ಓಸಿ ಮತ್ತು ಇಸ್ಪೀಟ್ ಆಡಲು ಜನರನ್ನು ಪ್ರೇರೇಪಿಸುತ್ತಿದ್ದ ಆರೋಪಿಯನ್ನು ಒಂದು ವರ್ಷದವರೆಗೆ ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡಿ ಡಿಸಿಪಿ ರವೀಂದ್ರ ಗಡಾದಿ ಆದೇಶ ಹೊರಡಿಸಿದ್ದಾರೆ.
ಅನಗೋಳದ ನಿವಾಸಿ ಪರಶುರಾಮ್ ಬಾಬು ಮೇತ್ರಿ ಗಡಿಪಾರು ಶಿಕ್ಷೆಗೆ ಒಳಗಾಗಿರುವ ಆರೋಪಿ. ಸೆಪ್ಟೆಂಬರ್ 19 2022ರಿಂದ ಸೆಪ್ಟೆಂಬರ್ 18 2023ರವರೆಗೆ 1 ವರ್ಷ ಕಾಲ ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡಿ ಡಿಸಿಪಿ ರವೀಂದ್ರ ಗಡಾದಿ ಆದೇಶ ಹೊರಡಿಸಿದ್ದಾರೆ.
ಈ ಆರೋಪಿ ವಿರುದ್ಧ ಒಟ್ಟು 7 ಪ್ರಕರಣಗಳು ದಾಖಲಾಗಿದ್ದವು. 4 ಕೇಸ್ಗಳಲ್ಲಿ ನ್ಯಾಯಾಲಯದಲ್ಲಿ ಶಿಕ್ಷೆಗೆ ಒಳಗಾಗಿದ್ದರೂ ಸಹ ಓಸಿ, ಇಸ್ಪೀಟ್ ಆಡಲು ಜನರನ್ನು ಪ್ರೇರಪಿಸುವುದನ್ನು ಮುಂದುವರಿಸಿದ್ದ. ಈತನಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ರೂ ಕಾನೂನು ಬಾಹಿರ ಚಟುವಟಿಕೆಗಳನ್ನು ಮುಂದುವರಿಸಿದ್ದ. ಹೀಗಾಗಿ ಒಂದು ವರ್ಷ ಈತನಿಗೆ ಗಡಿಪಾರು ಮಾಡಲಾಗಿದ್ದು.