Breaking News

ಕಿಚ್ಚನ ಕೊನೆಯ ಪಂಚಾಯಿತಿಯಲ್ಲಿ ಯಾರಿಗೆ ಗೇಟ್ ಪಾಸ್?

Spread the love

ಬಿಗ್ ಬಾಸ್ ಸೀಸನ್ 10 ಹಲವು ವಿಷಯಗಳಿಂದ ನೋಡುಗರ ಮನ ಸೆಳೆದಿತ್ತು. ಹುಲಿ ಉಗುರು ಪ್ರಕರಣದಲ್ಲಿ ಮೊದಲಿಗೆ ವರ್ತೂರು ಸಂತೋಷ್ ಜೈಲಿಗೆ ಹೋಗಿ ಬಂದರು. ನಂತರ ಸ್ಪರ್ಧಿಗಳು ವರ್ತೂರು ವಿರುದ್ಧ ನಿಂತುಕೊಂಡು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಬೇಕು ಎಂದರು. ಆದರೆ ಅವರ ಅಭಿಮಾನಿಗಳು, ಅವರ ತಾಯಿ ಸೇರಿಕೊಂಡು ವರ್ತೂರು ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಲ್ಲಿ ಉಳಿಸಿಕೊಂಡಿದ್ದಾರೆ..

 

ಇನ್ನು ವಿನಯ್ ತಮ್ಮ ಅಗ್ರೆಸ್ಸಿವ್ ಆಟವಾಡಿಕೊಂಡು ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಆದರೆ ಅವರ ಮೇಲೆ ಕೆಲವು ವೀಕ್ಷಕರಿಗೆ ಒಳ್ಳೆಯ ಅಭಿಪ್ರಾಯವಿದ್ದರೆ ಇನ್ನೂ ಕೆಲವರಿಗೆ ಕೆಟ್ಟ ಅಭಿಪ್ರಾಯವಿದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಆದವರಲ್ಲಿ ವಿನಯ್ ಕೂಡ ಒಬ್ಬರು ಅದ್ಯಾಕೋ ಕಾಣೆ ವಿನಯ್ ನಸೀಬೆ ಸರಿ ಇಲ್ಲ ಎಂದು ಕಾಣಿಸುತ್ತದೆ. ಪ್ರತಿ ವಾರವು ಕೂಡ ವಿನಯ್ ನ್ಯಾಮಿನೇಷನ್ ಲಿಸ್ಟ್‌ನಲ್ಲಿ ಇರುತ್ತಾರೆ. ಸದ್ಯಕ್ಕೆ ಸೆಮಿಫೈನಲ್ ಗೆ ಹತ್ತಿರದಲ್ಲಿದ್ದು ವಿನಯ್‌ಗೆ ತಾನು ಟಾಪ್ ಫೈವ್ ಕಂಟೆಸ್ಟೆಂಟ್ಗಳಲ್ಲಿ ಒಬ್ಬರಾಗಿ ಇರುತ್ತೇನೆ ಎಂಬ ಆತ್ಮವಿಶ್ವಾಸ ಇದೆ.

ಸೆಮಿ ಫೈನಲ್‌ಗೆ ಇನ್ನೊಂದು ಮೆಟ್ಟಿಲು ಹತ್ತಿರದಲ್ಲಿದ್ದು ಇದು ಕಿಚ್ಚನ ಕೊನೆಯ ಪಂಚಾಯಿತಿಯಾಗಿದೆ. ಈ ಪಂಚಾಯಿತಿಯಲ್ಲಿ ಯಾರಿಗೆ ದೊಡ್ಮನೆಯಿಂದ ಗೇಟ್ ಪಾಸ್ ಸಿಗಲಿದೆ ಎಂಬುದೇ ಕುತೂಹಲ. ಯಾಕೆಂದರೆ ತನಿಷಾಗಿಂತ ಮೊದಲು ನಮ್ರತಾ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಗೆ ಬರುತ್ತಾರೆ ಎಂಬವುದು ಕೆಲವರ ಅಭಿಪ್ರಾಯವಾಗಿತ್ತು. ಆದರೆ ಯಾರೂ ಊಹಿಸಿರದ ರೀತಿಯಲ್ಲಿ ತನಿಶಾ ಅವರು ವಾರದ ಮಧ್ಯದಲ್ಲಿಯೇ ಎಲಿಮಿನೇಟ್ ಆಗಿ ದೊಡ್ಮನೆಯಿಂದ ಹೊರಗೆ ಬಂದಿದ್ದಾರೆ. ಈ ವಾರ ಯಾರಪ್ಪ ಮನೆಯಿಂದ ಹೊರಗೆ ಬರ್ತಾರೆ ಎಂಬ ಕುತೂಹಲ ಸಾಕಾಷ್ಟು ಕೆರಳಿಸಿದೆ.


Spread the love

About Laxminews 24x7

Check Also

ಹಾಲಿ ಶಿಕ್ಷಕರೂ TET ಬರೆಯಬೇಕೆಂಬ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ: ಮಧು ಬಂಗಾರಪ್ಪ

Spread the loveಶಿವಮೊಗ್ಗ: “ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ತರಲು ನಿವೃತ್ತಿ ಅಂಚಿನಲ್ಲಿರುವವರನ್ನು ಹೊರತುಪಡಿಸಿ, ಉಳಿದೆಲ್ಲ ಶಿಕ್ಷಕರು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ