ಧಾರವಾಡ, ಮೇ 14: ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟು, ಈ ಬಾರಿಯ ಸುಡು ಬೇಸಿಗೆಯ ಪರಿಣಾಮ ನಿರೀಕ್ಷೆ ಮಾಡಿದಷ್ಟು ಮಾವಿನ ಬೆಳೆ ಬಂದಿಲ್ಲ. ಮಾರುಕಟ್ಟೆಯಲ್ಲಿ ಸದ್ದು ಮಾಡಬೇಕಿದ್ದ ಹಣ್ಣುಗಳ ರಾಜ ಅಷ್ಟಾಗಿ ಕಂಡುಬರುತ್ತಿಲ್ಲ.
ವಿವಿಧ ಬಗೆಯ ಮಾವಿನ ಹಣ್ಣು ಸವಿಯುವ ಉತ್ಸಾಹದಲ್ಲಿರುವ ಜನರಿಗೆ ಸಿಹಿಸುದ್ದಿಯೊಂದಿದೆ.ಧಾರವಾಡ ಜಿಲ್ಲೆಯಲ್ಲಿ 3 ದಿನಗಳ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜನೆ ಮಾಡಲಾಗಿದೆ. ರೈತರಿಂದ ನೇರವಾಗಿ ಗ್ರಾಹಕರಿಗೆ ಮಾವು ತಲುಪಲಿದೆ.