ಮತದಾನ ಕೇವಲ ಹಕ್ಕಲ್ಲ…ಇದು ನಮ್ಮ ನಿಮ್ಮೆಲ್ಲರ ಕರ್ತವ್ಯ; ಜಿಲ್ಲಾಧಿಕಾರಿ ಮೊಹ್ಮದ್ ರೋಷನ್
ಬೆಳಗಾವಿಯಲ್ಲಿ 15ನೇ ರಾಷ್ಟ್ರೀಯ ಮತದಾರರ ದಿನಾಚರಣೆ-2025
15ನೇ ರಾಷ್ಟ್ರೀಯ ಮತದಾರರ ದಿನಾಚರಣೆ-2025
ಮತದಾನ ಕೇವಲ ಹಕ್ಕಲ್ಲ. ಇದು ನಮ್ಮ ನಿಮ್ಮೆಲ್ಲರ ಕರ್ತವ್ಯ
ಮತದಾನದ ಹಕ್ಕು ಬದಲಿಸ ಬಲ್ಲದು ದೇಶದ ದಿಕ್ಕು
ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಹೇಳಿಕೆ
ಮತದಾನ ಕೇವಲ ಹಕ್ಕಲ್ಲ. ಇದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಪ್ರತಿಯೊಬ್ಬರಿಗೂ ತಮ್ಮ ಜನಪ್ರತಿನಿಧಿಗಳನ್ನು ಆರಿಸುವ ಅಧಿಕಾರವಿದೆ. ಕೆಲಸ ಮಾಡುವ ಕೈಗಳಿಗೆ ಅಧಿಕಾರ ನೀಡುವ ನಿರ್ಧಾರವನ್ನು ಮಾಡಬೇಕು. ಪ್ರಜೆಗಳ ಒಂದು ವೋಟು ದೇಶದ ದಿಕ್ಕನ್ನು ಬದಲಿಸಬಲ್ಲದು ಎಂದು ಬೆಳಗಾವಿ ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಹೇಳಿದರು.
ಬೆಳಗಾವಿಯಲ್ಲಿ 15ನೇ ರಾಷ್ಟ್ರೀಯ ಮತದಾರರ ದಿನಾಚರಣೆ-2025 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದೀದಮ ರಾಣಿ ಚೆನ್ನಮ್ಮ ವೃತ್ತದ ಮೂಲಕ ಕುಮಾರ ಗಂಧರ್ವ ಕಲಾ ಮಂದಿರದ ವರೆಗೆ ಜಾಗೃತಿ ಜಾಥಾ ನಡೆಸಲಾಯಿತು. ನಂತರ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಸಮಾರಂಭವನ್ನು ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ಸತ್ಯ ನ್ಯಾಯಾಧೀಶರಾದ ಟಿ.ಎನ್.ಇನವಳ್ಳಿ ಅವರು ಉದ್ಘಾಟಿಸಿದರು.
ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರು ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಸ್ವೀಪ್ ಕಮೀಟಿ ಅಧ್ಯಕ್ಷರು ಹಾಗೂ ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳಾದ ವಿಜಯಕುಮಾರ್ ಹೊನಕೇರಿ, ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾದ ಶುಭಾ. ಬಿ., ಉಪಾಯುಕ್ತರಾದ ಉದಯಕುಮಾರ್ ತಳವಾರ, ರೇಷ್ಮಾ ತಾಳಿಕೋಟಿ ಸೇರಿದಂತೆ ಇನ್ನುಳಿದ ಗಣ್ಯರು ಉಪಸ್ಥಿತರಿದ್ಧರು.
ನಂತರ ಉಪಸ್ಥಿತ ಗಣ್ಯರು ಮತ್ತು ವಿದ್ಯಾರ್ಥಿಗಳು ಮತದಾನಕ್ಕಿಂತ ಇನ್ನೊಂದಿಲ್ಲ. ನಾನು ಖಚಿತವಾಗಿ ಮತದಾನ ಮಾಡುವೆ ಎಂದು ಪ್ರಮಾಣವಚನ ಮಾಡಿದರು. (ಫ್ಲೋ)
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರು ಮತದಾನ ಕೇವಲ ಹಕ್ಕಲ್ಲ. ಇದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಪ್ರತಿಯೊಬ್ಬರಿಗೂ ತಮ್ಮ ಜನಪ್ರತಿನಿಧಿಗಳನ್ನು ಆರಿಸುವ ಅಧಿಕಾರವಿದೆ.
ಕೆಲಸ ಮಾಡುವ ಕೈಗಳಿಗೆ ಅಧಿಕಾರ ನೀಡುವ ನಿರ್ಧಾರವನ್ನು ಮಾಡಬೇಕು. ಪ್ರಜೆಗಳ ಒಂದು ವೋಟು ಬದಲಿಸಬಲ್ಲದು ದೇಶದ ದಿಶೆಯನ್ನು ಎಂದು ಶಾಯರಿ ಮೂಲಕ ಮಾಹಿತಿಯನ್ನು ನೀಡಿದರು.
ಮತದಾನದ ಮಹತ್ವವನ್ನು ಅರಿಯಿರಿ. ಇದು ನಿಮ್ಮ ಶಕ್ತಿಯಾಗಿದೆ. ಪ್ರಜಾಪ್ರಭುತ್ವದ ಪ್ರಣತೆಯ ಬೆಳಕು ಪ್ರಜೆಗಳಾಗಿದ್ದೀರಿ. ಪ್ರತಿಯೊಂದು ಮತವು ಬದಲಿಸಲಿದೆ ದೇಶದ ಪ್ರತಿಯೊಂದು ಬಣ್ಣವನ್ನು ಬದಲಿಸಬಹುದು. ಪ್ರಜೆಗಳ ಗೆಲುವೆ ಪ್ರಜಾಪ್ರಭುತ್ವದ ಗೆಲುವು. ಯುವಶಕ್ತಿಯೇ ದೇಶದ ಶಕ್ತಿ. ಕೇವಲ ವಾಟ್ಸಪ್ ಯುನಿವರ್ಸಿಟಿಯ ಮೇಲೆಯೇ ವಿಶ್ವಾಸವಿಡುವ ಬದಲೂ ಸಂಶೋಧನೆಯತ್ತ ಮುಖ ಮಾಡಬೇಕು ಎಂದರು
Laxmi News 24×7