Breaking News

ಖಾನಾಪುರ: ಸುವರ್ಣ ಮಹೋತ್ಸವ ಇಂದಿನಿಂದ

Spread the love

ಖಾನಾಪುರ: ತಾಲ್ಲೂಕಿನ ಗಾಡಿಕೊಪ್ಪ ಗ್ರಾಮದ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುರಾಯರ ಬೃಂದಾವನ ಪ್ರತಿಷ್ಠಾಪನೆ ಸುವರ್ಣ ಮಹೋತ್ಸವ ಆಚರಣೆಗೆ ಅಂಗವಾಗಿ ಫೆ.5 ರಿಂದ 11ರವರೆಗೆ ವಿವಿಧ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಲಾಗಿದೆ ಎಂದು ಮಠದ ಅರ್ಚಕ ಅಚ್ಯುತ ಪಾಟೀಲ ತಿಳಿಸಿದ್ದಾರೆ.

 

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಫೆ.5ರಂದು ನವಗ್ರಹ ಹೋಮ, ಅಷ್ಟೋತ್ತರ ಪಾರಾಯಣ, ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ಮತ್ತು ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ವಿಶೇಷ ಉಪನ್ಯಾಸ,
ಸಂಗೀತ ಸೇವೆ, ಭಜನೆ ನಡೆಯಲಿವೆ.

6ರಂದು ಗಣಹೋಮ, 7ರಂದು ಭಾಗವತ ಹೋಮ ಹಾಗೂ 8ರಂದು ಪವಮಾನ ಹೋಮ, 9ರಂದು ರಾಘವೇಂದ್ರ ಅಷ್ಟಾಕ್ಷರ ಹೋಮ, 10ರಂದು ಮನ್ಯುಸೂಕ್ತ ಹೋಮ, 11ರಂದು ತತ್ವಹೋಮಗಳು ನಡೆಯಲಿವೆ.

ನಿತ್ಯ ಮಠದ ಆವರಣದಲ್ಲಿ ಅಷ್ಟೋತ್ತರ ಪಾರಾಯಣ, ಅಭಿಷೇಕ, ತೀರ್ಥಪ್ರಸಾದ, ಸಂಗೀತ ಸೇವೆ, ಪಂಡಿತರಿಂದ ಉಪನ್ಯಾಸಗಳು ನೆರವೇರಲಿವೆ.

ಫೆ.11ರಂದು ಮಹಾಸಂಸ್ಥಾನ ಕೂಡ್ಲಿ ಅಕ್ಷೊಭ್ಯ ಮಠಾಧೀಶ ರಘುವಿಜಯತೀರ್ಥ ಶ್ರೀಪಾಂದಗಳವರು ಬೃಂದಾವನಕ್ಕೆ 108 ಕಳಶಗಳ ವಿಶೇಷಅಭಿಷೇಕ, ವೈಕುಂಠ ರಾಮದೇವರ ಪೂಜೆ ನೆರವೇರಿಸಲಿದ್ದಾರೆ.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ