಿನ್ನಲು ದರ್ಶನ್ ಪರದಾಟ

Spread the love

ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ನಟ ದರ್ಶನ್ (Actor Darshan and Gang) ಮತ್ತು ಸಹಚರರು ಜೈಲು ಪಾಲಾಗಿದ್ದಾರೆ. ಆದರೆ ನಟ ದರ್ಶನ್ ಜೈಲೂಟ ತಿನ್ನಲು ಒಗ್ಗದೆ ಪರದಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಜೈಲಿನಿಂದ ಹೊರಗಿದ್ದಾಗ ಐಷಾರಾಮಿ ಜೀವನದ ಜೊತೆಗೆ ಬಿಂದಾಸ್ ಆಗಿ ಇರುತ್ತಿದ್ದ ದರ್ಶನ್, ಫಿಟ್ನೆಸ್ ಮೇಂಟೈನ್ ಮಾಡಲು‌ ಚಿಕನ್, ಮಟನ್, ಪ್ರೂಟ್ಸ್ ಜೊತೆಗೆ ಜ್ಯೂಸ್ ಸೇವಿಸುತ್ತಿದ್ದರು.

ಆದರೆ ಈಗ ಜೈಲಿನಲ್ಲಿ ಸರಿಯಾಗಿ ಉಪ್ಪು ಕಾರ ಇಲ್ಲದ ಸಾಂಬಾರ್, ಮುದ್ದೆ ಅನ್ನ ತಿನ್ನಲು ಕಷ್ಟಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿ ಸಹ ಜೈಲಿನ ಮೇನು ಪ್ರಕಾರ ಮುದ್ದೆ, ಅನ್ನ, ಚಪಾತಿ ತರಕಾರಿ ಸಾಂಬಾರ್ ಮತ್ತು ಮಜ್ಜಿಗೆಯನ್ನು ಜೈಲು ಸಿಬ್ಬಂದಿ ನೀಡಿದ್ದ. ಆದರೆ ದರ್ಶನ್ ಜೈಲೂಟ ತಿನ್ನಲಾಗದೆ ಪರದಾಟ ನಡೆಸಿದ್ದಾರೆ ಎನ್ನಲಾಗಿದೆ.Actor Darshan: ಫಿಟ್ನೆಸ್ ಮೇಂಟೇನೂ ಇಲ್ಲ, ಚಿಕನ್, ಮಟನ್ನೂ ಇಲ್ಲ! ಒಗ್ಗದ ಜೈಲೂಟ ತಿನ್ನಲು ದರ್ಶನ್ ಪರದಾಟ

ಈತನ್ಮಧ್ಯೆ ಜೈಲಿನಲ್ಲಿ ಸರಿಯಾಗಿ ಊಟ ಸೇರದೆ, ನಿದ್ದೆಯೂ ಬಾರದೆ ದರ್ಶನ್ ವಿಲವಿಲ ಅಂತಿದ್ದಾರೆ ಎಂದು ಹೇಳಲಾಗ್ತಿದ್ದು, ರಾತ್ರಿ ತಡವಾಗಿ ನಿದ್ರೆಗೆ ಜಾರಿ ಬೆಳಗ್ಗೆ 6 ಗಂಟೆ ಸುಮಾರಿಗೆ ಎಚ್ಚರಗೊಂಡಿದ್ದಾರೆ. ಬೆಳಗ್ಗೆ ನಾರ್ಮಲ್ ಕಾಫಿ ಸೇವಿಸದೆ ಬಿಸಿ ಕಾಫಿ ಕೇಳಿ ಪಡೆದಿದ್ದಾರೆ. ಜೊತೆಗೆ ಸಹಖೈದಿಗಳು ಮಾತನಾಡಲು ಯತ್ನಿಸಿದ್ರೂ ಅವರ ಜೊತೆಗೆ ಅಷ್ಟಾಗಿ ಬೇರೆಯುತ್ತಿಲ್ಲ, ನಿಮ್ಮ ಸಹವಾಸ ಸಾಕಪ್ಪ, ದಯವಿಟ್ಟು ನನ್ನ ಪಾಡಿಗೆ ಬಿಟ್ಟು ಬಿಡಿ ಎಂದು ಕೊಠಡಿಯಲ್ಲಿ ಸುಮ್ಮನೆ ಕುಳಿತುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಪರಪ್ಪನ ಅಗ್ರಹಾರ ವಿಶೇಷ ಬ್ಯಾರಕ್‌ನಲ್ಲಿರುವ ದರ್ಶನ್ ಜೊತೆ ಧನರಾಜ್, ವಿನಯ್ ಪ್ರದೂಶ್ ಕೂಡ ಒಂದೇ ಕೊಠಡಿಯಲ್ಲಿದ್ದಾರೆ.


Spread the love

About Laxminews 24x7

Check Also

ಮದುವೆ ಪತ್ರಿಕೆ ಕೊಡುವ ನೆಪದಲ್ಲಿ ಬಂದ ದುಷ್ಕರ್ಮಿಗಳು: ಮಾಲೀಕರ ಕೈಕಾಲು ಕಟ್ಟಿ 200 ಗ್ರಾಂ ಚಿನ್ನ ಕದ್ದು ಎಸ್ಕೇಪ್

Spread the loveಮಂಗಳೂರು/ಬೆಂಗಳೂರು: ಪರಿಚಯವೇ ಇಲ್ಲದವರು ಮನೆಗೆ ಆಹ್ವಾನ ಪತ್ರಿಕೆ ನೀಡುವ ಸೋಗಿನಲ್ಲಿ ಮನೆಗೆ ಬಂದು, ಹಾಡಹಗಲೇ ಮನೆ ಮಾಲೀಕರ ಕೈಕಾಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ