Breaking News

ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Spread the love

ಸೋಷಿಯಲ್‌ ಮೀಡಿಯಾ ಕುರಿತು ಹಲವು ನಟ-ನಟಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಮಾತುಗಳನ್ನು ತಿರುಚುವ, ಥಂಬ್‌ನೈಲ್‌ ಮೂಲಕ ಅವಹೇಳನ ಮಾಡುವುದನ್ನು ವಿರೋಧಿಸಿದ್ದಾರೆ. ಈಗ ನಟ ಶಿವರಾಜಕುಮಾರ್‌ ಸಹ ಸೋಷಿಯಲ್‌ ಮೀಡಿಯಾ ವಿರುದ್ಧ ಕಿಡಿಕಾರಿದ್ದಾರೆ.

ಶನಿವಾರ ಬೆಳಿಗ್ಗೆ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನಡೆದ “ಫಾದರ್‌’ ಚಿತ್ರದ ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮೀಡಿಯಾ ಎನ್ನುವುದು ಆಟ ಸಾಮಾನು ಆಗಿಬಿಟ್ಟಿದೆ.

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

ನಾವಿದ್ದ ಕಾಲ ಬಹಳ ಚೆನ್ನಾಗಿತ್ತು. ನಾವು ನಿಜಕ್ಕೂ ಪುಣ್ಯ ಮಾಡಿದ್ದೆವು. ಸೋಷಿಯಲ್‌ ಮೀಡಿಯಾದವರು ದಯವಿಟ್ಟು ಒಳ್ಳೆಯದು ಮಾಡೋಕೆ ನೋಡಿ. ಕೆಟ್ಟದ್ದು ಮಾಡಬೇಡಿ’ ಎಂದು ಕಿವಿಮಾತು ಹೇಳಿದರು.

ಸೋಷಿಯಲ್‌ ಮೀಡಿಯಾದಿಂದ ತಮ್ಮ ಹಾಗೂ ನಿರ್ಮಾಪಕ- ನಿರ್ದೇಶಕ ಆರ್‌. ಚಂದ್ರು ಅವರ ಸಂಬಂಧ ಹಾಳಾಗುವುದಿಲ್ಲ ಎಂದ ಅವರು, “ನೀವೇನೇ ಮಾಡಿದರೂ, ನಮ್ಮ ಸಂಬಂಧ ಹಾಳಾಗಲ್ಲ. ನನ್ನ ಮತ್ತು ಚಂದ್ರು ಅವರ ಬಾಂಧವ್ಯ ಯಾವಾಗಲೂ ಚೆನ್ನಾಗಿರುತ್ತದೆ. ನಾನೇನೇ ಇದ್ದರೂ ನೇರವಾಗಿ ಚಂದ್ರು ಅವರನ್ನು ಕೇಳುತ್ತೇನೆ. ಪತ್ರಿಕೋದ್ಯೋಮದ ನೈತಿಕತೆಯನ್ನು ಕೆಡಿಸುವ ಕೆಲಸ ಸೋಷಿಯಲ್‌ ಮೀಡಿಯಾ ಮಾಡುತ್ತಿದೆ. ಇಷ್ಟ ಬಂದ ಹಾಗೆ ಏನು ಬೇಕಾದರೂ ಹಾಕಿಕೊಳ್ಳಬಹುದು ಎನ್ನುವುದು ತಪ್ಪು. ನಿಮಗೆ ತಮಾಷೆ ಎನಿಸಬಹುದು. ನಿಮ್ಮನೆ ಒಲೆ ಉರಿಯೋಕೆ ಇನ್ನೊಬ್ಬರ ಮನೆಯ ಒಲೆ ಆರಿಸುವ ಕೆಲಸ ಮಾಡಬೇಡಿ. ಅದು ನಿಮಗೈ ಅಪಾಯ ಆಗುತ್ತದೆ’ ಎಂದು ಶಿವರಾಜಕುಮಾರ್‌ ಈ ಸಂದರ್ಭದಲ್ಲಿ ಹೇಳಿದರು.


Spread the love

About Laxminews 24x7

Check Also

ತಂದೆಗೆ ಲಿವರ್ ದಾನ ಮಾಡಿ ಮಹಾದಾನಿ ಆದ ಮಗ

Spread the loveಬೆಳಗಾವಿ: ಲಿವರ್ ಸಂಪೂರ್ಣವಾಗಿ ನಿಷ್ಕ್ರೀಯವಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ರೋಗಿಗೆ ಯಶಸ್ವಿ ಲಿವರ್ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಜೀವವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ