ಬೆಳಗಾವಿಯ ನಾರಾಯಣಿಯ ದರ್ಬಾರದಲ್ಲಿ ಮಹಾಪ್ರಸಾದ
25 ಸಾವಿರಕ್ಕೂ ಅಧಿಕ ಭಕ್ತರು ಸ್ವೀಕರಿಸಿದರು ಕಾಂಗಲೆ ಗಲ್ಲಿ ಶ್ರೀ ದುರ್ಗೆಯ ಪ್ರಸಾದ
ಬೆಳಗಾವಿಯ ನಾರಾಯಣಿಯ ದರ್ಬಾರದಲ್ಲಿ ಮಹಾಪ್ರಸಾದ
25 ಸಾವಿರಕ್ಕೂ ಅಧಿಕ ಭಕ್ತರು ಸ್ವೀಕರಿಸಿದರು ಕಾಂಗಲೆ ಗಲ್ಲಿ ಶ್ರೀ ದುರ್ಗೆಯ ಪ್ರಸಾದ
ದೇವಿಯ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ
ವಣಿ ಸಪ್ತಶೃಂಗಿಯ ಅವತಾರದಲ್ಲಿ ದರ್ಶನವಿತ್ತ ದುರ್ಗೆ
ಬೆಳಗಾವಿಯ ನಾರಾಯಣಿ ಎಂದೇ ಪ್ರಸಿದ್ಧಯಾಗಿರುವ ಬೆಳಗಾವಿಯ ಕಾಂಗಲೆ ಗಲ್ಲಿಯ ಶ್ರೀ ದುರ್ಗಾಮಾತೆಯ ದರ್ಬಾರದಲ್ಲಿ ನವರಾತ್ರಿಯ ನಿಮಿತ್ಯ ಮಹಾಪ್ರಸಾದವನ್ನು ಆಯೋಜಿಸಲಾಗಿತ್ತು, 25 ಸಾವಿರಕ್ಕೂ ಅಧಿಕ ಜನರು ಮಹಾಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.
ಬೆಳಗಾವಿಯ ನಾರಾಯಣಿ ಎಂದೇ ಪ್ರಸಿದ್ಧಯಾಗಿರುವ ಬೆಳಗಾವಿಯ ಕಾಂಗಲೆ ಗಲ್ಲಿಯ ಶ್ರೀ ದುರ್ಗಾಮಾತೆಯ ದರ್ಬಾರದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಮಹಾಪ್ರಸಾದವನ್ನು ಆಯೋಜಿಸಲಾಗಿತ್ತು. ಈ ಬಾರಿ ನವರಾತ್ರಿಯಲ್ಲಿ ಮಹಾರಾಷ್ಟ್ರದ ವಣಿಯ ಸಪ್ತಶೃಂಗಿಯ ಮತ್ತು ಮಹಾಕಾಳನ ರೂಪದಲ್ಲಿ ದುರ್ಗೆಯನ್ನು ಆರಾಧಿಸಲಾಗಿದೆ. ಈ ಹಿನ್ನೆಲೆ ಬೆಳಗಾವಿ ಸೇರಿದಂತೆ ವಿವಿಧೆಡೆ ಸಹಸ್ರಾರು ಜನರು ದೇವಿಯ ದರ್ಶನಕ್ಕೆ ಬರುತ್ತಿದ್ದಾರೆ.
ಭಾನುವಾರ ರಾತ್ರಿ ಕಾಂಗಲೆ ಗಲ್ಲಿಯ ನವರಾತ್ರಿ ಉತ್ಸವ ಮಂಡಳದ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ಮಹಾಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸುಮಾರು 25 ಸಾವಿರಕ್ಕೂ ಅಧಿಕ ಜನರು ಮಹಾಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾದರು.
Laxmi News 24×7