Breaking News

1 ರೂಪಾಯಿ ನಾಣ್ಯ ಮಾರಾಟಕ್ಕಿಟ್ಟು ₹1 ಲಕ್ಷ ಕಳೆದುಕೊಂಡ ಶಿಕ್ಷಕಿ

Spread the love

ಬೆಂಗಳೂರು: 1 ರೂಪಾಯಿ ನಾಣ್ಯವನ್ನು ಓಎಲ್‌ಎಕ್ಸ್ ನಲ್ಲಿ ಮಾರಾಟಕ್ಕಿಟ್ಟ ಶಿಕ್ಷಕಿಯೊಬ್ಬರು 1 ಲಕ್ಷ ರೂಪಾಯಿ ಕಳೆದುಕೊಂಡು ವಂಚನೆಗೆ ಒಳಗಾಗಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಸರ್ಜಾಪುರ ರಸ್ತೆ ವಿಪ್ರೋ ಗೇಟ್​ನ 38 ವರ್ಷದ ಶಿಕ್ಷಕಿ ವಂಚನೆಗೊಳಗಾಗಿದ್ದಾರೆ. ಒಂದು ಕೋಟಿ ರೂಪಾಯಿ ಕೊಡುತ್ತೇನೆಂದು ನಂಬಿಸಿದ್ದ ವಂಚಕ, 1 ಲಕ್ಷ ರೂಪಾಯಿಯನ್ನು ತನ್ನ ಖಾತೆಗೆ ಹಾಕಿಸಿಕೊಂಡು ಮೋಸ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ನಡೆದಿದ್ದೇನು..?
ಜೂ.15 ರಂದು ಓಎಲ್‌ಎಕ್ಸ್ ನಲ್ಲಿ ಶಿಕ್ಷಕಿ ಓಎಲ್​​​​​ಎಕ್ಸ್​​​ನಲ್ಲಿ 1947ರ ಇಸವಿಯ ನಾಣ್ಯವನ್ನು ಮಾರಾಟಕ್ಕಿಟ್ಟು, ತಮ್ಮ ಮೊಬೈಲ್ ಸಂಖ್ಯೆಯನ್ನು ಪೊರ್ಟಲ್​​​ನಲ್ಲಿ ಹಂಚಿಕೊಂಡಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಶಿಕ್ಷಕಿಯ ಮೊಬೈಲ್ ನಂಬರ್​​ಗೆ ಕರೆ ಮಾಡಿ, 1 ರೂಪಾಯಿ ನಾಣ್ಯಕ್ಕೆ 1 ಕೋಟಿ ರೂಪಾಯಿ ಕೊಡುತ್ತೇನೆ ಎಂದು ನಂಬಿಸಿದ್ದ ಎನ್ನಲಾಗಿದೆ. ಅಲ್ಲದೇ ಶಿಕ್ಷಕಿಯ ವಾಟ್ಸಾಪ್​ಗೆ ಹಣ ಕಳುಹಿಸಿರುವ ನಕಲಿ ಸ್ಕ್ರೀನ್ ಶಾಟ್ ಕಳಿಸಿದ್ದಾನೆ.

ವಾಟ್ಸಾಪ್​​ ಮೂಲಕ ಬಂದ ನಕಲಿ ಸ್ಕ್ರೀನ್ ಶಾಟ್​​​ ನೋಡಿದ ಶಿಕ್ಷಕಿ, ಹಣ ಬಂದಿಲ್ಲ ಎಂದು ಆ ಅಪರಿಚಿತ ವ್ಯಕ್ತಿಗೆ ಕರೆ ಮಾಡಿ ಹೇಳಿದ್ದರು. ಈ ವೇಳೆ ಒಂದು ಕೋಟಿ ರೂಪಾಯಿ ದೊಡ್ಡ ಮೊತ್ತದ ಹಣ. ಆದ್ದರಿಂದ ಖಾತೆಗೆ ಹಣ ಬರಬೇಕಾದರೆ ಕೆಲವೊಂದು ಶುಲ್ಕ ಕಟ್ಟಬೇಕು ಎಂದು ಆತ ಹೇಳಿದ್ದ. ಆರ್​​ಬಿಐ ಶುಲ್ಕ, ತೆರಿಗೆ ಹೀಗೆ ನಾನಾ‌ ನೆಪ ಹೇಳಿ ಹಂತ ಹಂತವಾಗಿ ಮಹಿಳೆಯಿಂದ 1 ಲಕ್ಷ ರೂಪಾಯಿ ಹಣವನ್ನು ವಂಚಕ ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ.

ಆದರೆ ₹1 ಲಕ್ಷ ಕಳುಹಿಸಿದ ಮೇಲೂ ಅಕೌಂಟ್​​ಗೆ ಹಣ ಬಾರದಿದ್ದಾಗ ಮತ್ತೊಮ್ಮೆ ಅಪರಿಚಿತ ವ್ಯಕ್ತಿಗೆ ಮಾಡಿದ್ದು, ಈ ವೇಳೆಯೂ ಆತ ಹೆಚ್ಚುವರಿ ಹಣ ಕೇಳಿದ್ದಾನೆ. ಇದರಿಂದ ಅನುಮಾನಗೊಂಡ ಶಿಕ್ಷಕಿ ಕೊನೆಗೆ ಮೋಸ ಹೋಗಿರುವುದು ಅರಿವಾಗಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ