ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ಭಾರಿ ಮಳೆಗೆ ಹಾನಿಗೆ ಒಳಗಾಗಿರುವ ಈ ಎರಡೂ ಮನೆಗಳು ಯಾವಾಗ ಬೇಕಾದ್ರೂ ಬೀಳಬಹುದು. ಜೀವ ಭಯದಲ್ಲಿಯೇ ಕುಟುಂಬಸ್ಥರು ಜೀವನ ಸಾಗಿಸುತ್ತಿದ್ದಾರೆ. ದಯವಿಟ್ಟು ನಮಗೆ ಮನೆ ಕಟ್ಟಿಸಿ ಕೊಡಿ ಎಂದು ಈ ನೊಂದ ಸಂತ್ರಸ್ತ ಮಹಿಳೆಯರು ಅಂಗಲಾಚುತ್ತಿದ್ದಾರೆ.
ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದೆ. ಬದುಕುವುದೇ ದುಸ್ಥರವಾಗಿ ಬಿಟ್ಟಿದೆ. ಮಳೆ ನೀರು ಮನೆ ಒಳಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ನೀರಿನಿಂದ ನೆನೆದಿರುವ ಈ ಮನೆಯ ಗೋಡೆಗಳು ಯಾವ ಕ್ಷಣದಲ್ಲಿ ಬೇಕಾದ್ರೂ ಧರೆಗೆ ಉರುಳಬಹುದು. ಹೌದು ನೀವು ನೋಡುತ್ತಿರುವ ಈ ದೃಶ್ಯ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ವೈಜನಾಥ ಗಲ್ಲಿಯಲ್ಲಿನ ದೃಶ್ಯಗಳನ್ನು. ದೇಮವ್ವ ವಿಠ್ಠಲ ಸಾಯಬಣ್ಣವರ ಎಂಬ ವೃದ್ಧ ಮಹಿಳೆಯ ಮನೆ ನೋಡಿದ್ರೆ
ಮನೆಯ ಒಂದು ಕಡೆಯ ಗೋಡೆ ಈಗಾಗಲೇ ಕುಸಿದು ಬಿದ್ದಿದೆ. ಅಂತಹ ಮನೆಯಲ್ಲಿಯೇ ಈ ಅಜ್ಜಿ ವಾಸ ಮಾಡುತ್ತಿದ್ದಾಳೆ. ಇನ್ನು ಮಂಗಲ ದೇವಪ್ಪ ಪಾಟೀಲ್ ಎಂಬುವವರ ಮನೆ ಕೂಡ ಇದೇ ಪರಿಸ್ಥಿತಿಯಲ್ಲಿದೆ. ಮಳೆ ನೀರು ಮನೆಯೊಳಗೆ ನುಗ್ಗಿದ್ದು, ಮನೆಯಿಂದ ನೀರನ್ನು ಹೊರ ಹಾಕಲು ಹರಸಾಹಸ ಪಡುತ್ತಿದ್ದಾರೆ. ಈ ಮನೆಯು ಕೂಡ ಯಾವ ಕ್ಷಣದಲ್ಲಿ ಬೇಕಾದ್ರೂ ಕುಸಿಯಬಹದು.