ಅಕ್ರಮ ಭ್ರೂಣಹತ್ಯೆ ಪ್ರಕರಣ: ಮೂವರ ಬಂಧನ, ಏಳು ಜನರ ವಿರುದ್ಧ ಪ್ರಕರಣ ದಾಖಲು
ಮಹಾಲಿಂಗಪುರ: ಮನೆಯಲ್ಲಿಯೇ ಅಕ್ರಮವಾಗಿ ಭ್ರೂಣಹತ್ಯೆ ಮಾಡುತ್ತಿದ್ದ ಮಹಾಲಿಂಗಪುರದ ಮಹಿಳೆ ಹಾಗೂ ಭ್ರೂಣಹತ್ಯೆ ಪ್ರಕರಣದಲ್ಲಿ ಭಾಗಿಯಾದ ಮಹಾರಾಷ್ಟ್ರದ ಇಬ್ಬರು ಸೇರಿದಂತೆ ಮೂವರನ್ನು ಬುಧವಾರ ಮಹಾಲಿಂಗಪುರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮಹಾಲಿಂಗಪುರ ಪಟ್ಟಣದ ಜಯಲಕ್ಷ್ಮೀ ನಗರದ ಕವಿತಾ ಬಾಡನವರ, ಮಹಾರಾಷ್ಟçದ ಸಾಂಗಲಿ ಜಿಲ್ಲೆಯ ದೂದ್ಗಾಂವದ ವಿಜಯ ಸಂಜಯ ಗೌಳಿ ಕುಪ್ಪವಾಡದ ಡಾ.ಮಾರುತಿ ಬಾಬಸೋ ಖರಾತ ಬಂತ ಆರೋಪಿಗಳು.
ಘಟನೆ ವಿವಿರ:
ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಸಂಜಯ ಗೌಳಿ, ಸಂಗೀತಾ ಗೌಳಿ, ವಿಜಯ ಗೌಳಿ, ಡಾ.ಮಾರುತಿ ಖರಾತ, ಅಥಣಿಯ ರಾಮಾನಂದ ನಗರದ ಡಾ.ಕೊತ್ವಾಲೆ, ಮಹಾಲಿಂಗಪುರದ ಕವಿತಾ ಬಾಡನವರ, ಒಬ್ಬ ಸೋನೋಗ್ರಾಫರ್ ಸೇರಿದಂತೆ ಏಳು ಜನರ ವಿರುದ್ದ ಮಹಾರಾಷ್ಟ್ರದ ಸಾಂಗಲಿ ಹಾಗೂ ಮಹಾಲಿಂಗಪುರದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಾದ ಏಳು ಜನರು ಸಹಕಾರದಿಂದ ಮಹಾಲಿಂಗಪುರದ ಕವಿತಾ ಬಾಡನವರ ಮನೆಯಲ್ಲಿ ಮೇ.26 ರ ರಾತ್ರಿ 11ಕ್ಕೆ ಮಹಾರಾಷ್ಟ್ರ ಮೂಲದ ಮಹಿಳೆ ಸೋನಾಲಿ ಸಚಿನ ಕದಂ ಎಂಬ ಮಹಿಳೆಯ ಗರ್ಭಪಾತ ಮಾಡಿದ್ದಾರೆ. ಈ ಮಹಿಳೆಗೆ ಮೊದಲೆರಡು ಹೆಣ್ಣು ಮಕ್ಕಳಿದ್ದು, 3ನೇ ಮಗು ಹೆಣ್ಣು ಎಂದು ಸಾಂಗಲಿಯಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ ಗೋತ್ತಾಗಿ ಮಹಾಲಿಂಗಪುರದ ಕವಿತಾ ಬಾಡನವರ ಬಳಿ ಬಂದಿದ್ದಾರೆ.
ಗರ್ಭಪಾತ ಮಾಡಿದ ಒಂದು ಗಂಟೆಯಲ್ಲಿ ಮಹಿಳೆಯು ತೀವೃರಕ್ತಸ್ರಾವವಾಗಿ ಮೃತಪಟ್ಟಿದ್ದಾಳೆ. ಮರಳಿ ಸಾಂಗಲಿಗೆ ಹೋಗುವಾಗ ಗಡಿಚೆಕ್ಪೋಸ್ಟ್ನಲ್ಲಿ ಮಹಾರಾಷ್ಟ್ರ ದ ಸಾಂಗಲಿ ಪೊಲೀಸರಿಗೆ ಸಿಕ್ಕಿದ್ದರಿಂದ, ಸಾಂಗಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆಗೆ ವರ್ಗಾವಣೆ :
ಬುಧವಾರ ಸಾಂಗಲಿ ಪೊಲೀಸರು ಬಾಗಲಕೋಟೆಯ ಎಸ್ಪಿ ಆಫೀಸಗೆ ತೆರಳಿ ಭ್ರೂಣಹತ್ಯೆ ಪ್ರಕರಣ ಮಾಹಿತಿ ನೀಡಿದ್ದಾರೆ. ಎಸ್ಪಿ ಅವರು ನೀಡಿದ ಮಾಹಿತಿಯಂತೆ ಸ್ಥಳೀಯ ಠಾಣಾಧಿಕಾರಿ ಪ್ರವೀಣ ಬೀಳಗಿ ಹಾಗೂ ಪೊಲೀಸರು ಪಟ್ಟಣದ ಕವಿತಾ ಬಾಡನವರ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರು.