ಪದ್ಮಭೂಷಣ ಡಾ|| ರಾಜ್ಕುಮಾರ್ ಅವರು ನಡೆದು ಬಂದ ಹಾದಿಯಲ್ಲಿ ಸಣ್ಣ ಸಣ್ಣ ವಿಚಾರಗಳು ನಮ್ಮ ಬದುಕಿಗೆ ಸ್ಪೂರ್ತಿದಾಯಕ ಎನ್ನಿಸುತ್ತೆ., ಬಹುಶಃ ನಿಮಗೆ ಗೊತ್ತಿರಲಿಕ್ಕಿಲ್ಲಾ, ತಮಿಳು ನಾಡಿನ ಜನ ಎಂ.ಜಿ. ಆರ್. ಅವರಿಗೆ ‘ನಾಡೋಡಿ ಮನ್ನನ್’ ಎಂಬ ಬಹುದೊಡ್ಡ ಪ್ರಶಸ್ತಿ ನೀಡಿದರು.
ಆದರೆ ಅದನ್ನು ಕೊಡುವವರು ಯಾರು? ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ಎಂ.ಜಿ. ಆರ್. ಅವರು ‘ಜಗತ್ತಿನ ಸರ್ವ ಶ್ರೇಷ್ಠ’ ಕಲಾವಿದರೊಬ್ಬರು ನೀಡುತ್ತಾರೆ ಎಂದರಂತೆ. ಕಾರ್ಯಕ್ರಮದ ಆಯೋಜಕರಿಗೆ ಆಶ್ಚರ್ಯ, ಮದರಾಸಿನಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮದ ದಿನ ಬೆಳಿಗ್ಗೆ ಎಂ.ಜಿ. ಆರ್. ಅವರು ಡಾ. ರಾಜಕುಮಾರ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಇಂದು ನಮ್ಮದೊಂದು ಕಾರ್ಯಕ್ರಮವಿದೆ, ತಾವು ಮುಖ್ಯ ಅತಿಥಿಗಳಾಗಿ ಆಗಮಿಸಬೇಕೆಂದು ಕೋರಿದರು.
ಡಾ. ರಾಜ್ ಅವರು ನನಗೆ ಹುಷಾರಿಲ್ಲದೆ ವಿಶ್ರಾಂತಿಯಲ್ಲಿದ್ದೇನೆ, ಕೂಡಲು ಆಗುತ್ತಿಲ್ಲ ಎಂದರಂತೆ. ಅದ್ದಕ್ಕೆ ಎಂ.ಜಿ. ಆರ್. ಅವರು ಒಂದು ಹತ್ತೇ ನಿಮಿಷ ದಯಮಾಡಿ ಬಂದು ಹೋಗಿ ಎಂದು ವಿನಂತಿಸಿದರಂತೆ, ಮಗುವಿನಂತಹ ಮನಸ್ಸಿನ ರಾಜ್ಕುಮಾರ್ ಬರಲು ಒಪ್ಪಿಂಡಿದ್ದಾರೆ