Breaking News

ಬಾಗಲಕೋಟೆಯಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆ

Spread the love

ಕುಸ್ತಿ ಗ್ರಾಮೀಣ ಭಾಗದ ಮಣ್ಣಿನ ಕ್ರೀಡೆ. ಮಣ್ಣಿನ ಅಖಾಡದಲ್ಲಿ ತೊಡೆ ತಟ್ಟಿ ನಿಂತ ಮಲ್ಲರನ್ನು‌ ನೋಡೋದೆ ಒಂದು ಖುಷಿ. ಪಟ್ಟು ಹಾಕಿ ಎದುರಾಳಿಯನ್ನು ಎತ್ತಿ ಬಿಸಾಕುವ ಜಟ್ಟಿಗಳ ಕಾದಾಟ, ನೋಡುಗರನ್ನು ತುದಿಗಾಲ‌ ಮೇಲೆ ನಿಲ್ಲಿಸುತ್ತದೆ. ಇಂದು ಬಾಗಲಕೋಟೆ ತಾಲ್ಲೂಕಿನ ತುಳಸಿಗೇರಿ ಗ್ರಾಮದಲ್ಲಿ ಪೈಲ್ವಾನರು ಭರ್ಜರಿ ಸೆಣಸಾಟ ನಡೆಸಿ ದೂಳೆಬ್ಬಿಸಿದರು.

ಅದರ ಝಲಕ್​ ಇಲ್ಲಿದೆ.ಹಲಗೆ ಬಾರಿಸುತ್ತಾ ಜಟ್ಟಿಗಳಿಗೆ ಹುರುಪು ನೀಡುತ್ತಿರುವ ಹಲಗೆ ಮೇಳ ಕಲಾವಿದರು.ಮಣ್ಣಿನ ಅಖಾಡದಲ್ಲಿ ಎದುರಾಳಿಯನ್ನು ಎತ್ತಿ ನೆಲಕ್ಕೆ ಬಡಿಯುವ ಮಲ್ಲರು. ಕೊಬ್ಬಿದ ಗೂಳಿಯಂತೆ, ಮದಗಜಗಳಂತೆ ಜಟ್ಟಿಗಳ ಕಾದಾಟ. ಮಲ್ಲರ ಯುದ್ದ ಕಂಡು ಜನರ ಕೇಕೆ‌ ಚಪ್ಪಾಳೆ. ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ತಾಲ್ಲೂಕಿನ ತುಳಸಿಗೇರಿ ಗ್ರಾಮದಲ್ಲಿ.

 ತುಳಸಿಗೇರಿಯಲ್ಲಿ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಆಂದ್ರ, ತಮಿಳುನಾಡು ಮೂಲದಿಂದಲೂ ಕುಸ್ತಿ ಆಡುವುದಕ್ಕೆ ಮಲ್ಲರು ಆಗಮಿಸಿದ್ದರು. ಮಣ್ಣಿನ ಅಖಾಡದಲ್ಲಿ ಜಟ್ಟಿಗಳು ತೊಡೆ ತಟ್ಟಿ ಸೆಣಸಾಟ ನಡೆಸುತ್ತಿರುವುದು ನೋಡುಗರನ್ನು ರೋಮಾಂಚನಗೊಳಿಸಿತು.


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ