ಶಿವಮೊಗ್ಗ:ಭಾರೀ ಮಳೆಯ ನಡುವೆ ಹಸಿರುಮಕ್ಕಿ ಲಾಂಚ್ ಶರಾವತಿ ನದಿ ನಡುವೆ ಸಿಕ್ಕಿ ಬಿದ್ದಿದ್ದು ಲಾಂಚ್ ನಲ್ಲಿರುವ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ.
ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಸಮೀಪದ ಶರಾವತಿ ನದಿಯಲ್ಲಿ ಈ ಘಟನೆ ನಡೆದಿದೆ. ಲಾಂಚ್ ನಲ್ಲಿರುವ ಪ್ರಯಾಣಿಕರು ಅತಂತ್ರಗೊಂಡಿದ್ದು, ಮೊಬೈಲ್ ಸಂಪರ್ಕಕ್ಕೆ ಸಿಗದೇ ಲಾಂಚ್ ನಲ್ಲಿರುವ ಪ್ರಯಾಣಿಕರು ಪರದಾಡುವಂತಾಗಿದೆ. ಕ್ರೈನ್ ಮೂಲಕ ಲಾಂಚ್ ದಡಕ್ಕೆ ತರುವ ಪ್ರಯತ್ನಗಳು ನಡೆದಿವೆ.