Breaking News

ಲೋಕಾಯುಕ್ತ ಪೊಲೀಸರ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಿಡಿಓಗಳು.

Spread the love

ಬಾಗಲಕೋಟೆ: ಪಿಡಿಒಗಳು ಲಂಚಸ್ವೀಕರಿಸುತ್ತಿದ್ದಾಗ ತಾಲೂಕಿನ ರಾಂಪುರ ಹಾಗೂ ಬೇವಿನಮಟ್ಟಿ ಗ್ರಾಮ ಪಂಚಾಯ್ತಿಗಳಲ್ಲಿ ಲೋಕಾಯುಕ್ತರ ಬಲೆ ಬಿದ್ದಿದ್ದಾರೆ. ಬೇವಿನಮಟ್ಟಿ ಪಿಡಿಒ ಚಂದ್ರಕಾಂತ್ ತಿಮ್ಮಾಪುರ ಮತ್ತು ರಾಂಪುರ ಪಿಡಿಒ ಮುದಕಪ್ಪ ತೇಜಿ ಎಂಬುವವರ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.

 

ಪಿಡಿಓಗಳು ಎನ್.ಎ ಪ್ಲಾಟ್ ಎಂಟ್ರಿ ಮಾಡಿಕೊಡಲು ಎರಡೂವರೆ ಲಕ್ಷ ಲಂಚ ಕೇಳಿದ್ದರು. ಈ ಇಬ್ಬರು ಪಿಡಿಓಗಳು ಸ್ನೇಹಿತರಾಗಿದ್ದು, ಹೊನ್ನಾಕಟ್ಟಿ ಗ್ರಾಮದ ವಾಸು ಜಾಧವ್ ಎಂಬುವರಿಗೆ 1 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಖಚಿತ ಮಾಹಿತಿ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು‌ ಇವರಿಬ್ಬರಿಗೆ ದಾಳಿ ಮಾಡಿದ್ದಾರೆ. ಲಂಚದ ಮೊತ್ತ ಒಂದು ಲಕ್ಷ ರೂ. ಪಡೆಯುವಾಗ ಲೋಕಾಯುಕ್ತರು ಹಿಡಿದಿದ್ದಾರೆ.

ವಿಜಯಪುರ ಲೋಕಾಯುಕ್ತ ಎಸ್.ಪಿ ಅನಿತಾ ಮಾರ್ಗದರ್ಶನದಲ್ಲಿ, ಬಾಗಲಕೋಟೆ ಲೋಕಾಯುಕ್ತ ಡಿ.ಎಸ್.ಪಿ ಪುಷ್ಪಲತಾ ಹಾಗೂ ಸಿ.ಪಿ.ಐ ಮಲ್ಲಪ್ಪ ಬಿದರಿ ನೇತೃತ್ವದಲ್ಲಿ ದಾಳಿ ನಡೆದಿದೆ. ಇಬ್ಬರೂ ಪಿಡಿಒಗಳನ್ನ ವಶಕ್ಕೆ ಪಡೆದು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ಬೆಮುಲ್ ಗೆ ಬಂದ 13 ಕೋಟಿ ರೂಪಾಯಿ ಲಾಭದಲ್ಲಿ ಹೈನುಗಾರ ರೈತರಿಗೆ ವಿವಿಧ ಸೌಲಭ್ಯಗಳಿಗಾಗಿ 10 ಕೋಟಿ ರೂಪಾಯಿ ಮೀಸಲು- ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the loveಬೆಮುಲ್ ಗೆ ಬಂದ 13 ಕೋಟಿ ರೂಪಾಯಿ ಲಾಭದಲ್ಲಿ ಹೈನುಗಾರ ರೈತರಿಗೆ ವಿವಿಧ ಸೌಲಭ್ಯಗಳಿಗಾಗಿ 10 ಕೋಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ