ಕಾರ್ಕಳದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಉದ್ಯಮಿ ಸುದೀಪ್ ಶೆಟ್ಟಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸುದೀಪ್ ಅವರ ಪತ್ನಿ ಸೌಮ್ಯ ಶೆಟ್ಟಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಉಡುಪಿಯ ಸೆಷನ್ಸ್ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ. ಪ್ರಕರಣದ ಹಿನ್ನೆಲೆ ಏನು? ಕಾರ್ಕಳದ ಯುವ ಉದ್ಯಮಿಯಾಗಿದ್ದ ಸುದೀಪ್ ಶೆಟ್ಟಿ ಅವರು ಕಳೆದ ಮಾರ್ಚ್ 22ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಾವು ಇಡೀ ಜಿಲ್ಲೆಯಲ್ಲಿ ದೊಡ್ಡ …
Read More »ಕಾಡು ಕಾಯುವ ‘ಕೈ’ಗಳಿಗೆ ಗತಿಯಿಲ್ಲ: ಅರಣ್ಯ ಇಲಾಖೆಯ ದಿನಗೂಲಿ ನೌಕರರ ಕಣ್ಣೀರಿನ ಕಥೆ!
ನಮ್ಮ ನಾಡಿನ ಹಸಿರನ್ನು, ವನ್ಯಜೀವಿಗಳನ್ನು ಹಗಲು-ಇರುಳು ಎನ್ನದೆ ಪ್ರಾಣದ ಹಂಗು ತೊರೆದು ಕಾಯುವ ಅರಣ್ಯ ರಕ್ಷಕರ ಸ್ಥಿತಿ ಇಂದು ಬೀದಿಗೆ ಬಂದಿದೆ. ಅಧಿಕಾರಿಗಳಿಗೆ ಲಕ್ಷ ಲಕ್ಷ ಸಂಬಳ, ಎಸಿ ರೂಮುಗಳ ಸುಖ.. ಆದರೆ ಕಾಡಿನ ಒಳಗೆ ಪ್ರಾಣಿಗಳ ಎದುರು ನಿಂತು ಕೆಲಸ ಮಾಡುವ ವಾಚರ್ಗಳಿಗೆ ಕನಿಷ್ಠ ವೇತನವೂ ಇಲ್ಲದಂತಾಗಿದೆ! ಇದು ನಮ್ಮ ವ್ಯವಸ್ಥೆಯ ದುರಂತವಲ್ಲವೇ? ಬಂಡೀಪುರದಲ್ಲಿ ಪ್ರತಿಭಟನೆಯ ಕಿಚ್ಚು! ನ್ಯಾಯಕ್ಕಾಗಿ ಆಗ್ರಹಿಸಿ ಇಂದಿನಿಂದ ಬಂಡೀಪುರದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಗಿದೆ. ರಾಜ್ಯದ …
Read More »ನೇಹಾ ಹಿರೇಮಠ ಕೊಲೆ ಪ್ರಕರಣ: ಐದನೇ ಬಾರಿಯೂ ಹಂತಕನ ಜಾಮೀನು ಅರ್ಜಿ ರಿಜೆಕ್ಟ್..!
ನೇಹಾ ಹಿರೇಮಠ ಹತ್ಯೆ ನಡೆದು 2 ವರ್ಷವೇ ಕಳೆದಿದೆ. ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ನ್ಯಾಯ ಕೊಡಿಸುತ್ತೇವೆ ಎಂಬ ಸರ್ಕಾರ ಭರವಸೆ ಹುಸಿಯಾಗಿದೆ. ಆದರೆ ನೇಹಾ ಪರ ವಕೀಲರ ಪರಿಶ್ರಮದಿಂದ ಹಂತಕನಿಗೆ ಐದನೇ ಬಾರಿಯೂ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಹುಬ್ಬಳ್ಳಿಯ ಬಿವಿಬಿ ಕಾಲೇಜ್ನಲ್ಲಿಯೇ ಹಾಡಹಗಲೇ ಭೀಕರವಾಗಿ ಹತ್ಯೆಗೀಡಾಗಿದ್ದ ನೇಹಾ ಹಿರೇಮಠ, ಕೊಲೆಯಾಗಿ ಏಪ್ರಿಲ್ 18ಕ್ಕೆ ಎರಡು ವರ್ಷ ಕಳೆದಿದೆ. ಆದ್ರೆ, ಈ ವರೆಗೂ ನೇಹಾಳ ಸಾವಿಗೆ ನ್ಯಾಯ ದೊರಕಿಲ್ಲ. ತ್ವರಿತ …
Read More »ಅಪ್ರಾಪ್ತ ಮಗನ ಕೈಗೆ ಬೈಕ್ ಕೊಟ್ಟ ತಪ್ಪಿಗೆ ಪಾಲಕರಿಗೆ ಭಾರಿ ಪ್ರಮಾಣದ ದಂಡ
ಧಾರವಾಡ: ತಮ್ಮ ಅಪ್ರಾಪ್ತ ಮಗನ ಕೈಗೆ ಬೈಕ್ ಕೊಟ್ಟ ತಪ್ಪಿಗೆ ಪಾಲಕರೊಬ್ಬರು ಭಾರಿ ಪ್ರಮಾಣದ ದಂಡ ಭರಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಮೈನುದ್ದೀನ್ ಜಲಾಲದಾರ ಎಂಬುವರೇ ಬಾರಿ ದಂಡ ಭರಿಸಿದ ಪಾಲಕರು. ಅವರ ಅಪ್ರಾಪ್ತ ಮಗ ಬೈಕ್ ಚಲಾಯಿಸುವಾಗ ಪೊಲೀಸರಿಗೆ ಸಿಕ್ಕು ಬಿದ್ದಿದ್ದನು. ನಂತರ ಪೊಲೀಸರು ಸಂಚಾರಿ ನಿಯಮಾನುಸಾರ ದಂಡ ವಿಧಿಸಿದ್ದರು. ಧಾರವಾಡದ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಪಾಲಕರು 26 ಸಾವಿರ ರೂಪಾಯಿ ದಂಡ ಭರ್ತಿ ಮಾಡಿದ್ದಾರೆ. ಬಳಿಕ …
Read More »ಅಂಬೇಡ್ಕರ್’ರ ಸಂವಿಧಾನದಡಿ ನಾವೆಲ್ಲರೂ ಒಂದೇ: ಬೆಳಗಾವಿಯಲ್ಲಿ ಜಿ.ಸಿ. ವೆಂಕಟರಮಣಪ್ಪ ಪ್ರತಿಪಾದನೆ ಸಮತಾ ಸೈನಿಕ ದಳದ ಸಮಾವೇಶ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ
ಬಾಬಾಸಾಹೇಬರು ನೀಡಿದ ಹಕ್ಕುಗಳು ಇಡೀ ಮಾನವಕುಲಕ್ಕೆ ಸೇರಿವೆ. ಅಂಬೇಡ್ಕರ್’ರ ಸಂವಿಧಾನದಡಿ ನಾವೆಲ್ಲರೂ ಒಂದೇ ಎಂದು ಸಮತಾ ಸೈನಿಕ ದಳದ ಬೃಹತ್ ಸಮಾವೇಶದಲ್ಲಿ ರಾಜ್ಯಾಧ್ಯಕ್ಷ ಜಿ.ಸಿ. ವೆಂಕಟರಮಣಪ್ಪ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಬೆಳಗಾವಿಯ ಶಾಹುನಗರದಲ್ಲಿ ಇಂದು ಸಮತಾ ಸೈನಿಕ ದಳದ ಜಿಲ್ಲಾ ಹಾಗೂ ಉತ್ತರ ಕರ್ನಾಟಕ ಮಟ್ಟದ ಪದಾಧಿಕಾರಿಗಳ ಮಹತ್ವದ ಸಮಾವೇಶ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಅಧ್ಯಕ್ಷರಾದ ಜಿ.ಸಿ. ವೆಂಕಟರಮಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ …
Read More »ಎಲ್ಲೆಂದರಲ್ಲಿ ಎಸೆಯಬೇಡಿ ದೇವರ ಫೋಟೋ: ಬೆಳಗಾವಿಯಲ್ಲಿ ಹಳೆಯ ಭಾವಚಿತ್ರಗಳ ಸಂಗ್ರಹಿಸಿ ವಿಧಿಪೂರ್ವಕ ವಿಸರ್ಜನೆ
ಮನೆಗಳಲ್ಲಿ ಹಳೆಯದಾದ ದೇವರ ಫೋಟೋಗಳನ್ನು ಎಲ್ಲೆಂದರಲ್ಲಿ ಎಸೆಯುವ ಮೂಲಕ ದೈವನಿಂದನೆ ಮಾಡುವುದನ್ನು ತಡೆಯಲು ಬೆಳಗಾವಿಯ ಸರ್ವ ಲೋಕ ಸೇವಾ ಫೌಂಡೇಶನ್ ಮಹತ್ವದ ಕಾರ್ಯಕ್ಕೆ ಮುಂದಾಗಿದೆ. ಶಿವಬಸವ ನಗರದಲ್ಲಿ ರಾಶಿಗಟ್ಟಲೆ ಬಿದ್ದಿದ್ದ ದೇವರ ಭಾವಚಿತ್ರಗಳನ್ನು ಸಂಗ್ರಹಿಸಿ, ಹುಕ್ಕೇರಿ ಶ್ರೀಗಳ ಸಾನಿಧ್ಯದಲ್ಲಿ ಶಾಸ್ತ್ರೋಕ್ತವಾಗಿ ವಿಸರ್ಜಿಸುವ ಮೂಲಕ ವಿರೇಶ್ ಹಿರೇಮಠ ತಂಡ ಮಾದರಿಯಾಗಿದೆ. ಬೆಳಗಾವಿಯ ಶಿವಬಸವ ನಗರದ ಶ್ರೀ ಜ್ಯೋತಿರ್ಲಿಂಗ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರು ತಂದು ಹಾಕಿದ್ದ ರಾಶಿಗಟ್ಟಲೆ ದೇವರ ಹಳೆಯ ಫೋಟೋಗಳನ್ನು ಸರ್ವ …
Read More »ಮಾನ್ಯ ದೆಹಲಿ ಸುಪ್ರೀಂ ಕೋರ್ಟ್ ನಲ್ಲಿ ಸೌಜನ್ಯ ಪ್ರಕರಣ ಅದ್ಭುತ ಬೆಳವಣಿಗೆ
ದೆಹಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸೌಜನ್ಯ ಪ್ರಕರಣ ವಿಚಾರಣೆ ನಡೆಯಿತು. ಪ್ರಮುಖ ಅಂಶಗಳು : 1. ಸೌಜನ್ಯ ಪ್ರಕಾರಣದ ಎಲ್ಲ ಸಾಕ್ಷಿಗಳಿಗೆ ತಕ್ಷಣದಿಂದ ರಕ್ಷಣೆ ನೀಡಬೇಕು. ಈ ಹಿಂದೆ ಕೆಲವು ಪ್ರಮುಖ ಸಾಕ್ಷಿಗಳು ಸಂಶಯ ಸಾವು ಹೊಂದಿರುವ ಆಧಾರದ ಮೇಲೆ ಈ ನಿರ್ದೇಶನ ನೀಡಿದೆ 2. ಮರು ತನಿಖೆ ಕುರಿತ ತಮ್ಮ ನಿಲುವನ್ನು CBI ಮತ್ತು ರಾಜ್ಯ ಸರ್ಕಾರ 2 ವಾರದಲ್ಲಿ ಲಿಖಿತ ರೂಪದಲ್ಲಿ ನೀಡಬೇಕು ಮರು ತನಿಖೆ ಯಾವ ತನಿಖ …
Read More »ಸ್ವಯಂ ಪ್ರೇರಿತವಾಗಿ ನಿವೃತ್ತಿ ಪಡೆದ ಪೊಲೀಸ್ ಹವಾಲ್ದಾರ್
ಪೊಲೀಸ್ ಇಲಾಖೆಯಲ್ಲಿ 20 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಹವಾಲ್ದಾರ್ ಒಬ್ಬರು ಸ್ವಯಂ ಪ್ರೇರಿತವಾಗಿ ನಿವೃತ್ತಿ ಪಡೆಯುತ್ತಿದ್ದರು. ಅವರಿಗೆ ಸಾಕಷ್ಟು ಸಮಯ ತಿಳಿಸಿ ಹೇಳಿದ ನಂತರ ಎಸ್ಪಿ ಕೇಳಿದರು, “ಈ ಕೆಲಸವು ನಿಮಗೆ ಎಲ್ಲವನ್ನು ಕೊಟ್ಟಿದೇ, ಆದರೂ ಏಕೆ ಸ್ವಯಂ ನಿವೃತ್ತಿ ಪಡೆಯುತ್ತಿದ್ದೀರಿ?” ಇದಕ್ಕೆ, ಹವಾಲ್ದಾರ್ ಸುಂದರವಾದ ಮತ್ತು ಮಾರ್ಮಿಕವಾಗಿ ಹೃದಯಸ್ಪರ್ಶಿ ಉತ್ತರವನ್ನು ನೀಡಿದರು: “ಸರ್, ನೀವು ನಿಮ್ಮ ಮುಂದೆ ಖಾಲಿ ಕುರ್ಚಿಗಳಿದ್ದರೂ ಸಹ.” ನನಗೆ ಎರಡು ಗಂಟೆಗಳ ಕಾಲ …
Read More »ಮಹಿಳಾ ಮೀಸಲಾತಿ ಜಾರಿಗೊಳಿಸಿ: ಪ್ರಿಯಾಂಕಾ ಜಾರಕಿಹೊಳಿ
ಚಿಕ್ಕೋಡಿ:ಕೇಂದ್ರದಲ್ಲಿ ಬಿಜೆಪಿ ಸರ್ಕಾರ ನಾರಿಶಕ್ತಿ ವಂದನ್ ಮಸೂದೆಯ ಬದಲಾಗಿ 2023ರ ಮಹಿಳಾ ಮೀಸಲಾತಿಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಆಗ್ರಹಿಸಿದರು. ಚಿಕ್ಕೋಡಿ ನಾಗರಮುನ್ನೋಳಿ ಬ್ಲಾಕ್ ಕಾಂಗ್ರೆಸ್ ಪಟ್ಟಣದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ರಾಜೀವ್ ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ, ತಾಪಂ, ಜಿಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿಯನ್ನು ತರಲಾಗಿತ್ತು. ಕಾಂಗ್ರೆಸ್ ಮಹಿಳಾ ವಿರೋಧಿ ಎಂಬ ಬಿಜೆಪಿ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು …
Read More »ಪ್ರೇಕ್ಷಕರನ್ನು ನಕ್ಕು ನಗಿಸಿದ ಸೆಕೆಂಡ್ ಹ್ಯಾಂಡ್ ಸದಾಶಿವ ನಾಟಕ
ಬೆಳಗಾವಿ : ಇಲ್ಲಿಯ ರಂಗಸೃಷ್ಟಿ ಸಾಂಸ್ಕೃತಿಕ ಸಂಘಟನೆಯ ಕಲಾವಿದರು ಪ್ರಸ್ತುತಪಡಿಸಿದ ಸೆಕೆಂಡ್ ಹ್ಯಾಂಡ್ ಸದಾಶಿವ ನಾಟಕ ಪ್ರದರ್ಶನದುದ್ದಕ್ಕೂ ಪ್ರೇಕ್ಷಕರನ್ನು ನಕ್ಕು ನಗಿಸುವ ಮೂಲಕ ಯಶಸ್ವಿ ಪ್ರಯೋಗವೆನಿಸಿತು. ಕನ್ನಡ ಭವನದಲ್ಲಿ ಮಂಗಳವಾರ ಸಂಜೆ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ ಕಿಕ್ಕಿರಿದು ಪ್ರೇಕ್ಷಕರು ತುಂಬಿದ್ದರು. ಸುಮಾರು 50 ನಿಮಿಷಗಳ ನಾಟಕ ಆರಂಭದಿಂದ ಅಂತ್ಯದವರೆಗೂ ನಿರಂತರ ನಗಿಸುವ ಮೂಲಕ ಪ್ರೇಕ್ಷಕರನ್ನು ಕದಲದಂತೆ ಮಾಡಿತು. ಎಂ. ಎಸ್. ನರಸಿಂಹಮೂರ್ತಿ ರಚಿಸಿರುವ ಈ ನಾಟಕವನ್ನು ಶರಣಗೌಡ ಪಾಟೀಲ ಅವರು ನಿಿಿರ್ದೇಶಿಸಿದ್ದಲ್ಲದೆ, …
Read More »
Laxmi News 24×7