Breaking News

ಸಂಸದ ಪ್ರತಾಪ್ ಸಿಂಹಗೆ ನಿಂದಿಸಿದ ಪ್ರಕರಣ ; ಪೊಲೀಸ್ ಪೇದೆ ಸಸ್ಪೆಂಡ್ ಮಾಡಿ ಕಮಿಷನರ್ ಆದೇಶ..!

Spread the love

ಸಂಸದ ಪ್ರತಾಪ್ ಸಿಂಹಗೆ ನಿಂದಿಸಿದ ಪ್ರಕರಣ ; ಪೊಲೀಸ್ ಪೇದೆ ಸಸ್ಪೆಂಡ್ ಮಾಡಿ ಕಮಿಷನರ್ ಆದೇಶ..!

ಸಾಮಾಜಿಕ ಜಾಲತಾಣದಲ್ಲಿ ಸಂಸದ ಪ್ರತಾಪಸಿಂಹ ಅವರನ್ನು ನಿಂದನೆ ಮಾಡಿದ್ದ ಪೊಲೀಸ್ ಪೇದೆಯನ್ನು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಸೇವೆಯಿಂದ ಅಮಾನತು ಮಾಡಿ ಆದೇಶಿಸಿದ್ದಾರೆ.

ಮೈಸೂರಿನ ವಿವಿ ಪುರಂ ಸಂಚಾರ ವಿಭಾಗದಲ್ಲಿ ಪೇದೆಯಾಗಿರುವ ಬಿ. ಪ್ರಕಾಶ್ ಫೇಸ್ ಬುಕ್ ನಲ್ಲಿ ಸಂಸದ ಪ್ರತಾಪಸಿಂಹ ವಿರುದ್ದ ಕಾಮೆಂಟ್ಸ್ ಮಾಡಿ ನಿಂದಿಸಿದ್ಷರು. ಇದರ ವಿರುದ್ದ ಸಂಸದ ಪ್ರತಾಪಸಿಂಹ ನಗರ ಪೊಲೀಸ್ ಆಯುಕ್ತರಿಗೆ ಲಿಖಿತವಾಗಿ ದೂರು ನೀಡಿದ್ದರು. ದೂರನ್ನು ಪರಿಶೀಲಿಸಿದ ನಗರ ಪೊಲೀಸ್ ಆಯುಕ್ತರು ಸಂಚಾರ ಪೇದೆ ಪ್ರಕಾಶ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.


Spread the love

About Laxminews 24x7

Check Also

ಪೋಕ್ಸೊ ಪ್ರಕರಣ ದಾಖಲಿಸದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಒತ್ತಡ: ಸಂಜಯ ಪಾಟೀಲ ಆರೋಪ

Spread the love ಪೋಕ್ಸೊ ಪ್ರಕರಣ ದಾಖಲಿಸದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಒತ್ತಡ: ಸಂಜಯ ಪಾಟೀಲ ಆರೋಪ ಬೆಳಗಾವಿ :ಗ್ರಾಮೀಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ