Breaking News

ಸುವರ್ಣ ವಿಧಾನಸೌಧ ಹತ್ತಿರ ಪ್ರತಿಭಟನ ಸ್ಥಳದಲ್ಲಿ ಎಸೆದಿದ್ದ ಆಹಾರ ತಿಂದು 10 ಕುರಿಗಳು ಮೃತಪಟ್ಟಿವೆ.

Spread the love

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧ ಹತ್ತಿರ ಪ್ರತಿಭಟನ ಸ್ಥಳದಲ್ಲಿ ಎಸೆದಿದ್ದ ಆಹಾರ ತಿಂದು 10 ಕುರಿಗಳು ಮೃತಪಟ್ಟಿವೆ. 40ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿವೆ.

‘ಡಿ.22ರಂದು ಇಲ್ಲಿ ನಡೆದಿದ್ದ ವಿರಾಟ್‌ ಪಂಚಶಕ್ತಿ ಸಮಾವೇಶದ ಸ್ಥಳದಲ್ಲಿಯೇ ಉಳಿದಿದ್ದ ಆಹಾರ ಎಸೆಯಲಾಗಿತ್ತು.

ಭಾನುವಾರ ಸಂಜೆ ಇದನ್ನೇ ಕುರಿಗಳು ತಿಂದಿದ್ದವು. ಸೋಮವಾರ ಬೆಳಗಿನವರೆಗೆ ನರಳಾಡಿ ಸತ್ತಿವೆ’ ಎಂದು ಕುರಿಗಾಹಿಗಳು ದೂರಿದ್ದಾರೆ.

‘ಆಹಾರವನ್ನು ಮೂರು ದಿನದ ಬಳಿಕ ಕುರಿಗಳು ತಿಂದಿದ್ದು, ಜೀರ್ಣವಾಗದೆ ಮೃತಪಟ್ಟಿವೆ. ಇದಕ್ಕೆ ‘ರುಮಿನಲ್ ಅಸಿಡೋಸಿಸ್‌’ ಎನ್ನುತ್ತೇವೆ. ಮರಣೋತ್ತರ ಪರೀಕ್ಷೆ ನಡೆದಿದೆ. ಪಶು ವೈದ್ಯರು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಆಂಬುಲೆನ್ಸ್‌ ಕೂಡಾ ವ್ಯವಸ್ಥೆ ಮಾಡಲಾಗಿದೆ. ಕುರಿಗಳ ಆರೋಗ್ಯದ ಮೇಲೆ ಮೂರು ದಿನ ನಿಗಾ ಇರಿಸಲಾಗುವುದು’


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ