Breaking News

Monthly Archives: ಆಗಷ್ಟ್ 2025

PUC ಪಾಸ್ ಮಾಡಿರುವ ತಮ್ಮ ಪರಿಚಿತ ಮಕ್ಕಳು ಯಾರಾದರೂ 2025-26ನೇ ಸಾಲಿನಲ್ಲಿ D Ed ಮಾಡಲು ಬಯಸಿದರೆ, ಅವರಿಗೆ ಊಟ, ವಸತಿ, ಪಠ್ಯ ಪುಸ್ತಕ ಹಾಗೂ ಬರೆಯುವ ನೊಟ್ ಪುಸ್ತಕ, ಫೈಲ್, ಲೇಖನಿ.ಉಚಿತ

ಆತ್ಮೀಯರೇ PUC ಪಾಸ್ ಮಾಡಿರುವ ತಮ್ಮ ಪರಿಚಿತ ಮಕ್ಕಳು ಯಾರಾದರೂ 2025-26ನೇ ಸಾಲಿನಲ್ಲಿ D Ed ಮಾಡಲು ಬಯಸಿದರೆ, ಅವರಿಗೆ ಊಟ, ವಸತಿ, ಪಠ್ಯ ಪುಸ್ತಕ ಹಾಗೂ ಬರೆಯುವ ನೊಟ್ ಪುಸ್ತಕ, ಫೈಲ್, ಲೇಖನಿ.ಉಚಿತ ಟಿ ಇ ಟಿ ತರಬೇತಿ,Smart Class Coaching, Spoken English ತರಬೇತಿ, ಕ್ಯಾಂಪಸ್ ಸೆಲ್ಸ್ ಕ್ಷನ್ ಇರುತ್ತದೆ. ಇತರೆ ಎಲ್ಲವನ್ನು ಉಚಿತವಾಗಿ ಕೊಟ್ಟು ಅತೀ ಕಡಿಮೆ ಕೇವಲ 7000/- ರೂ. ಸರ್ಕಾರಿ ಫೀ ಹಣವನ್ನು …

Read More »

ಕುಡಿದ ಮತ್ತಿನಲ್ಲಿ ಬೈಕ್ ಅಡ್ಡಗಟ್ಟಿ ಹಣ ಸುಲಿಗೆಗೆ ಯತ್ನ: ಯುವಕನನ್ನ ಚಾಕುವಿನಿಂದ ಇರಿದು ಹತ್ಯೆ: ಮೂವರ ಬಂಧನ

ಕುಡಿದ ಮತ್ತಿನಲ್ಲಿ ಬೈಕ್ ಅಡ್ಡಗಟ್ಟಿ ಹಣ ಸುಲಿಗೆಗೆ ಯತ್ನ: ಯುವಕನನ್ನ ಚಾಕುವಿನಿಂದ ಇರಿದು ಹತ್ಯೆ: ಮೂವರ ಬಂಧನ ಬೆಂಗಳೂರು: ಬೈಕ್ ನಲ್ಲಿ ತೆರಳುತ್ತಿದ್ದ ಯುವಕನನ್ನ ಕುಡಿದ ಮತ್ತಿನಲ್ಲಿ ಹಣಕ್ಕಾಗಿ ಅಡಗಟ್ಟಿ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ ಆರೋಪದಡಿ ಮೂವರು ಆರೋಪಿಗಳನ್ನ ಬ್ಯಾಡರಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರೇಮ್ ಹತ್ಯೆಗೊಳಗಾದ ಯುವಕ. ಈತನ ಪೋಷಕರು ನೀಡಿದ ದೂರಿನ ಮೇರೆಗೆ ವಿಶಾಲ್, ಹೇಮಂತ್ ಹಾಗೂ ಪುನೀತ್ ಎಂಬುವರನ್ನ ಬಂಧಿಸಲಾಗಿದೆ. ಬಂಧಿತರ ಪೈಕಿ ವಿಶಾಲ್ …

Read More »

ನೇಹಾ ಹಿರೇಮಠ ಕೊಲೆ ಆರೋಪಿಗೆ ಜಾಮೀನು ತಿರಸ್ಕಾರ: ಆ‌ಗಸ್ಟ್​​ 6ಕ್ಕೆ ವಿಚಾರಣೆ ಮುಂದೂಡಿಕೆ

ಹುಬ್ಬಳ್ಳಿ: ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೇಹಾ ಹಿರೇಮಠ ಕೊಲೆ ಆರೋಪಿ ಫಯಾಜ್ ಖೊಂಡೋನಾಯ್ಕ್​​​ಗೆ ಜಾಮೀನು ನಿರಾಕರಿಸಿದೆ. ನೇಹಾ ಕೊಲೆ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಇವತ್ತಿಗೆ ಕಾಯ್ದಿರಿಸಲಾಗಿತ್ತು. ಇಂದು ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ನೇಹಾ ಹಿರೇಮಠ ಪರ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಮಹೇಶ ವೈದ್ಯ, ವಕೀಲ ರಾಘವೇಂದ್ರ ಮುತ್ಗೀಕರ ವಾದ ಮಂಡಿಸಿದರು. ಫಯಾಜ್ ಪರವಾಗಿ ಝಡ್ ಎಂ ಹತ್ತರಕಿ ವಾದ …

Read More »

ಬೆಳಗಾವಿ- ಬಾಲಕಿ ಕಿಡ್ನಾಪ್ ಮಾಡಿದ್ದ ಫೋಕ್ಸೋ ಕೇಸ್ ಆರೋಪಿ ಅಂದರ್; ಬಾಲಕಿ ರಕ್ಷಣೆ

ಬೆಳಗಾವಿ: ಬೆಳಗಾವಿಯ ಮಕ್ಕಳ ರಕ್ಷಣಾ ಘಟಕದಲ್ಲಿ ಆಶ್ರಯ ಪಡೆದಿದ್ದ ಬಾಲ್ಯ ವಿವಾಹಕ್ಕೆ ಒಳಗಾಗಿದ್ದ ಬಾಲಕಿಯನ್ನು ಆರೋಪಿಯೇ ಅಪಹರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ನಡೆದ ಐದು ದಿನಗಳ ಬಳಿಕ ಬಾಲಕಿಯನ್ನು ರಕ್ಷಿಸಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಗೋಕಾಕ್​ ತಾಲೂಕಿನ ಗ್ರಾಮವೊಂದರ 13 ವರ್ಷದ ಬಾಲಕಿಗೆ ಮದುವೆ ಆಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಬಾಲಕಿಯನ್ನು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ರಕ್ಷಿಸಿದ್ದರು. ಬಳಿಕ ಜುಲೈ 25ರಂದು “ಸೃಷ್ಟಿ ಹೆಣ್ಣುಮಕ್ಕಳ ತೆರೆದ ತಂಗುದಾಣ”ದಲ್ಲಿ …

Read More »

ಪಟ್ಟಣ ಸೇರಿದಂತೆ ತಾಲೂಕಿನ್ನೆಲೆಡೆಗಳಲ್ಲಿ ಸ್ನೇಹಿತರ ದಿನಾಚರಣೆ-ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣ ಸೇರಿದಂತೆ ತೂಲೂಕಿನೆಲ್ಲೆಡೆಗಳಲ್ಲಿ ,

ಕೂಡ್ಲಿಗಿ : ಪಟ್ಟಣ ಸೇರಿದಂತೆ ತಾಲೂಕಿನ್ನೆಲೆಡೆಗಳಲ್ಲಿ ಸ್ನೇಹಿತರ ದಿನಾಚರಣೆ-ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣ ಸೇರಿದಂತೆ ತೂಲೂಕಿನೆಲ್ಲೆಡೆಗಳಲ್ಲಿ , ವಿಶ್ವ ಸ್ನೇಹಿತರ ದಿನಾಚರಣೆಯನ್ನು ಬಹು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪ್ರತಿ ವರ್ಷದ ಆಗಸ್ಟ್ ಮೊದಲನೆ ಭಾನುವಾರದಂದು , ” ವಿಶ್ವ ಸ್ನೇಹಿತರ ದಿನಾಚರಣೆ ” ಆಚರಿಸುವ ಹಿನ್ನಲೆಯಲ್ಲಿ. ಭಾನುವಾರ ಪಟ್ಟಣದೆಲ್ಲೆಡೆಗಳಲ್ಲಿ ಬಾಲ ಬಾಲೆಯರು , ಯುವಕರು ಯುವತಿಯರು , ವಿದ್ಯಾರ್ಥಿಗಳು ಪಟ್ಟಣದಲ್ಲೆಡೆ ಸೇರಿದಂತೆ. ತಾಲೂಕಿನಾಧ್ಯಂತ ಸ್ನೇಹಿತರ ಕೈಪಟ್ಟಿಯನ್ನು ಖರೀದಿ ಮಾಡಿ , …

Read More »

ಇಂಗ್ಲೆಂಡ್​ ವಿರುದ್ಧ ನಡೆದ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ಗೆಲುವು ಸಾಧಿಸಿದೆ

ಇಂಗ್ಲೆಂಡ್​ ವಿರುದ್ಧ ನಡೆದ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 2-2 ರಿಂದ ಭಾರತ- ಇಂಗ್ಲೆಂಡ್​ ಸಮಬಲ ಸಾಧಿಸಿವೆ.  ಲಂಡನ್‌ನಲ್ಲಿರುವ ಕೆನ್ನಿಂಗ್ಟನ್‌ನ ಓವಲ್ ಸ್ಟೇಡಿಯಂನಲ್ಲಿ ನಡೆದ 5ನೇ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ ಕ್ಯಾಪ್ಟನ್​ ಆಲಿ ಪೋಪ್ ಟಾಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಹೀಗಾಗಿ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ್ದ ಶುಭ್​ಮನ್ ಗಿಲ್ ನೇತೃತ್ವದ ಭಾರತ ತಂಡ ಆರಂಭದಲ್ಲಿ …

Read More »

ರಾಜಕೀಯ ಹೋರಾಟ ಕೋರ್ಟ್ ಹೊರಗೆ ಇಟ್ಟುಕೊಳ್ಳಿ: ಶಿವಾನಂದ ಪಾಟೀಲ್ ಗೆ ಸುಪ್ರೀಂ ಚಾಟಿ

ನವದೆಹಲಿ, (ಆಗಸ್ಟ್​​ 04): ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದ ಸಚಿವ ಶಿವನಾಂದ ಪಾಟೀಲ್ (Shivanand Patil) ಅವರ ನಡೆಗೆ ಸುಪ್ರೀಂ ಕೋರ್ಟ್ (supreme court) ಚಾಟಿ ಬೀಸಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಚಿವ ಶಿವಾನಂದ ಪಾಟೀಲ್ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡು ವಜಾಗೊಳಿಸಿದೆ. ವಿಚಾರಣೆ ವೇಳೆ , ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು, “ನಿಮ್ಮ …

Read More »

ರಾಜ್ಯದಲ್ಲಿ ಮತ್ತೆ ಮಳೆ ಚುರುಕಾಗುತ್ತಿದೆ.

ಬೆಂಗಳೂರು: ರಾಜ್ಯದಲ್ಲಿ ಕೆಲ ದಿನಗಳಿಂದ ಬಿಡುವು ಕೊಟ್ಟಿದ್ದ ಮುಂಗಾರು ಮತ್ತೆ ಚುರುಕುಗೊಂಡಿದೆ. ಆಗಸ್ಟ್ 7ರ ವರೆಗೆ ಮಳೆಯ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆರೆಂಜ್ ಅಲರ್ಟ್: ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಯೆಲ್ಲೋ ಅಲರ್ಟ್: ಬೆಂಗಳೂರು ನಗರ, ರಾಮನಗರ, …

Read More »

ಬೆಳಗಾವಿ ರಾಜ್ಯ‌ ಸರ್ಕಾರಕ್ಕೆ ಕನ್ನಡ ಹೋರಾಟಗಾರರ ಅಳಲು ನಾಡು, ನುಡಿ, ಜಲಕ್ಕಾಗಿ ಹೋರಾಡಿದ ಕನ್ನಡಿಗರ ಮೇಲೆ ಕೇಸ್

ಬೆಳಗಾವಿ ರಾಜ್ಯ‌ ಸರ್ಕಾರಕ್ಕೆ ಕನ್ನಡ ಹೋರಾಟಗಾರರ ಅಳಲು ನಾಡು, ನುಡಿ, ಜಲಕ್ಕಾಗಿ ಹೋರಾಡಿದ ಕನ್ನಡಿಗರ ಮೇಲೆ ಕೇಸ್ ದಶಕಗಳಿಂದ ಕನ್ನಡ ಹೋರಾಟಗಾರರ ಮೇಲಿನ ಕೇಸ್ ರೌಡಿಶೀಟರ್ ಕೇಸ್ ವಾಪಸ್ ಗೆ ಒತ್ತಾಯ ಗಡಿ ಉಸ್ತುವಾರಿ ಸಚಿವರ ಮೂಲಕ ಸಿಎಂ ಸಿದ್ದರಾಮಯ್ಯ ಗೆ ಹೋರಾಟಗಾರರ ಮನವಿ ಸಚಿವ ಎಚ್.ಕೆ.ಪಾಟೀಲ್ ‌ಮುಂದೆ ನೋವು ತೊಡಗಿಕೊಂಡ ಕನ್ನಡ ಹೋರಾಟಗಾರರ ಮಹಾದೇವ ತಳವಾರ ನಾವು ನಾಡು, ನಡಿ, ಜಲಕ್ಕಾಗಿ ಹೋರಾಡಿದ್ದೇವೆ ಮೊದಲು ಕೇಸ್ ಹಾಕ್ತಾರೆ ಅನಂತರ …

Read More »

ರಸ್ತೆಗಳ ದುರಸ್ಥಿಗೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ಮಳೆಯಿಂದ ಬೆಳಗಾವಿಯಲ್ಲಿ ಹಾಳಾಗಿರುವ ರಸ್ತೆಗಳ ದುರಸ್ಥಿಗೆ ಆಗ್ರಹಿಸಿ ಮೇಯರ ಅವರಿಗೆ ಆಮ್ ಆದ್ಮಿ ಪಾರ್ಟಿ ಮನವಿ!!

ರಸ್ತೆಗಳ ದುರಸ್ಥಿಗೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ಮಳೆಯಿಂದ ಬೆಳಗಾವಿಯಲ್ಲಿ ಹಾಳಾಗಿರುವ ರಸ್ತೆಗಳ ದುರಸ್ಥಿಗೆ ಆಗ್ರಹಿಸಿ ಮೇಯರ ಅವರಿಗೆ ಆಮ್ ಆದ್ಮಿ ಪಾರ್ಟಿ ಮನವಿ!! ಮಳೆಯಿಂದ ಬೆಳಗಾವಿಯಲ್ಲಿ ಹಾಳಾಗಿರುವ ರಸ್ತೆಗಳ ದುರಸ್ಥಿಗೆ ಆಗ್ರಹ ಮಹಾನಗರ ಪಾಲಿಕೆ ಎದುರು ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ಮೇಯರ ಮಂಗೇಶ ಪವಾರ ಅವರಿಗೆ ಕಾರ್ಯಕರ್ತರಿಂದ ಮನವಿ ರಸ್ತೆ ಗುಣಮಟ್ಟ ಕಾಪಾಡದ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಒತ್ತಾಯ ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ರಸ್ತೆಯ …

Read More »