Breaking News

ಸ್ವಂತ ಖರ್ಚಿನಲ್ಲಿ ‘ರೈತ’ ರನ್ನು ಇಸ್ರೇಲ್ ಪ್ರವಾಸಕ್ಕೆ ಕಳಿಸಲು ಮುಂದಾದ ವಿಧಾನ ಪರಿಷತ್ ಮಾಜಿ ಸದಸ್ಯ.!

Spread the love

ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್ ತಮ್ಮ ಸ್ವಂತ ಖರ್ಚಿನಲ್ಲಿ ಚಿತ್ರದುರ್ಗ ತಾಲೂಕಿನ ಆಯ್ದ 50 ರೈತರಿಗೆ ಇಸ್ರೇಲ್ ಪ್ರವಾಸ ಕಲ್ಪಿಸಲು ಮುಂದಾಗಿದ್ದಾರೆ.

ಒಂದು ವಾರಗಳ ಕಾಲ ‘ಸುವರ್ಣ ರೈತ – ದುರ್ಗಾ ಟು ಇಸ್ರೇಲ್’ ಹೆಸರಿನಡಿ ಈ ಪ್ರವಾಸ ಕಾರ್ಯಕ್ರಮ ನಡೆಯಲಿದ್ದು, ಪಕ್ಷಾತೀತವಾಗಿ ರೈತರನ್ನು ಆಯ್ಕೆ ಮಾಡುವ ಸಲುವಾಗಿ ಏಳು ಜನರಿರುವ ಸಮಿತಿ ರಚಿಸಲಾಗುತ್ತಿದೆ.

 

ಮಹಿಳೆಯರನ್ನೂ ಒಳಗೊಂಡಂತೆ 40 ವರ್ಷದೊಳಗಿನ ಐವತ್ತು ರೈತರನ್ನು ಇಸ್ರೇಲ್ ಗೆ ಕರೆದೊಯ್ಯಲಾಗುತ್ತಿದ್ದು, ಶೇಕಡ 20 ಕೃಷಿ ಭೂಮಿಯಲ್ಲೇ ಅದ್ಭುತ ಪ್ರಗತಿ ಸಾಧಿಸಿರುವ ಇಸ್ರೇಲ್ ಕೃಷಿಕರೊಂದಿಗೆ ಭೇಟಿ ಮಾಡಿ ಮಾಹಿತಿ ವಿನಿಮಯ ಮಾಡಲಾಗುತ್ತದೆ.


Spread the love

About Laxminews 24x7

Check Also

ಧಾರವಾಡ ಹೊಸ ಬಸ್ ನಿಲ್ದಾಣದ ಮೇಲೆ ಲೋಕಾಯುಕ್ತ ರೇಡ್ : ಹಲವು ದಾಖಲೆಗಳ ಪರಿಶೀಲನೆ

Spread the love ಧಾರವಾಡ : ಇಂದು ಲೋಕಾಯುಕ್ತ ಅಧಿಕಾರಿಗಳು ಧಾರವಾಡ ನಗರದ ಹೊಸ ಬಸ್ ನಿಲ್ದಾಣದ ಮೇಲೆ ದಾಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ