ಪಣಜಿ: ಗೋವಾ ರಾಜ್ಯದ ಜನರಿಗೆ ಕ್ಯಾಸಿನೊ ಪ್ರವೇಶಕ್ಕೆ ಪರವಾನಗಿ ನೀಡುವ ಕುರಿತ ಅರ್ಜಿಗೆ ಸಂಬಂಧಿಸಿದಂತೆ ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಖಂಡಪೀಠದಲ್ಲಿ ವಿಚಾರಣೆ ಪೂರ್ಣಗೊಂಡಿದ್ದು ಈ ಪ್ರಕರಣದ ತೀರ್ಪನ್ನು ನ್ಯಾಯಾಲಯವು ಕಾಯ್ದಿರಿಸಿದೆ. ಗೋವಾ ರಾಜ್ಯದ ಜನತೆಗೆ ಕ್ಯಾಸಿನೊಕ್ಕೆ ಪ್ರವೇಶಾವಕಾಶ ಲಭಿಸುತ್ತಿಲ್ಲ. ಈ ಬೇಧಭಾವ ಸರಿಯಲ್ಲ ಎಂದು ಶುಕ್ರ ಉಜಗಾಂವಕರ್ ರವರು ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಖಂಡಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು. ದಮನ್ ಮತ್ತು ದೀವ್ ಜೂಜು ಖಾಯ್ದೆಗೆ ಅರ್ಜಿದಾರ ಉಜಗಾಂವಕರ್ …
Read More »Daily Archives: ಅಕ್ಟೋಬರ್ 12, 2021
ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನಕ್ಕಾಗಿ ಆನ್ಲೈನ್ ಬುಕಿಂಗ್ ಆರಂಭ
ಪತ್ತನಂತಿಟ್ಟ: ಕೇರಳದ ಪ್ರಸಿದ್ಧ ಶಬರಿಮಲೆ ದೇಗುಲದಲ್ಲಿ(Sabarimala shrine) ಮಂಡಲ-ಮಕರವಿಳಕ್ಕು (Mandala-Makaravilakku) ಆನ್ಲೈನ್ ಬುಕಿಂಗ್ ಆರಂಭವಾಗಿದೆ. ಸೋಮವಾರದಿಂದ ಬುಕಿಂಗ್ ಆರಂಭವಾಗಿದೆ ಎಂದು ದಿನಮಲರ್ ಮತ್ತು ಇತರ ಸ್ಥಳೀಯ ಪ್ರಕಟಣೆಗಳು ವರದಿ ಮಾಡಿವೆ. ಮಂಡಲ-ಮಕರವಿಳಕ್ಕಿನ ಯಾತ್ರಾ ಕಾಲವು ನವೆಂಬರ್ 16 ರಿಂದ ಆರಂಭವಾಗುತ್ತದೆ ಮತ್ತು ಆರಂಭಿಕ ದಿನಗಳಲ್ಲಿ ಕೇವಲ 25,000 ಭಕ್ತರಿಗೆ ಮಾತ್ರ ಪ್ರವೇಶವನ್ನು ಅನುಮತಿಸಲಾಗುತ್ತದೆ. ಭಕ್ತರ ಸಂಬಂಧಿತ ವಿವರಗಳು ಮತ್ತು ಫೋಟೊಗಳನ್ನು ಅಪ್ಲೋಡ್ ಮಾಡುವ ಮೂಲಕ ಶಬರಿಮಲೆಯ ಅಧಿಕೃತ ವೆಬ್ಸೈಟ್ನಲ್ಲಿ ಬುಕಿಂಗ್ …
Read More »ಆರ್ ಎಸ್ ಎಸ್ ವಿರುದ್ಧ 1977ರಿಂದಲೂ ನಾನು ಮಾತನಾಡುತ್ತಿದ್ದೇನೆ: ಮಾಜಿ ಸಿಎಂ ಸಿದ್ದರಾಮಯ್ಯ
ಕಲಬುರಗಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್)ದ ವಿರುದ್ಧ 1977ರಿಂದಲೂ ನಾನು ಮಾತನಾಡುತ್ತಿದ್ದೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಆರ್ಎಸ್ಎಸ್ ವಿರುದ್ಧ ಮಾತನಾಡುವುದು ಬೆಂಕಿ ಜತೆಗೆ ಸರಸವಾಡಿದಂತೆ ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 1977ರಿಂದಲೂ ಆರ್ ಎಸ್ ಎಸ್ ಮಾತನಾಡುತ್ತಾ ಬಂದಿರುವೆ. ಮೊದಲಿಂದಲೂ ಸಂಘ ಪರಿವಾರದ …
Read More »ಬೆಂಗಳೂರಿನಲ್ಲಿ ಮಳೆ ಅಬ್ಬರ: ಮನೆಗೆ ತೆರಳಲಾಗದೆ ಜನರ ಪರದಾಟ
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಯಿಂದಲೂ ಭಾರೀ ಮಳೆಯಾಗುತ್ತಿದ್ದು, ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ. ಹಲವೆಡೆ ಈಗಲೂ ಮಳೆ ಸುರಿಯುತ್ತಿದ್ದು , ಬೆಂಗಳೂರು ಏರ್ಪೋರ್ಟ್ ಮುಖ್ಯರಸ್ತೆಗಳು ಜಲಾವೃತಗೊಂಡಿವೆ. ಏರ್ಪೋರ್ಟ್ ತಲುಪಲು ಪ್ರಯಾಣಿಕರು ಒದ್ದಾಡಿದ್ದು, ಎಷ್ಟೋ ಮಂದಿ ಫ್ಲೈಟ್ ಮಿಸ್ ಮಾಡಿಕೊಂಡಿದ್ದಾರೆ. ಏರ್ಪೋರ್ಟ್ ರಸ್ತೆಯಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಂ ಉಂಟಾಗಿದ್ದು, ಜನ ತೊಂದರೆ ಅನುಭವಿಸಬೇಕಾಯ್ತು. ಬೆಂಗಳೂರಿನ ಬಹುತೇಕ ರಸ್ತೆಗಳು, ಅಂಡರ್ಪಾಸ್ಗಳಲ್ಲಿ ನೀರು ತುಂಬಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. …
Read More »ಗೋಕಾಕ ತಾಲೂಕಿನ ಮಿನಿ ವಿಧಾನಸೌಧ ಎಷ್ಟು ವೈಜ್ಞಾನಿಕವಾಗಿ ಕಟ್ಟಿದ್ದಾರೆಂದರೆ. ಮಳೆ ಬಂದರೆ ಸಾಕು ಕಾರಿಡಾರ, ಮೆಟ್ಟಿಲು, ಟೈಲ್ಸ್ ಎಲ್ಲ ಮಳೆರಾಯ ಸ್ವಚ್ಛ ಮಾಡತಾನೆ.
ಗೋಕಾಕ: ಗೋಕಾಕ ಅಂದ್ರೇನೆ ಪವರ್ಫುಲ್ ಅನ್ನೋದು ಎಲ್ಲಾಜನರಿಗೆ ಗೊತ್ತು, ಹೇಗೆ ಕರದಂಟು ಫೇಮಸ್ ಇದೆಯೋ ಹಾಗೆ ಅಲ್ಲಿನ ರಾಜಕೀಯ ಕೂಡ ಹಾಗೆ ಇದೆ ಆದ್ರೆ ಇಲ್ಲೊಂದು ನಿನ್ನೆಯ ಮಳೆಯ ಆಗಮನಕ್ಕೆ ನಡೆದ ಘಟನೆ ವಿಚಿತ್ರ ವಾದರು ನಿಜ ನಮ್ಮ ಗೋಕಾಕ ತಾಲೂಕಿನ ಮಿನಿ ವಿಧಾನಸೌಧ ಎಷ್ಟು ವೈಜ್ಞಾನಿಕವಾಗಿ ಕಟ್ಟಿದ್ದಾರೆಂದರೆ. ಮಳೆ ಬಂದರೆ ಸಾಕು ಕಾರಿಡಾರ, ಮೆಟ್ಟಿಲು, ಟೈಲ್ಸ್ ಎಲ್ಲ ಮಳೆರಾಯ ಸ್ವಚ್ಛ ಮಾಡತಾನೆ. ಕೆಲಸದ ಗುಣಮಟ್ಟದ ಮೇಲೆ ಗಮನ ಇರದೆ, …
Read More »ರವಿಚಂದ್ರನ್ ನನ್ನ ಪಾಲಿಗೆ ಲಕ್ಕಿ..; ಮಿಸ್ ನಂದಿನಿ ಮುಹೂರ್ತದಲ್ಲಿ ಪ್ರಿಯಾಂಕಾ
ಬೆಂಗಳೂರು: ‘ರವಿಚಂದ್ರನ್ ಯಾವತ್ತಿದ್ದರೂ ನನಗೆ ಲಕ್ಕಿ. ನನ್ನ ಸಿನಿಮಾದ ಯಾವುದಾದರೂ ಕಾರ್ಯಕ್ರಮಕ್ಕೆ ಅವರನ್ನು ಕರೆಸಬೇಕೆಂಬ ಆಸೆ ತುಂಬ ದಿನಗಳಿಂದ ಇತ್ತು. ಇದೀಗ ಆ ಕನಸು ನನಸಾಗಿದೆ …’ ಹೀಗೆ ಖುಷಿಯಾಗಿ ಹೇಳಿಕೊಂಡರು ಪ್ರಿಯಾಂಕಾ ಉಪೇಂದ್ರ. ಅವರು ‘ಮಿಸ್ ನಂದಿನಿ’ ಎಂಬ ಚಿತ್ರದಲ್ಲಿ ನಟಿಸುತ್ತಿರುವ ವಿಚಾರ ಇತ್ತೀಚೆಗಷ್ಟೇ ಅಧಿಕೃತವಾಗಿತ್ತು. ಇದೀಗ ಸದ್ದಿಲ್ಲದೆ ಮುಹೂರ್ತ ಮುಗಿಸಿ, ಶೂಟಿಂಗ್ ಸಹ ಶುರುಮಾಡಿದೆ ತಂಡ. ಈ ಮುಹೂರ್ತ ಕಾರ್ಯಕ್ರಮಕ್ಕೆ ರವಿಚಂದ್ರನ್ ಆಗಮಿಸಿ ಕ್ಲಾಪ್ ಮಾಡಿ ಶುಭಾಶಯ …
Read More »ಬೆಲ್ಟಿನಲ್ಲಿ 804 ಗ್ರಾಂ ಚಿನ್ನ ಅಡಗಿಸಿಕೊಂಡು ಬಂದ ಭೂಪನನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು!
ಹುಬ್ಬಳ್ಳಿ: ದೇಹದ ಯಾವ್ಯಾವುದೋ ಭಾಗದಲ್ಲಿ ಅಡಗಿಸಿಟ್ಟುಕೊಂಡು ವಿದೇಶಗಳಿಂದ ವಿಮಾನದ ಮೂಲಕ ಚಿನ್ನ ಕದ್ದು ತರೋದನ್ನು ನೋಡಿದ್ದೇವೆ. ಹುಬ್ಬಳ್ಳಿಯಲ್ಲೊಬ್ಬ ಬೆಲ್ಟ್ ನಲ್ಲಿ ಚಿನ್ನದ ಗಟ್ಟಿಗಳನ್ನು (Gold Smuggling) ಅಡಗಿಸಿಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಹತ್ತಿರ ಹತ್ತಿರ ಒಂದು ಕೆ.ಜಿ.ಯಷ್ಟು ತೂಕದ ಎರಡು ಚಿನ್ನದ ಗಟ್ಟಿಗಳನ್ನು ಬೆಲ್ಟ್ ನಲ್ಲಿ ಅಡಗಿಸಿಟ್ಟುಕೊಂಡು ಸಾಗಿಸೋ ವೇಳೆ ಪೊಲೀಸರ (Hubballi Police) ಬಲೆಗೆ ಬಿದ್ದಿದ್ದಾನೆ. ಗಾಂಜಾ ಮಾರಾಟ ಪ್ರಕರಣದಿಂದ ತೀವ್ರ ಚರ್ಚೆಗೆ …
Read More »ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಅಮೀರಾ ಎಂಬುವವರು ಆತ್ಮಹತ್ಯೆ,ಪತಿ ಅರೆಸ್ಟ್
ಕೊಡಗು: ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಅಮೀರಾ ಎಂಬುವವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ರುಬೈಸ್ನನ್ನ ಪೊಲೀಸರು ಬಂಧಿಸಿದ್ದಾರೆ. ಕೊಡಗಿನ ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮದಲ್ಲಿ ಗೃಹಿಣಿ ಅಮೀರಾ(21) ಸಾವನ್ನಪ್ಪಿದ್ದರು. ಅಮಿರಾಳಿಗೆ ವಾಟ್ಸ್ ಆಯಪ್ನಲ್ಲೇ ಪತಿ ರುಬೈಸ್ ತಲಾಖ್ ಹೇಳಿದ್ದ ಎನ್ನಲಾಗಿದೆ. ಸದ್ಯ ರುಬೈಸ್ನನ್ನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮಗಳ ಸಾವಿನ ಬಳಿಕ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಇನ್ನು ರುಬೈಸ್ನ ತಂದೆ ತಾಯಿ …
Read More »ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆ ಏರ್ಪೋರ್ಟ್ಗೆ ಹೋಗಲು ಟ್ರ್ಯಾಕ್ಟರ್ ಮೊರೆಹೋದ ಪ್ಯಾಸೆಂಜರ್ಸ್
ಬೆಂಗಳೂರು: ಹಲವು ದಿನಗಳಿಂದ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆ ಬೆಂಗಳೂರಿಗರನ್ನ ಕಂಗೆಡಿಸಿದೆ. ಇಂದು ಕೂಡ ಧಾರಾಕಾರ ಮಳೆ ಸುರಿದಿದ್ದು ವಾಹನ ಸವಾರರು ಪರದಾಡುವಂತಾಗಿತ್ತು. ಇತ್ತ ದೇವನಹಳ್ಳಿ ಏರ್ಪೋರ್ಟ್ ಬಳಿಯೂ ಭಾರೀ ಮಳೆಯಾಗಿದ್ದು ಏರ್ಪೋರ್ಟ್ ಅರೈವಲ್ ಮತ್ತು ಡಿಪಾರ್ಚರ್ ವೇ, ಪಾರ್ಕಿಂಗ್ ಬಳಿಯೂ ಕೆರೆಯಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಇತ್ತ ಏರ್ಪೋರ್ಟ್ಗೆ ಹೋಗುವ ಪ್ಯಾಸೆಂಜರ್ಗಳು ಏರ್ಪೋರ್ಟ್ಗೆ ತೆರಳಬೇಕಿದ್ದ ಬಸ್ ಸಿಗದೇ ಪರದಾಡುವಂತಾಗಿದೆ. ಈ ವೇಳೆ ದೇವರಂತೆ ಬಂದ ಟ್ರ್ಯಾಕ್ಟರ್ ಚಾಲಕನೋರ್ವ ಏರ್ಪೋರ್ಟ್ಗೆ ಹೋಗಲು …
Read More »ಬೆಳಗಾವಿ ಬೂಡಾದಲ್ಲಿ ಇನ್ನೂ ಇದೆ ಕೆಜೆಪಿ v/s ಬಿಜೆಪಿ ಸಮರ;
ಬೆಳಗಾವಿ (ಅಕ್ಟೋಬರ್. 11)- ಬೆಳಗಾವಿ ಜಿಲ್ಲೆಯ ರಾಜಕೀಯ ಪೈಪೋಟಿ, ಪರಸ್ಪರ ಹೋರಾಟಕ್ಕೆ ಹೆಸರಾಗಿದೆ. ರಾಜ್ಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸ್ಥಾಪನೆ ಮಾಡಿದ ಕೆಜೆಪಿ ಪಕ್ಷದಲ್ಲಿ ವಿಲೀನಗೊಂಡು ವರ್ಷಗಳೇ ಉರುಳಿದೆ. ಆದರೆ ಇನ್ನೂ ಕೆಜೆಪಿ, ಬಿಜೆಪಿ ನಡುವೆ ಮಾತ್ರ ಇನ್ನೂ ಮುಸುಕಿನ ಗುದ್ದಾಟ ಇದೆ. ಇದಕ್ಕೆ ಸಾಕ್ಷಿ ಎಂಬತೆ ಇದೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಿರಿ ಹುದ್ದೆ. ಹಾಲಿ ಅಧ್ಯಕ್ಷ ಘೂಳಪ್ಪ ಹೊಸಮನಿ ವಿರುದ್ಧ ಬಿಜೆಪಿ ಶಾಸಕರು ಅಸಹಕಾರ ಆರಂಭಿಸಿದ್ದಾರೆ. …
Read More »