Breaking News

ಪ್ರಿಯಾಂಕಾ ಉಪೇಂದ್ರ ಹುಟ್ಟುಹಬ್ಬ: ಡ್ರೋನ್​ ಮೂಲಕ ರಿವೀಲ್ ಆಯ್ತು ‘ಕ್ಯಾಪ್ಚರ್’ ಪೋಸ್ಟರ್

Spread the love

ಕ್ಯಾಪ್ಚರ್​’ ಸಿನಿಮಾ ತಂಡ ಪ್ರಿಯಾಂಕಾ ಉಪೇಂದ್ರ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದರು.

ಕನ್ನಡ ಚಿತ್ರರಂಗದ ನಟಿ ಪ್ರಿಯಾಂಕಾ ಉಪೇಂದ್ರ ಅವರಿಗಿಂದು 46ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ರಿಯಲ್​ ಸ್ಟಾರ್​ ಪತ್ನಿಗೆ ಸ್ನೇಹಿತರು, ಅಭಿಮಾನಿಗಳು, ಆತ್ಮೀಯರು ಹಾಗೂ ಸ್ಯಾಂಡಲ್​​ವುಡ್​​ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರುತ್ತಿದ್ದಾರೆ.

ಇಂದು ಪ್ರಿಯಾಂಕಾ ಅವರು ಅಭಿಮಾನಿಗಳು ಹಾಗೂ ಕುಟುಂಬಸ್ಥರ ಜೊತೆ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.

ಅಲ್ಲದೇ, ‘ಕ್ಯಾಪ್ಚರ್​’ ಸಿನಿಮಾ ತಂಡ ಪ್ರಿಯಾಂಕಾ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಸಂಭ್ರಮಿಸಿದರು. ವಿಭಿನ್ನವಾಗಿ ಕೇಕ್​ ತಯಾರಿಸಿದ್ದ ಚಿತ್ರತಂಡ ಪ್ರಿಯಾಂಕಾ ಅವರಿಗೆ ಬಿಗ್​ ಸರ್​ಪ್ರೈಸ್​ ನೀಡಿದರು. ಇದೇ ಸಮಯದಲ್ಲಿ ‘ಕ್ಯಾಪ್ಚರ್​’ ಸಿನಿಮಾದ 2ನೇ ಪೋಸ್ಟರ್ ಅನ್ನು ಡ್ರೋನ್​ ಮೂಲಕ ಬಿಡುಗಡೆಗೊಳಿಸಲಾಯಿತು. ಈ ಮೂಲಕ ಅವರ ಹುಟ್ಟುಹಬ್ಬವನ್ನು ಚಿತ್ರತಂಡ ಮತ್ತಷ್ಟು ವಿಶೇಷ ಮತ್ತು ವಿಭಿನ್ನವಾಗಿಸಿದೆ.

 ಪ್ರಿಯಾಂಕಾ ಉಪೇಂದ್ರ ಹುಟ್ಟುಹಬ್ಬ ಆಚರಣೆಪ್ರಿಯಾಂಕಾ ಹುಟ್ಟುಹಬ್ಬದ ಸಂಭ್ರಮಕ್ಕೆ ಪತಿ ರಿಯಲ್​ ಸ್ಟಾರ್​ ಉಪೇಂದ್ರ ಅವರು ಸಾಥ್​ ನೀಡಿದರು. ಪ್ರಿಯಾಂಕಾ ಅವರಿಗೆ ಕೇಕ್​ ತಿನ್ನಿಸುವ ಮೂಲಕ ಬರ್ತ್​ಡೇ ವಿಶ್​ ಹೇಳಿದರು. ಜೊತೆಗೆ ‘ಕ್ಯಾಪ್ಚರ್​’ ತಂಡಕ್ಕೂ ಶುಭ ಹಾರೈಸಿದರು. ಬಳಿಕ ತಮ್ಮ ಚಿತ್ರತಂಡದ ವಿಭಿನ್ನ ಪ್ರಯತ್ನಕ್ಕೆ ಪ್ರಿಯಾಂಕಾ ಅವರು ಸಂತಸ ವ್ಯಕ್ತಪಡಿಸಿದರು.

 

ಕೇಕ್​ ಕತ್ತರಿಸಿ ಮಾಧ್ಯಮದೊಂದಿಗೆ ಮಾತನಾಡಿದ ಪ್ರಿಯಾಂಕಾ, “ದೀಪಾವಳಿಗೆ ಬರ್ತ್​ಡೇ ಬಂದಿದ್ದು ತುಂಬಾ ಖುಷಿ ಇದೆ. ಉಪೇಂದ್ರ ಅವರ ಹುಟ್ಟುಹಬ್ಬ ಗಣೇಶ ಹಬ್ಬದ ಸಮಯದಲ್ಲಿ ಬರುತ್ತದೆ. ಇದೊಂದು ರೀತಿಯಲ್ಲಿ ತುಂಬಾ ವಿಶೇಷ. ನನಗೆ ಸಿನಿಮಾ ಅಂದ್ರೆ ತುಂಬಾ ಇಷ್ಟ. ಮದುವೆ ಆದ್ಮೇಲೂ ನನ್ನ ಗ್ರಾಫ್​ ಹೀಗೆ ಹೋಗುತ್ತೆ ಎಂದು ಅಂದುಕೊಂಡಿರಲಿಲ್ಲ. ಒಳ್ಳೆಯ ಸಿನಿಮಾಗೆ ಆಡಿಯನ್ಸ್​ ಸಪೋರ್ಟ್​ ಇದ್ದೇ ಇರುತ್ತದೆ. ಇದು ನನ್ನ ಟೀಂ ಎಫರ್ಟ್. ನನ್ನ ಜೀವನ ಹೀಗೆ ಇರಬೇಕೆಂದು ನಾನು ಯಾವುದೇ ಪ್ಲಾನ್​ ಮಾಡಿಲ್ಲ. ಈ ಕ್ಷಣವನ್ನು ಎಂಜಾಯ್​ ಮಾಡುತ್ತೇನೆ ಅಷ್ಟೇ. ನನ್ನಿಂದ ಸ್ವಲ್ಪ ಜನಕ್ಕಾದರೂ ಪ್ರೇರಣೆ ಸಿಕ್ಕಿರುವ ಬಗ್ಗೆ ತುಂಬಾ ಖುಷಿ​ಯಿದೆ” ಎಂದರು.

ಸದ್ಯ ಪ್ರಿಯಾಂಕಾ ಉಪೇಂದ್ರ ಅವರು ‘ಕ್ಯಾಪ್ಚರ್​’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಅಭಿಮಾನಿಗಳು ಚಿತ್ರದ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಲೋಹಿತ್​ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಕ್ಯಾಪ್ಚರ್​’ ಸಿನಿಮಾದ ಪ್ರಮೋಷನ್​ ಭರ್ಜರಿಯಾಗಿಯೇ ನಡೆಯುತ್ತಿದೆ. ಟೈಟಲ್​ ಹಾಗೂ ಪೋಸ್ಟರ್​ನಿಂದಲೇ ಸದ್ದು ಮಾಡುತ್ತಿರುವ ಚಿತ್ರ ಡಿಸೆಂಬರ್​ ಮೊದಲ ವಾರದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಸಿನಿಮಾವನ್ನು ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್​ ಅವರು ತಮ್ಮ ಶ್ರೀ ದುರ್ಗಾಪರಮೇಶ್ವರಿ ಬ್ಯಾನರ್​ ಮೂಲಕ ನಿರ್ಮಾಣ ಮಾಡಿದ್ದಾರೆ. ಸಿಸಿಟಿವಿ ಕಾನ್ಸೆಪ್ಟ್​​ನಲ್ಲಿ ಚಿತ್ರ ಮೂಡಿಬರಲಿದೆ.


Spread the love

About Laxminews 24x7

Check Also

ಬೆಂಗಳೂರಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆದ ಕನ್ನಡ ಜಾಗೃತಿ ಸಮಿತಿ ಸದಸ್ಯರ ರಾಜ್ಯಮಟ್ಟದ ಕಮ್ಮಟದಲ್ಲಿ ಪಾಲ್ಗೊಂಡ ಕ್ಷಣಗಳು.

Spread the love ಬೆಂಗಳೂರಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆದ ಕನ್ನಡ ಜಾಗೃತಿ ಸಮಿತಿ ಸದಸ್ಯರ ರಾಜ್ಯಮಟ್ಟದ ಕಮ್ಮಟದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ