ಅಶೋಕ್ ವೃತ್ತದಿಂದ ಮಹಾಂತೇಶ್ ನಗರದ ಬ್ರಿಜ್ ವರೆಗೆ ಕೈಗೊಂಡ ರಸ್ತೆ ಅಭಿವೃದ್ಧಿ
ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಚಾಲನೆ
ಅಶೋಕ್ ವೃತ್ತದಿಂದ ಮಹಾಂತೇಶ್ ನಗರದ ಬ್ರಿಜ್ ವರೆಗೆ ಕೈಗೊಂಡ ರಸ್ತೆ ಅಭಿವೃದ್ಧಿ
ಶಾಸಕ ಆಸೀಫ್ ಸೇಠ್ ಚಾಲನೆ
81.62 ಲಕ್ಷ ವಿಶೇಷ ಅನುದಾನದಲ್ಲಿ ಕಾಮಗಾರಿ
2-3 ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಉದ್ಧೇಶ
ಬೆಳಗಾವಿ ನಗರದ ಭೂಯಿಕೋಟ್ ಕಿಲ್ಲಾ ಬಳಿಯಿರುವ ಸಾಮ್ರಾಟ್ ಅಶೋಕ್ ವೃತ್ತದಿಂದ ಮಹಾಂತೇಶ್ ನಗರದ ಬ್ರಿಜ್ ವರೆಗೆ ಕೈಗೊಂಡ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಆಸೀಫ್ ಸೇಠ್ ಚಾಲನೆಯನ್ನು ನೀಡಿದರು.
ಬೆಳಗಾವಿಯ ಭೂಯಿಕೋಟ್ ಕಿಲ್ಲಾ ಬಳಿಯಿರುವ ಸಾಮ್ರಾಟ್ ಅಶೋಕ್ ವೃತ್ತದಿಂದ ಮಹಾಂತೇಶ್ ನಗರದ ಬ್ರಿಜ್ ವರೆಗೆ ಎರಡು ಬದಿಯ ರಸ್ತೆಯನ್ನು ನಿರ್ಮಿಸಲು ಚಾಲನೆಯನ್ನು ನೀಡಲಾಗಿತು. ವಿಶೇಷ ಅನುದಾನ 81.62 ಲಕ್ಷ ಅನುದಾನದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ವಿಶೇಷ ಅನುದಾನವನ್ನು ಮಂಜೂರು ಮಾಡಿದ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಶಾಸಕ ಆಸೀಫ್ ಸೇಠ್ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ವೇಳೆ ನಗರಸೇವಕರು, ಅಧಿಕಾರಿಗಳು ಇನ್ನುಳಿದವರು ಉಪಸ್ಥಿತರಿದ್ದರು.