Breaking News

ಗೋಕಾಕ: ಇಲ್ಲಿನಸ್ಪಂದನಾ ಮೈಕ್ರೋ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬ 2 ಲಕ್ಷ ಹಣ ದೋಚಿಕೊಂಡುಪರಾರಿ

Spread the love

ಗೋಕಾಕ: ಇಲ್ಲಿನ ಸ್ಪಂದನಾ ಮೈಕ್ರೋ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬ 2 ಲಕ್ಷ ಹಣ ದೋಚಿಕೊಂಡು ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸ್ಪಂದನಾ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ರಾಮದುರ್ಗ ಮೂಲದ ಪಕೀರಪ್ಪಾ ಕುರಿ, ಹಣದೊಂದಿಗೆ ಪರಾರಿಯಾದ ಆರೋಪಿ.
ಕೊಣ್ಣೂರಲ್ಲಿನ  ಇಪ್ಪತೈದು ಗ್ರಾಹಕರಿಂದ  ತಿಂಗಳಿಗೊಮ್ಮೆ ತುಂಬುವ ಹಣವನ್ನು ಎಗಿಸಿದ್ದಾನೆ.

ಫೈನಾನ್ಸ್ ನಿಂದ ಸಾಲ ಪಡೆದ ಗ್ರಾಹಕರು ಪ್ರತಿ ತಿಂಗಳು ಕಚೇರಿಗೆ ಬಂದು ಹಣ ಪಾವತಿಸುತ್ತಿದ್ದರು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಯಾರು ಕಚೇರಿಯತ್ತ ಬರಬೇಡಿ.  ಹಣ ನನ್ನ ಬಳಿ ನೀಡುವಂತೆ ಮ್ಯಾನೇಜರ್ ಕಳುಹಿಸಿದ್ದಾರೆ ಅಂತಾ ನಂಬಿಸಿ  ಸುಮಾರು 2 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿದ್ದಾನೆ.

ಇನ್ನೊಬ್ಬರ ಹೆಸರಿನ ಮೇಲೆ ಲೋನ ತೆಗೆದುಕೊಂಡಿದ್ದಲ್ಲದೆ ಹಲವಾರು ಜನರಿಗೆ ಹಣ ತುಂಬಲು ಪಿಡಿಸಿದ್ದಾನೆಂದು ಸ್ವತಃ ಸ್ಪಂದನಾ ಮೈಕ್ರೋ ಪೈನಾನ್ಸ್ ನ ಸಿಬ್ಬಂದಿಗಳ ಆರೋಪವಾಗಿದೆ.

ಈ ಸಂಬಂಧ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ