ವಿಜಯಪುರ : ಕೋವಿಡ್ ಮೊದಲ ಅಲೆಯ(Covid first wave) ಸಂದರ್ಭದಲ್ಲಿ ಬಿಎಸ್ವೈ(B S Yediyurappa) ಸರ್ಕಾರದ ಅವಧಿಯಲ್ಲಿ ಭಾರಿ ಅವ್ಯವಹಾರ ನಡೆದಿತ್ತು ಈ ಬಗ್ಗೆ ಮಾಜಿ ಸಿಎಂ ಬಿಎಸ್ವೈ ಅವರಿಗೆ ಮಾಹಿತಿ ನೀಡಿದ್ದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊರೊನಾ ಸಮಯದಲ್ಲಿ 45 ರೂ ಮಾಸ್ಕ್ಗೆ 485 ರೂ ನಿಗದಿಪಡಿಸಲಾಗಿತ್ತು . ಕೊರೊನಾ ರೋಗಿ ಹೆಸರಲ್ಲಿ 8-10 ಲಕ್ಷ ರೂಪಾಯಿ ಬಿಲ್ ಮಾಡದ್ದಾರೆ. ಬೆಂಗಳೂರಿನಲ್ಲಿ 10 ಸಾವಿರ ಬೆಡ್ ಸಿದ್ದಪಡಿಸಲಾಗಿತ್ತು , 10 ಸಾವಿರ ಬೆಡ್ ಬಾಡಿಗೆ ಪಡೆದಿದ್ದರು , ಆ ಹಣದಲ್ಲಿ ಬೆಡ್ಗಳನ್ನು ಖರೀದಿಸಬಹುದಿತ್ತು . ನನಗೆ ಕೋವಿಡ್ ಪಾಸಿಟ್ ಬಂದಾಗ ಮಣಿಪಾಲ್ ಆಸ್ಪತ್ರೆಯಲ್ಲಿ 5 ಲಕ್ಷ 8 ಸಾವಿರ ರೂ ಬಿಲ್ ಮಾಡಿದ್ದರು ಬಡವರು ಇಷ್ಟೊಂದು ಹಣವನ್ನು ಎಲ್ಲಿಂದ ಕೊಡಬೇಕು? ಈ ಬಗ್ಗೆ ವಿಧಾನಸೌಧದಲ್ಲಿ ಬಿಎಸ್ವೈ ಅವರಿಗೆ ತಿಳಿಸಿದ್ದೆ. ನಮ್ಮದೇ ಸರ್ಕಾರವಿದ್ದರೂ ಕಳ್ಳರು ಕಳ್ಳರೇ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.