Breaking News

ಬ್ಯಾರಲ್​ ಬಳಸಿ ಸೇತುವೆ ನಿರ್ಮಾಣ ಮಾಡಿದ ರೈತರು.

Spread the love

ಬಾಗಲಕೋಟೆ : ರೈತರು ಮನಸ್ಸು ಮಾಡಿದರೆ ಯಾವ ಸಮಸ್ಯೆಯನ್ನೂ ಬಗೆಹರಿಸಿಕೊಳ್ಳಬಹುದು ಎಂಬುದನ್ನು ಬಾಗಲಕೋಟೆಯ ಜಮಖಂಡಿ ರೈತರು ತೋರಿಸಿಕೊಟ್ಟಿದ್ದಾರೆ. ಇಲ್ಲಿನ ಕೃಷ್ಣಾ ನದಿಗೆ ಅಡ್ಡಲಾಗಿ ಬ್ಯಾರಲ್​ ಸೇತುವೆ ನಿರ್ಮಾಣ ಮಾಡುವ ಮೂಲಕ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಮೂಲಕ ದಶಕಗಳಿಂದ ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮಸ್ಥರು ಎದುರಿಸುತ್ತಿದ್ದ ಸಮಸ್ಯೆಗೆ ರೈತರು ಪರಿಹಾರ ಕಂಡುಕೊಂಡಿದ್ದಾರೆ.

ರೈತರಿಂದ ಬ್ಯಾರಲ್​ ಸೇತುವೆ ನಿರ್ಮಾಣ : ಗ್ರಾಮದ ರೈತರು ಸ್ವತಃ ತಾವೇ ಹಣ ಸಂಗ್ರಹಿಸಿ ನದಿ ದಾಟಲು ಬ್ಯಾರಲ್ ಸೇತುವೆ ನಿರ್ಮಾಣ ಮಾಡಿ ಗಮನ ಸೆಳೆದಿದ್ದಾರೆ. ಕೃಷ್ಣಾ ನದಿಗೆ ಅಡ್ಡಲಾಗಿ 600 ಅಡಿ ಉದ್ದ ಹಾಗೂ 8 ಅಡಿ ಅಗಲವಾದ ಬ್ಯಾರಲ್ ಸೇತುವೆ ನಿರ್ಮಾಣ ಮಾಡಲಾಗಿದೆ. ಈ ಮೂಲಕ ಜಮೀನಿಗೆ ಹಾಗೂ‌ ಮನೆಗಳಿಗೆ ತೆರಳುವ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಅಂದಾಜು ಇನ್ನೂರು ರೈತ ಕುಟುಂಬಗಳು ವಂತಿಗೆ ಸಂಗ್ರಹಿಸಿ 7.25 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಿದ್ದಾರೆ.

7 ಲಕ್ಷ ವೆಚ್ಚದಲ್ಲಿ ಸೇತುವೆ : ಕೃಷ್ಣಾ ನದಿಯಲ್ಲಿ ನೀರು ಪ್ರಮಾಣ ಹೆಚ್ಚಾದರೆ ಇಲ್ಲಿನ ಕಬ್ಬು ಬೆಳೆಗಾರರು ತಮ್ಮಬೆಳೆಯನ್ನು ಜಮೀನಿನಿಂದ ಮಾರುಕಟ್ಟೆಗೆ ಸಾಗಿಸಲು ಗ್ರಾಮವನ್ನು ಸುತ್ತುವರೆದು ಹೋಗಬೇಕು. ಇಲ್ಲದಿದ್ದರೆ ಕಬ್ಬು ಬೆಳೆಯನ್ನು ಟ್ರ್ಯಾಕ್ಟರ್ ಸಮೇತ ಬೋಟ್​ನಲ್ಲಿ ಸಾಗಿಸಬೇಕು. ಬೋಟ್​ನಲ್ಲಿ ಒಂದು ಲೋಡ್ ಕಬ್ಬು ಸಾಗಿಸಬೇಕಾದರೆ ರೈತರು 800ರಿಂದ 1000 ರೂಪಾಯಿ ಪಾವತಿಸಬೇಕಾಗುತ್ತದೆ. ಬೋಟ್​ನಲ್ಲಿ ಸಾಗಿಸುವುದರಿಂದ ಅಪಾಯ ಜಾಸ್ತಿ ಇರುತ್ತದೆ ಎಂದು ರೈತರು ಹೇಳುತ್ತಾರೆ.

ಇದಕ್ಕೆಲ್ಲ ಪರಿಹಾರವನ್ನು ಕಂಡು‌ಕೊಳ್ಳಲು ಊರಿನ ರೈತರೇ ಸೇರಿಕೊಂಡು ಬ್ಯಾರಲ್​ ಸೇತುವೆ ನಿರ್ಮಾಣ ಮಾಡುವ ಯೋಜನೆ ರೂಪಿಸಿದರು. ಈ ಸಂಬಂಧ ಗ್ರಾಮದಲ್ಲಿನ ರೈತರೆಲ್ಲ ಸೇರಿಕೊಂಡು ವಂತಿಕೆ ಸಂಗ್ರಹ ಮಾಡಿದರು. ಬಳಿಕ ಇನ್ನೂರಕ್ಕೂ‌ ಹೆಚ್ಚು ರೈತರು ಸೇರಿಕೊಂಡು ವಂತಿಗೆಯ ಹಣದಿಂದ ಬ್ಯಾರಲ್​ ಸೇತುವೆ ನಿರ್ಮಾಣ ಮಾಡಿದರು. ಈ ಬ್ಯಾರಲ್​ ಸೇತುವೆಯನ್ನು ವಿಶಿಷ್ಟವಾಗಿ ಮಾಡಲಾಗಿದೆ. ನೂರಾರು ಬ್ಯಾರೆಲ್​ಗಳನ್ನು ಕ್ರಮವಾಗಿ ಜೋಡಿಸಿ ಈ ಸೇತುವೆಯನ್ನು ಕಟ್ಟಲಾಗಿದೆ.

ಈ ಸೇತುವೆಯಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ಈ ಬ್ಯಾರೆಲ್​ ನೀರಿನಲ್ಲಿ ತೇಲುವುದರಿಂದ ಜನರು ಇದರಲ್ಲಿ ಸಾಗಬಹುದು. ಈ ಸೇತುವೆಯು ಜನರ ಸಂಚಾರಕ್ಕೆ ಮಾತ್ರವಲ್ಲದೆ ಜಮೀನುಗಳಿಂದ ಕಬ್ಬು ಬೆಳೆ ಸೇರಿದಂತೆ ವಿವಿಧ ವಸ್ತುಗಳ ಸಾಗಾಣಿಕೆಗೂ ಉಪಯೋಗವಾಗಲಿದೆ. ಜಿಲ್ಲೆಯ ರೈತರ ಕಾರ್ಯ ಇತರರಿಗೆ ಮಾದರಿಯಾಗಿದೆ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ