ಬಿಜೆಪಿಗರಿಗೆ ಸುಳ್ಳು ಆರೋಪ ಮಾಡುವುದೇ ರೂಢಿಯಾಗಿ ಬಿಟ್ಟಿದೆ…ಅವರೇ ಅಪರಾಧ ಮಾಡಿ ಅವರೇ ದೂರು ನೀಡುತ್ತಾರೆ- ಸಚಿವ ಈಶ್ವರ ಖಂಡ್ರೆ
ಬಿಜೆಪಿಗರಿಗೆ ಸುಳ್ಳು ಆರೋಪ ಮಾಡುವುದೇ ರೂಢಿಯಾಗಿ ಬಿಟ್ಟಿದೆಅವರೇ ಅಪರಾಧ ಮಾಡಿ ಅವರೇ ದೂರು ನೀಡುತ್ತಾರೆಸುಳ್ಳನ್ನು ಸತ್ಯವಾಗಿ ಬಿಂಬಿಸುತ್ತಾರೆ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆ
ಬಿಜೆಪಿಗರಿಗೆ ಸುಳ್ಳು ಆರೋಪ ಮಾಡಿ ರೂಢಿಯಾಗಿ ಬಿಟ್ಟಿದೆ. ಸುಳ್ಳನ್ನು ಸತ್ಯವಾಗಿ ಬಿಂಬಿಸುತ್ತಾರೆ. ಅವರೇ ಅಪರಾಧ ಮಾಡಿ ಅವರೇ ದೂರು ನೀಡುತ್ತಾರೆ. ಅವರೇ ತನಿಖೆ ಮಾಡಿದಂತೆ ಮಾಡಿ ಅವರೇ ತಿರ್ಮಾನ ಮಾಡುತ್ತಾರೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಮುನಿರತ್ನ ಅವರ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಾಂಬ್ರಾ ವಿಮಾನ ನಿಲ್ದಾಣದ ಬಳಿ ಮಾಧ್ಯಮಗಾರರೊಂದಿಗೆ ಅವರು ಮಾತನಾಡಿದರು. ಡಿಸಿಎಂ ಡಿ.ಕೆ. ಶಿವಕುಮಾರ ಮತ್ತು ಡಿ.ಕೆ. ಸುರೇಶ್ ಕೈವಾಡವಿದೆ ಎಂಬ ಬಿಜೆಪಿಗರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಬಿಜೆಪಿಗರಿಗೆ ಸುಳ್ಳು ಆರೋಪ ಮಾಡಿ ರೂಢಿಯಾಗಿ ಬಿಟ್ಟಿದೆ. ಸುಳ್ಳನ್ನು ಸತ್ಯವಾಗಿ ಬಿಂಬಿಸುತ್ತಾರೆ.
ಅವರೇ ಅಪರಾಧ ಮಾಡಿ ಅವರೇ ದೂರು ನೀಡುತ್ತಾರೆ. ಅವರೇ ತನಿಖೆ ಮಾಡಿದಂತೆ ಮಾಡಿ ಅವರೇ ತಿರ್ಮಾನ ಮಾಡುತ್ತಾರೆ ಎಂದರು. ಕಾಂಗ್ರೆಸ್ ಕಾನೂನಿಗೆ ಬೆಲೆ ಕೊಡುತ್ತದೆ. ಕಾನೂನನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದರು.