Breaking News

ಆಸ್ಪತ್ರೆಗೆ ತೆರಳುತ್ತಿದ್ದವರು ಮಸಣಕ್ಕೆ

Spread the love

ಧಾರವಾಡ: ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ಸವದತ್ತಿ ಬಳಿ ನಡೆದಿದೆ.

ಮೃತರನ್ನು ನಾಗರಾಜ ಇಚ್ಚಂಗಿ (30), ವಿಜಯಾ (42) ಹಾಗೂ ರೇವಣಸಿದ್ದೇಶ್ವರ ಇಚ್ಚಂಗಿ (46) ಎಂದು ಗುರುತಿಸಲಾಗಿದೆ.

ರೇವಣಸಿದ್ದೇಶ್ವರ ಎಂಬುವವರಿಗೆ ಡಯಾಲಿಸಿಸ್ ಮಾಡಿಸಲೆಂದು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕಾರು ಹಾಗೂ ಲಾರಿ ಎರಡೂ ವಾಹನಗಳ ಚಾಲಕರಿಗೆ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿಯಾಗಿದೆ. ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.


Spread the love

About Laxminews 24x7

Check Also

ಆರ್​.ಅಶೋಕ್​ ಬೆಂಗಾವಲು ವಾಹನದ ಚಾಲಕ ಆತ್ಮಹತ್ಯೆ

Spread the love ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್​. ಅಶೋಕ್​ ಅವರ ಪೊಲೀಸ್​​ ಬೆಂಗಾವಲು ವಾಹನದ ಚಾಲಕ (ನಗರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ