Breaking News

ಲೋಕಸಮರ: ಇಂದು ಡಿ.ಕೆ ಸುರೇಶ್‌ ನಾಮಪತ್ರ ಸಲ್ಲಿಕೆ

Spread the love

ಬೆಂಗಳೂರು: ಬೆಂಗಳೂರು ಗ್ರಾಮಾಂತರ (bengaluru rural) ಕ್ಷೇತ್ರದ ಕಾಂಗ್ರೆಸ್ (congress) ಅಭ್ಯರ್ಥಿ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಹಾಲಿ ಸಂಸದ ಡಿ.ಕೆ. ಸುರೇಶ್‌ (d.k. suresh) ಕನಕಪುರ ಕೆಂಕೇರಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿ ಉಮೇದುವಾರಿಕೆ ಸಲ್ಲಿಸಲಿದ್ದು, ಈ ಬಾರಿ ಬಿಜೆಪಿ (bjp) ಅಭ್ಯರ್ಥಿ ಡಾ.ಸಿ.ಎನ್‌.ಮಂಜುನಾಥ್ (dr.c.n. manjunath) ಅವರನ್ನು ಕಣದಲ್ಲಿ ಎದುರಿಸಲಿದ್ದಾರೆ.

 

ಸಹೋದರನ ಸ್ಪರ್ಧೆ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಗೆ ಮೊದಲ ಬಿ. ಫಾರ್ಮ್ ಸಿಕ್ಕಿದ್ದು, ಇವತ್ತು ನಾಮ ಪತ್ರ ಸಲ್ಲಿಸತ್ತಾರೆ. ಅದಕ್ಕೂ ಮೊದಲು ಮನೆ ದೇವರ ದರ್ಶನ ಪಡೆದು, ರಾಮನಗರ (ramnagar) ಚಾಮುಂಡಿ ಬೆಟ್ಟಕ್ಕೆ (chamundi betta) ಹೋಗಿ ಬರಲಿದ್ದೇವೆ ಎಂದರು.

ಕೋವಿಡ್ ಸಂದರ್ಭದಲ್ಲಿ ಡಿ. ಕೆ. ಸುರೇಶ್ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಅದನ್ನು ಜನರು ಮರೆಯಲು ಸಾಧ್ಯವೇ ಇಲ್ಲ. ಕ್ಷೇತ್ರದ ಜನತೆಗಾಗಿ ಆ ಸಂದರ್ಭದಲ್ಲಿ ಸಾಕಷ್ಟು ಕಾರ್ಯಗಳನ್ನು ಅವರು ಮಾಡಿದ್ದಾರೆ. ಪ್ರತಿ ಹಳ್ಳಿಹಳ್ಳಿಗೂ ಅವರು ಹೋಗಿದ್ದರು. ಸಂಸದನಾಗಿ ಅಲ್ಲ ಕಾರ್ಪೊರೇಟರ್, ಗ್ರಾಮ ಪಂಚಾಯತ್ ಸದಸ್ಯನ ರೀತಿ ಕಾರ್ಯ ನಿರ್ವಹಿಸಿ ಜನರ ಮನಗೆದ್ದಿದ್ದಾರೆ ಎಂದರು

ಜನತಾದಳ, ಬಿಜೆಪಿಯಂತೆ ನಮ್ಮಲ್ಲಿ ರಾಜಕಾರಣ, ಸಿಂಗಲ್ ಅಭ್ಯರ್ಥಿ ಏನೂ ಇಲ್ಲ. ಎದುರಾಳಿಯಾಗಿ ಯಾರೇ ಇದ್ದರೂ ನಾವು ಸತತವಾಗಿ ಹೋರಾಟ ಮಾಡಿ ಗೆದ್ದಿದ್ದೇವೆ. ಈ ಬಾರಿ ಬಿಜೆಪಿಯಿಂದ 10ಕ್ಕೂ ಹೆಚ್ಚು ಸೀಟ್ ಅನ್ನು ಹಾಲಿ ಸಂಸದರಿಗೆ ನೀಡಿಲ್ಲ. ಇದು ಅನ್ಯಾಯ ಎಂದ ಅವರು, ಸ್ಟಾರ್ ಪ್ರಚಾರಕರಾಗಿ ರಾಜ್ಯಕ್ಕೆ ರಾಹುಲ್ ಗಾಂಧಿ , ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಅವರು ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು.


Spread the love

About Laxminews 24x7

Check Also

ಕೇರಳ ಸಿಎಂ ಪುತ್ರಿಯ ಕಂಪನಿ ವಿರುದ್ಧ ತನಿಖೆಗೆ ಆದೇಶ ಪ್ರಶ್ನಿಸಿ ಮೇಲ್ಮನವಿ: ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್‌

Spread the love ಬೆಂಗಳೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪುತ್ರಿ ಟಿ.ವೀಣಾ ಅವರು ನಿರ್ದೇಶಕಿಯಾಗಿರುವ ಎಕ್ಸಲಾಜಿಕ್‌ ಸಲ್ಯೂಷನ್‌ ಪ್ರೈವೇಟ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ