ಚಿಕ್ಕೋಡಿ:ಮಾಜಿ ಸಂಸದ, ಸಹಕಾರಿ ಧುರೀಣ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ ಅವರು ಸಂಸ್ಥಾಪಿಸಿದ ಹಾಗೂ ಕರ್ನಾಟಕ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಸುಮಾರು ೨೨೫ ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ ಬಹು-ರಾಜ್ಯ ನೋಂದಾಯಿತ ಸಂಸ್ಥೆಯಾದ ತಾಲೂಕಿನ ಯಕ್ಸಂಬಾದ ಶ್ರೀ ಬೀರೇಶ್ವರ ಕೋ-ಆಪ್ ಕ್ರೇಡಿಟ್ ಸೋಸಾಯಟಿ (ಮಲ್ಟಿಸ್ಟೇಟ್ ) ಇದರ ಸನ್ ೨೦೨೫-೨೦೩೦ ಸಾಲಿಗಾಗಿ ನೂತನ ಆಡಳಿತ ಮಂಡಳಿ ಸದಸ್ಯರಾಗಿ ವಿವಿಧಡೆಯ ೨೧ ಜನರು ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾದ ಚಿಕ್ಕೋಡಿಯ ಸಹಾಯಕ ಉಪ ನೋಂದಣಾಧಿಕಾರಿ ಮಲ್ಲಪ್ಪ ರಾಹುತಣ್ಣವರ ಅವರು ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರ ಹೆಸರನ್ನು ಪ್ರಕಟಿಸಿದರು. ಹೊಸ ನಿರ್ದೇಶಕರ ಮಂಡಳಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಬಹು-ರಾಜ್ಯ ನೋಂದಾಯಿತ ಸಂಸ್ಥೆಗೆ ಈಗ ೨೧ ನಿರ್ದೇಶಕರು ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ನಿರ್ದೇಶಕರು: ಬಹು-ರಾಜ್ಯ ನೋಂದಾಯಿತ ಈ ಸಂಸ್ಥೆಗೆ ಈಗ ನೂತನವಾಗಿ ೨೧ ನಿರ್ದೇಶಕರು ಆಯ್ಕೆಯಾಗಿದ್ದಾರೆ ಅವರಲ್ಲಿ ಅಣ್ಣಾಸಾಹೇಬ ಶಂಕರ ಜೊಲ್ಲೆ (ಯಕ್ಸಂಬಾ), ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ (ಯಕ್ಸಂಬಾ), ಸಿದ್ರಾಮ ಮಿನಪ್ಪ ಗಡದೆ (ಕೆರೂರ), ಯಾಸಿನ ಗುಲಾಬ ತಾಂಬೋಳೆ (ಯಕ್ಸಂಬಾ), ಅಪ್ಪಾಸಾಹೇಬ ಶಿವರಾಮ ಜೊಲ್ಲೆ (ಯಕ್ಸಂಬಾ), ವಿಭಾವರಿ ದಿಲೀಪ ಖಾಂಡಕೆ (ನಿಪ್ಪಾಣಿ), ಆನಂದ ದೇವಗೌಡ ಪಾಟೀಲ (ಸದಲಗಾ), ಅಣ್ಣಾಸಾಹೇಬ ಶಂಕರ ಚೌಗಲಾ (ಇಂಗಳಿ), ರಿಷಭ ಕೈಲಾಶ ಚಂದ ಜೈನ, (ಇಚಲಕರಂಜಿ), ವಜ್ರಕಾಂತ ಬಾಳಪ್ಪ ಸದಲಗೆ (ನಿಪ್ಪಾಣಿ), ಪ್ರಕಾಶ ಸಿದ್ರಾಯಗೌಡ ಪಾಟೀಲ (ವಿಜಯಪೂರ), ನಿಂಗಪ್ಪಾ ಬಸಲಿಂಗಪ್ಪ ಖೋಕಲೆ (ಬಳ್ಳಿಗೇರಿ), ಕಾಶಿನಾಥ ಸದಾಶಿವ ಕಮತೆ (ಖಡಕಲಾಟ), ದತ್ತಾತ್ರೇಯ ಆನಂದ ಪಾಟೀಲ (ಕನೇರಿ), ಬಾಳಾಸಾಹೇಬ ಅಣ್ಣಾಸೋ ಕದಮ (ಮಮದಾಪುರ ಕೆ.ಎಲ್.) ಮಲ್ಲಿಕಾರ್ಜುನ ಬನ್ನಪ್ಪ ತೇಲಿ (ಹಂದಿಗುAದ), ಸದಾನಂದ ಭೀಮಪ್ಪ ಹಳಿಂಗಳಿ (ರಾಯಬಾಗ), ಜಯಪ್ರಕಾಶ ಶಿವಾಜಿ ಸಾವಂತ (ಸಂಕೇಶ್ವರ), ಚೇತನ ಬಿಪಿನಚಂದ್ರ ದೇಶಪಾಂಡೆ (ಮಲಿಕವಾಡ), ಶ್ರೀನಿವಾಸ ಶತ್ರುಘ್ನ ಕರಾಳೆ (ಚಿಕ್ಕೋಡಿ), ಶ್ರೀಪಾದ ರಾಜಾರಾಮ ನೇರ್ಲಿಕರ (ಚಿಕ್ಕೋಡಿ) ಇವರು ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರು, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಯಕ್ಸಂಬಾದಂತಹ ಚಿಕ್ಕ ಹಳ್ಳಿಯಲ್ಲಿ ೧೯೯೧ ರಲ್ಲಿ ಪ್ರಾರಂಭವಾದ ಶ್ರೀ ಬೀರೇಶ್ವರ ಸಂಸ್ಥೆ ಇಂದು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ೨೨೫ ಕ್ಕೂ ಹೆಚ್ಚು ಶಾಖೆಗಳ ಮೂಲಕ ಸೇವೆಗಳನ್ನು ಒದಗಿಸುತ್ತಿದ್ದು ಹಳ್ಳಿಯಿಂದ ದಿಲ್ಲಿವರೆಗೆ ಜನರ ವಿಶ್ವಾಸಗಳಿಸಿದೆ.
ಜನರು, ಸದಸ್ಯರು, ರೈತರು, ನಿರ್ದೇಶಕರು, ಕಾರ್ಮಿಕರು ೩೫ ವರ್ಷಗಳಿಂದ ಈ ಸಂಸ್ಥೆಯನ್ನು ನಂಬಿ ಬೆಳೆಸಿದ್ದು ಆದ್ದರಿಂದ ಅವಿರೋಧ ಚುನಾವಣೆಗಳ ಸಂಪ್ರದಾಯವು ಇಂದಿಗೂ ಸಂಸ್ಥೆಯಲ್ಲಿ ಉಳಿದಿದೆ. ಈ ಪ್ರಯಾಣದುದ್ದಕ್ಕೂ ಜನರ ಸಹಕಾರವು ಹೆಚ್ಚಿನ ಪ್ರಯೋಜನವನ್ನು ನೀಡಿದೆ.
ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ ಬೀರೇಶ್ವರ ಸಂಸ್ಥೆಯ ಮೂಲಕ ಈ ಪ್ರದೇಶದಲ್ಲಿ ಅನೇಕ ಸಂಸ್ಥೆಗಳು ಪ್ರಾರಂಭವಾಗಿ ಯಶಸ್ವಿಯಾಗಿ ನಡೆಯುತ್ತಿವೆ. ಬಹು-ರಾಜ್ಯದಿಂದಾಗಿ ಈಗ ನಿರ್ದೇಶಕರ ಸಂಖ್ಯೆ ಹೆಚ್ಚಾಗಿದೆ. ನಮಗೆ ಎಲ್ಲಾ ಸದಸ್ಯರು ಮತ್ತು ಹಿತೈಷಿಗಳ ಸಹಕಾರ ಸಿಕ್ಕಿದ್ದು, ಎಲ್ಲರೂ ಸಂಸ್ಥೆಯ ಪ್ರಗತಿಗೆ ಕೈಜೋಡಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ನೂತನ ನಿರ್ದೇಶಕರಿಗೆ ನೇಮಕಾತಿ ಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು. ನಂತರ ಕಾರ್ಯಕ್ರಮದಲ್ಲಿ ಜೊಲ್ಲೆ ದಂಪತಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅನೇಕ ನಿರ್ದೇಶಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಪ್ರಧಾನ ವ್ಯವಸ್ಥಾಪಕ ಬಿ.ಎ. ಗುರವ, ಸಿ.ಇ.ಓ ವಿಜಯ ರಾವುತ್, ಅಧಿಕಾರಿಗಳಾದ ಎಂ.ಕೆ.ಮಂಗಾವತೆ, ಎಸ್.ಕೆ. ಮಾನೆ, ಎಸ್.ಎಸ್.ಡಬ್ಬ, ಎಂ.ಜೆ.ಕುಂಬಾರ ಸೇರಿದಂತೆ ಅನೇಕ ಅಧಿಕಾರಿಗಳು, ಗಣ್ಯರು, ಸಲಹಾ ಸಮೀತಿ ಸದಸ್ಯರು, ಹಿತೈಸಿಗಳು ಪಾಲ್ಗೋಂಡಿದ್ದರು.
Laxmi News 24×7