Breaking News

ತುರ್ತು ಸೇವೆಗಷ್ಟೇ ಮರಳಿರುವ ಕೋಲ್ಕತ್ತಾ ಕಿರಿಯ ವೈದ್ಯರು; OPDಗೆ ಬರದೆ ಪ್ರತಿಭಟನೆ ಮುಂದುವರಿಕೆ

Spread the love

ಕೋಲ್ಕತ್ತಾ: ಪ್ರತಿಭಟನಾ ನಿರಿತ ಕಿರಿಯ ವೈದ್ಯರು 42 ದಿನಗಳ ಬಳಿಕ ಕರ್ತವ್ಯಕ್ಕೆ ಮರಳಲು ಒಪ್ಪಿದ್ದಾರೆ, ಆದರೆ ಪೂರ್ತಿಯಾಗಿ ಅಲ್ಲ. ತುರ್ತು ಸೇವೆಗಷ್ಟೇ ಮರಳಲಿರುವ ವೈದ್ಯರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಿಲ್ಲ. ತಮ್ಮ ಧರಣಿಯ ಭಾಗವಾಗಿ ಸರ್ಕಾರಿ ಆಸ್ಪತ್ರೆಗಳಾದ್ಯಂತ ಹೊರರೋಗಿ ವಿಭಾಗಗಳಿಗೆ (OPD) ತಮ್ಮ ಸೇವೆಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ.Kolkata: ತುರ್ತು ಸೇವೆಗಷ್ಟೇ ಮರಳಿರುವ ಕೋಲ್ಕತ್ತಾ ಕಿರಿಯ ವೈದ್ಯರು; OPDಗೆ ಬರದೆ ಪ್ರತಿಭಟನೆ ಮುಂದುವರಿಕೆ

ಆಗಸ್ಟ್‌ನಲ್ಲಿ ತಮ್ಮ ಸಹೋದ್ಯೋಗಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿ ತಮ್ಮ ಧರಣಿಯನ್ನು ಮುಂದುವರೆಸಲಿದ್ದಾರೆ.

ಪಶ್ಚಿಮ ಬಂಗಾಳದ ಜೂನಿಯರ್ ಡಾಕ್ಟರ್ಸ್ ಫ್ರಂಟ್ ಸದಸ್ಯರು ಕೋಲ್ಕತ್ತಾದ ಸ್ವಾಸ್ಥ್ಯ ಭವನದ ಹೊರಗಿನ ಸ್ಥಳದಿಂದ ತಮ್ಮ ಧರಣಿಯನ್ನು ಹಿಂಪಡೆಯುವುದಾಗಿ ಮತ್ತು ಕೋಲ್ಕತ್ತಾದ ಕೇಂದ್ರೀಯ ತನಿಖಾ ದಳ (ಸಿಬಿಐ) ಕಚೇರಿಗೆ ರ್ಯಾಲಿ ನಡೆಸುವುದಾಗಿ ಹೇಳಿದ್ದಾರೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ