Breaking News

ಬಡ್ಡಿ ಹೆಚ್ಚು ಪಡೆದುಕೊಳ್ಳುತ್ತಿದ್ದರೆ ಎಂದು ಆರೋಪಿಸಿ ಬ್ಯಾಂಕಗಳಿಗೆ ಮುತ್ತಿಗೆ ಹಾಕಿ ಗೋಕಾಕ ರೈತ ಸಂಘಟನೆಯಿಂದ ಪ್ರತಿಭಟನೆ…!

Spread the love

 

ಗೋಕಾಕ :ನಿಗದಿ ದರಕಿಂತ ಹೆಚ್ಚು ಬಡ್ಡಿ ಹಣ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಬಜಾಜ್ ಪೈನಾನ್ಸ್ ಲಿಮಿಟೆಡ್ ಹಾಗೂ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಸೇರಿದಂತೆ ಗೋಕಾಕನ ವಿವಿಧ ಬ್ಯಾಂಕ್ ಕಚೇರಿಯ ಮುಂದೆ ರೈತ ಸಂಘಟನೆಯಿಂದ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿರುವ ಘಟನೆ ಒಂದು ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ನಡೆದಿದೆ… ಸುಮಾರು ವರ್ಷಗಳ ಹಿಂದೆ ಸಾಗಣ್ಣಾ ಹಡಿಗನಾಳ ಹಾಗೂ ಈರಣ್ಣಾ ಹಡಿಗನಾಳ ಅನಾರೋಗ್ಯದಿಂದ ಸಾವನ್ನಪ್ಪಿದು ಅವರ ಸಾವಿಗೆ ಬ್ಯಾಂಕ್ ಸಾಲವೇ ಕಾರಣ ಇವರು ನೀಡಿರುವ ಕಿರುಕುಳವೇ ಕಾರಣದಿಂದ ಮಾನಸಿಕವಾಗಿ ಸಾವನ್ನಪ್ಪಿದ್ದಾರೆಂದು ಓರಿಯಂಟಲ್ ಬ್ಯಾಂಕ್ ಮೇಲೆ ಮಗ ಶಂಕರ್ ಸಾಬನ್ನಾ ಹಡಿಗನಳ ನೇರವಾಗಿ ಆರೋಪಿಸಿದರು.

ಬ್ಯಾಂಕ ಕಿರುಕುಳದಿಂದ ವಿನಾ ಕಾರಣ ಮನೆಗಳಿಗೆ ಬಂದು ಮಹಿಳೆಯರ ಪೋಟೋ ತೆಗೆದು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ಮಾಡಿದರು, ಇನ್ನು ಗೋಕಾಕ ಗಲ್ಲಿಯ ಹೊಸಪೇಟೆ ಬಜಾರ್ ಪೈನಾನ್ಸ್ ಬ್ಯಾಂಕ್ ಲಿಮಿಟೆಡ್, ಸರಕಾರ ಆದೇಶ ಗಾಳಿಗೆ ತುರಿ ಬೇಕಾ ಬಿಟ್ಟಿ ರೈತ ಕಡೆಯಿಂದ ಹಾಗೂ ಸಾರ್ವಜನಿಕರ ಕಡೆಗೆ ಬಡ್ಡಿ ಸೇರಿದಂತೆ ಚಕ್ರ ಬಡ್ಡಿ ವಸುಲಿಗೆ ಮುಂದಾಗಿದ್ದಾರೆ ಎಂದು ನೇರವಾಗಿ ಆರೋಪಿಸಿದರು. ಲಾಕ ಡೌನ್ ಸಮಯದಲ್ಲಿ ಕೇಂದ್ರ ಸರಕಾರ ಸಾಲದ ಕಂತುಗಳನ್ನು ಮೂರು ತಿಂಗಳ ಮುಂದೆ ನೀಡುವಂತೆ ಸೂಚನೆ ನೀಡಿದರು, ಸರಕಾರ ನಿಯಮಗಳನ್ನು ಗಾಳಿಗೆ ತುರಿ ಸಾಲರ ಕಂತುಗಳನ್ನು ಕಟ್ಟಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.


Spread the love

About Laxminews 24x7

Check Also

ಕಸದ ರಾಶಿಯಲ್ಲಿ ಮುಳುಗಿರುವ ಬೆಳಗಾವಿ ಅಜಮ್ ನಗರದ ಮೊದಲನೇ ಕ್ರಾಸ್…

Spread the love ಕಸದ ರಾಶಿಯಲ್ಲಿ ಮುಳುಗಿರುವ ಬೆಳಗಾವಿ ಅಜಮ್ ನಗರದ ಮೊದಲನೇ ಕ್ರಾಸ್… ಕಸ ವಿಲೇವಾರಿಯಾಗುತ್ತಿಲ್ಲ, ನಾಯಿಗಳ ಹಾವಳಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ